ಶಾಸಕ ನರೇಂದ್ರ ಸ್ವಾಮಿ ಕಾರು ತಡೆದ ಟೋಲ್ ಸಿಬ್ಬಂದಿ, ಸ್ಥಳಕ್ಕೆ ಪೊಲೀಸ್ ಬರುವಂತೆ ಪಟ್ಟು
1063 views
ರಾಮನಗರ ವಿಡಿಯೋಗಳಿಗೆ ಚಂದಾದಾರರಾಗಿರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಕಟ್ಟುವ ವಿಚಾರಕ್ಕೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗುವಾಗ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಬಳಿ ಭಾನುವಾರ ಈ ಘಟನೆ ನಡೆದಿದೆ.
ಟೋಲ್ ಸಿಬ್ಬಂದಿಯು ಶಾಸಕರ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ರೂ, ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಯ ವಿರುದ್ಧ ಶಾಸಕರು ಹರಿಹಾಯ್ದಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಂತೆ ಅವರು ಪಟ್ಟು ಹಿಡಿದಿದ್ದಾರೆ. ಇದರಿಂದ ಸಿಬ್ಬಂದಿಯೊಬ್ಬರು ಕೆರಳಿ, ''ಯಾವ ಪೊಲೀಸ್ ಬೇಕಾದ್ರೂ ಬರಲಿ, ನಾವು ನೋಡಿರದ ಪೊಲೀಸಾ...ನಿಮ್ಮನ್ನು ಫ್ರೀಯಾಗಿ ಬಿಡ್ತಿದ್ದೀವಿಮ ಹೋಗಿ'' ಎಂದಿದ್ದಾರೆ.
ಟೋಲ್ ಸಿಬ್ಬಂದಿಯು ಶಾಸಕರ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ರೂ, ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಯ ವಿರುದ್ಧ ಶಾಸಕರು ಹರಿಹಾಯ್ದಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಂತೆ ಅವರು ಪಟ್ಟು ಹಿಡಿದಿದ್ದಾರೆ. ಇದರಿಂದ ಸಿಬ್ಬಂದಿಯೊಬ್ಬರು ಕೆರಳಿ, ''ಯಾವ ಪೊಲೀಸ್ ಬೇಕಾದ್ರೂ ಬರಲಿ, ನಾವು ನೋಡಿರದ ಪೊಲೀಸಾ...ನಿಮ್ಮನ್ನು ಫ್ರೀಯಾಗಿ ಬಿಡ್ತಿದ್ದೀವಿಮ ಹೋಗಿ'' ಎಂದಿದ್ದಾರೆ.