Mantralaya: ಶ್ರೀ ರಾಘವೇಂದ್ರ ಸ್ವಾಮಿಗಳ 428ನೇ ಹುಟ್ಟುಹಬ್ಬದ ಅಂಗವಾಗಿ ಮಂತ್ರಾಲಯದಲ್ಲಿ ವರ್ಧಂತಿ ಉತ್ಸವ!
1002 views
ರಾಯಚೂರು ವಿಡಿಯೋಗಳಿಗೆ ಚಂದಾದಾರರಾಗಿರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 428ನೇ ಹುಟ್ಟುಹಬ್ಬದ ಅಂಗವಾಗಿ ಮಂತ್ರಾಲಯದಲ್ಲಿ ವರ್ಧಂತಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೇರವೇರಿತು.. ವರ್ಧಂತಿ ಉತ್ಸವವನ್ನು ಕಣ್ಮುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬಂದಿತ್ತು..
ಗುರುವೈಭೋತ್ಸವದ ಕೊನೆಯ ದಿನವಾದ ಭಾನುವಾರ ಶ್ರೀ ರಾಘವೇಂದ್ರ ಸ್ಚಾಮಿಗಳ ಮೂಲ ಬೃಂದಾವನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜನ್ಮದಿನದ ಅಂಗವಾಗಿ ಮೂಲ ಬೃಂದಾವನಕ್ಕೆ ಶ್ರೀ ಮಠದ ಶ್ರೀ ಸುಭುದೇಂಧ್ರ ತೀರ್ಥರು ಪಂಚಾಮೃತ ಅಭಿಷೇಕ ನೇರವೇರಿಸಿದರು. ನಂತರ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಪಲ್ಲಕ್ಕಿ ನೇರವೇರಿತು.
ಟಿಟಿಡಿ ಅಧಿಕಾರಿಗಳು ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ತೆಗೆದುಕೊಂಡು ಬಂದಿದ್ದು, ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಿದರು. ಶ್ರೀ ಸುಬುಧೇಂದ್ರ ತೀರ್ಥರಿಗೆ ಶೇಷ ವಸ್ತ್ರ ಹಸ್ತಾಂತರಿಸಿದರು. ಹರಿವಾಣದಲ್ಲಿ ಇರಿಸಿದ್ದ ಶೇಷವಸ್ತ್ರವನ್ನು ಶಿರದ ಮೇಲಿಟ್ಟುಕೊಂಡ ಶ್ರೀಗಳು ಆನಂತರ ರಾಯರ ಸನ್ನಿಧಿಗೆ ಸಮರ್ಪಿಸಿದರು.
ತಮಿಳುನಾಡು ಮೂಲದ ನೂರಾರು ಸಂಗೀತಗಾರರು ನಾದಹಾರ ಕಾರ್ಯಕ್ರಮ ನಡೆಸಿದರು. ನಾದಹಾರ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಸಾಧಕರಿಗೆ, ಗಣ್ಯರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಗುತ್ತೆ.. ಒಟ್ಟಿನಲ್ಲಿ ರಾಘವೇಂದ್ರ ಸ್ವಾಮಿಗಳ ಹುಟ್ಟುಹಬ್ಬದ ಅಂಗವಾಗಿ ಇಡೀ ಮಂತ್ರಾಲಯದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.
ಗುರುವೈಭೋತ್ಸವದ ಕೊನೆಯ ದಿನವಾದ ಭಾನುವಾರ ಶ್ರೀ ರಾಘವೇಂದ್ರ ಸ್ಚಾಮಿಗಳ ಮೂಲ ಬೃಂದಾವನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜನ್ಮದಿನದ ಅಂಗವಾಗಿ ಮೂಲ ಬೃಂದಾವನಕ್ಕೆ ಶ್ರೀ ಮಠದ ಶ್ರೀ ಸುಭುದೇಂಧ್ರ ತೀರ್ಥರು ಪಂಚಾಮೃತ ಅಭಿಷೇಕ ನೇರವೇರಿಸಿದರು. ನಂತರ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಪಲ್ಲಕ್ಕಿ ನೇರವೇರಿತು.
ಟಿಟಿಡಿ ಅಧಿಕಾರಿಗಳು ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ತೆಗೆದುಕೊಂಡು ಬಂದಿದ್ದು, ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಿದರು. ಶ್ರೀ ಸುಬುಧೇಂದ್ರ ತೀರ್ಥರಿಗೆ ಶೇಷ ವಸ್ತ್ರ ಹಸ್ತಾಂತರಿಸಿದರು. ಹರಿವಾಣದಲ್ಲಿ ಇರಿಸಿದ್ದ ಶೇಷವಸ್ತ್ರವನ್ನು ಶಿರದ ಮೇಲಿಟ್ಟುಕೊಂಡ ಶ್ರೀಗಳು ಆನಂತರ ರಾಯರ ಸನ್ನಿಧಿಗೆ ಸಮರ್ಪಿಸಿದರು.
ತಮಿಳುನಾಡು ಮೂಲದ ನೂರಾರು ಸಂಗೀತಗಾರರು ನಾದಹಾರ ಕಾರ್ಯಕ್ರಮ ನಡೆಸಿದರು. ನಾದಹಾರ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಸಾಧಕರಿಗೆ, ಗಣ್ಯರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಗುತ್ತೆ.. ಒಟ್ಟಿನಲ್ಲಿ ರಾಘವೇಂದ್ರ ಸ್ವಾಮಿಗಳ ಹುಟ್ಟುಹಬ್ಬದ ಅಂಗವಾಗಿ ಇಡೀ ಮಂತ್ರಾಲಯದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.