ಕವಿತಾಳ: 58 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮ್ ಮುಖಂಡನಿಂದ ಊಟದ ವ್ಯವಸ್ಥೆ
1306 views
ರಾಯಚೂರು ವಿಡಿಯೋಗಳಿಗೆ ಚಂದಾದಾರರಾಗಿಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವ ಮಾತುಗಳನ್ನು ನಾವು ಕೇಳಿದ್ದೇವೆ. ಈ ದೃಶ್ಯಗಳನ್ನು ಕಂಡರೆ, ಆ ಮಾತು ನಿಜವೆನಿಸುತ್ತದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ತಮ್ಮ ಮನೆಯಲ್ಲಿ ಪ್ರಸಾದ ವ್ಯವಸ್ಥೆಯ ಮಾಡುವ ಮೂಲಕ ಭಾವ್ಯಕೈತೆಯ ಸಂದೇಶವನ್ನು ಸೇರಿದ್ದಾರೆ.
ಬಿಸಿಲೂರು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣವು ಭಾವ್ಯಕ್ಯೆತೆಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ನಿವಾಸಿಯಾಗಿರುವ ಮುಸ್ಲಿಂ ಸಮುದಾಯದ ಮುಖಂಡರಾದ ಬಿ.ಎ.ಕರೀಂ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರು, ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದವರಿಗೆ ತಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಕವಿತಾಳ ಸೇರಿದಂತೆ ಸುತ್ತಲಿನ ಗ್ರಾಮದ ಅಯ್ಯಪ್ಪನ ಭಕ್ತರು ಮಾಲೆ ಧರಿಸಿದ್ದು, ಸುಮಾರು 58 ಮಾಲಾಧಾರಿಗಳು ಇಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ.
ಕರೀಂ ಅವರ ಮನೆಯಲ್ಲಿ ಭೋಜನವನ್ನು ತಯಾರಿಸಿ, ಅಯ್ಯಪ್ಪ ಸ್ವಾಮಿ ಮಾಲಾಧರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದು ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಸರ್ವ ಧರ್ಮಗಳನ್ನು ಪ್ರೀತಿಸುವ, ಗೌರಿಸುವ ಸೌಹಾರ್ದತೆಯ ಸಂದೇಶವನ್ನೂ ಸಮಾಜಕ್ಕೆ ಸಾರಿದ್ದಾರೆ. ತಮ್ಮ ತಮ್ಮ ಧರ್ಮಗಳ ಆಚರಣೆಯ ಜೊತೆಗೆ ಇತರೆ ಧರ್ಮಗಳ ಆಚರಣೆಗಳಲ್ಲಿಯೂ ಭಾಗಿಯಾಗುವ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ಸಾಧ್ಯ ಎಂಬ ಸಂದೇಶ ಸಾರಿದಂತಿದೆ.
ಬಿ.ಎ.ಕರೀಂ ಅಯ್ಯಪ್ಪ ಮಾಲಾಧರಿಗಳಿಗೆ ಎರಡನೇ ಬಾರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿದ್ದು, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಸೇರಿದಂತೆ ವಿವಿಧ ಜಯಂತಿಗಳನ್ನು ಇವರ ಆಚರಿಸುತ್ತಾರೆ. ಕವಿತಾಳ ಸೇರಿದಂತೆ ಇತರೆ ಕಡೆಗಳಲ್ಲಿ ಕೋಮುಸೌಹರ್ದತೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಮ್ಮ ಧರ್ಮವನ್ನು ಗೌರಿವಿಸಿ, ಪ್ರೀತಿಸುವುದರ ಜೊತೆಗೆ ಪರಧರ್ಮದವರನ್ನು ಪ್ರೀತಿಸಬೇಕು, ಸಮಾಜದಲ್ಲಿ ಸೌರ್ಹದತೆ ಸಾರಬೇಕು ಎನ್ನುತ್ತಾರೆ ಕರೀಂ.
ಬಿಸಿಲೂರು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣವು ಭಾವ್ಯಕ್ಯೆತೆಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ನಿವಾಸಿಯಾಗಿರುವ ಮುಸ್ಲಿಂ ಸಮುದಾಯದ ಮುಖಂಡರಾದ ಬಿ.ಎ.ಕರೀಂ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರು, ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದವರಿಗೆ ತಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಕವಿತಾಳ ಸೇರಿದಂತೆ ಸುತ್ತಲಿನ ಗ್ರಾಮದ ಅಯ್ಯಪ್ಪನ ಭಕ್ತರು ಮಾಲೆ ಧರಿಸಿದ್ದು, ಸುಮಾರು 58 ಮಾಲಾಧಾರಿಗಳು ಇಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ.
ಕರೀಂ ಅವರ ಮನೆಯಲ್ಲಿ ಭೋಜನವನ್ನು ತಯಾರಿಸಿ, ಅಯ್ಯಪ್ಪ ಸ್ವಾಮಿ ಮಾಲಾಧರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದು ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಸರ್ವ ಧರ್ಮಗಳನ್ನು ಪ್ರೀತಿಸುವ, ಗೌರಿಸುವ ಸೌಹಾರ್ದತೆಯ ಸಂದೇಶವನ್ನೂ ಸಮಾಜಕ್ಕೆ ಸಾರಿದ್ದಾರೆ. ತಮ್ಮ ತಮ್ಮ ಧರ್ಮಗಳ ಆಚರಣೆಯ ಜೊತೆಗೆ ಇತರೆ ಧರ್ಮಗಳ ಆಚರಣೆಗಳಲ್ಲಿಯೂ ಭಾಗಿಯಾಗುವ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ಸಾಧ್ಯ ಎಂಬ ಸಂದೇಶ ಸಾರಿದಂತಿದೆ.
ಬಿ.ಎ.ಕರೀಂ ಅಯ್ಯಪ್ಪ ಮಾಲಾಧರಿಗಳಿಗೆ ಎರಡನೇ ಬಾರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿದ್ದು, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಸೇರಿದಂತೆ ವಿವಿಧ ಜಯಂತಿಗಳನ್ನು ಇವರ ಆಚರಿಸುತ್ತಾರೆ. ಕವಿತಾಳ ಸೇರಿದಂತೆ ಇತರೆ ಕಡೆಗಳಲ್ಲಿ ಕೋಮುಸೌಹರ್ದತೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಮ್ಮ ಧರ್ಮವನ್ನು ಗೌರಿವಿಸಿ, ಪ್ರೀತಿಸುವುದರ ಜೊತೆಗೆ ಪರಧರ್ಮದವರನ್ನು ಪ್ರೀತಿಸಬೇಕು, ಸಮಾಜದಲ್ಲಿ ಸೌರ್ಹದತೆ ಸಾರಬೇಕು ಎನ್ನುತ್ತಾರೆ ಕರೀಂ.