ತಲೆ ಬೋಳಿಸಿಕೊಂಡು ಸ್ಟಾಲಿನ್ 11ನೇ ದಿನದ ಕಾರ್ಯ, ಸಂಗಮದಲ್ಲಿ ಅಸ್ಥಿ ವಿಸರ್ಜನೆ
1257 views
ರಾಮನಗರ ವಿಡಿಯೋಗಳಿಗೆ ಚಂದಾದಾರರಾಗಿರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಲವು ಕಡೆ ಪ್ರತಿಭಟನೆಗಳು ಮುಂದುವರಿದಿವೆ. ಕನಕಪುರದಲ್ಲಿ ಭಾನುವಾರ ಕನ್ನಡಪರ ಹೋರಾಟಗಾರರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹನ್ನೊಂದನೆಯ ದಿನದ ತಿಥಿ ಮಾಡಿದ್ದಾರೆ.
ಕಾವೇರಿ ನೀರಿಗಾಗಿ ವಿನೂತನ ಹೋರಾಟ ಮುಂದುವರಿದಿದೆ. ಹನ್ನೊಂದು ದಿನಗಳ ಹಿಂದೆ ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಚಳವಳಿ ನಡೆಸಿ, ಸಿಎಂ ಸ್ಟಾಲಿನ್ ಅವರ ತಿಥಿ ಕಾರ್ಯ ಮಾಡಿದ್ದರು. ಈಗ ಅವರ ಅಸ್ಥಿಯನ್ನು ವಿಸರ್ಜಿಸುವ ಕಾರ್ಯ ನಡೆಸಿದ್ದಾರೆ.
ಕನಕಪುರದ ಸಂಗಮದಲ್ಲಿ ಹೋರಾಟಗಾರ ಕೃಷ್ಣೇಗೌಡ ಎಂಬುವವರು ತಲೆ ಬೋಳಿಸಿಕೊಂಡು ಸ್ಟಾಲಿನ್ ಅವರ ಅಸ್ಥಿಬಿಟ್ಟರು. ಹಿಂದೂ ಸಂಪ್ರದಾಯದಂತೆ ಅಸ್ಥಿ ಬಿಟ್ಟು ತಮಿಳುನಾಡಿನ ಸಿಎಂ ಸ್ಟಾಲಿನ್ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 'ನಮ್ಮ ಪಾಲಿಗೆ ಸ್ಟಾಲಿನ್ ಸತ್ತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ವಿನೂತನ ಹೋರಾಟ ಮುಂದುವರಿದಿದೆ. ಹನ್ನೊಂದು ದಿನಗಳ ಹಿಂದೆ ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಚಳವಳಿ ನಡೆಸಿ, ಸಿಎಂ ಸ್ಟಾಲಿನ್ ಅವರ ತಿಥಿ ಕಾರ್ಯ ಮಾಡಿದ್ದರು. ಈಗ ಅವರ ಅಸ್ಥಿಯನ್ನು ವಿಸರ್ಜಿಸುವ ಕಾರ್ಯ ನಡೆಸಿದ್ದಾರೆ.
ಕನಕಪುರದ ಸಂಗಮದಲ್ಲಿ ಹೋರಾಟಗಾರ ಕೃಷ್ಣೇಗೌಡ ಎಂಬುವವರು ತಲೆ ಬೋಳಿಸಿಕೊಂಡು ಸ್ಟಾಲಿನ್ ಅವರ ಅಸ್ಥಿಬಿಟ್ಟರು. ಹಿಂದೂ ಸಂಪ್ರದಾಯದಂತೆ ಅಸ್ಥಿ ಬಿಟ್ಟು ತಮಿಳುನಾಡಿನ ಸಿಎಂ ಸ್ಟಾಲಿನ್ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 'ನಮ್ಮ ಪಾಲಿಗೆ ಸ್ಟಾಲಿನ್ ಸತ್ತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.