ರಾಮನಗರ ಜಿಲ್ಲೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ..!<b>ರಾಮನಗರ: </b> ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ರಾಮನಗರದಲ್ಲಿ ಇತ್ತೀಚೆಗೆ ಕಾಡಾನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ, ಇದೀಗ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಸ್ಎಂ ಹಳ್ಳಿ ಕೆರೆಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಕಾಡಿನಿಂದ ಊರಿನ ಕೆರೆಗೆ ಬಂದು ಸ್ವಲ್ಪ ಹೊತ್ತು ಕೆರೆಯಲ್ಲಿ ಮಿಂದೆದ್ದಿದೆ. ಗಜರಾಜನ ಜಲಕ್ರೀಡೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಒಂಟಿ ಸಲಗ ಪ್ರತ್ಯಕ್ಷದಿಂದ ಜನರಲ್ಲಿ ಆತಂಕ ಜಾಸ್ತಿಯಾಗಿದೆ.