ಮಲೆನಾಡು ಜನಾಕ್ರೋಶ ನಡೆಸಿ ಗೆದ್ದ ನಾಯಕರಿಗೆ ಶರಾವತಿ ಭೂ ಹಕ್ಕು ಬಿಸಿ ತುಪ್ಪ!
1099 views
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ: 6-7 ದಶಕಗಳ ಹಿಂದೆ ಶರಾವತಿ ಜಲವಿದ್ಯುತ್ ಯೋಜನೆ ಆರಂಭಗೊಂಡಾಗ ಹಿನ್ನೀರಲ್ಲಿ ಮುಳಗಿದ ಕುಟುಂಬಗಳನ್ನ ಅಮಾನವೀಯವಾಗಿ ಕಾಡುಗಳಲ್ಲಿ ಬಿಟ್ಟು ತಾತ್ಕಾಲಿಕ ನೆಲೆ ಮಾಡಿದ್ದ ಸರ್ಕಾರಗಳೀಗ ಅರಣ್ಯ ಕಾನೂನಿನ ಅಡಗತ್ತರಿಯಲ್ಲಿ ಸಿಲುಕಿವೆ. ಕೇಂದ್ರ- ರಾಜ್ಯ ಸರ್ಕಾರಗಳು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಿದೆ. ಭೂ ಹಕ್ಕು ನೀಡುವ ಜವಾಬ್ದಾರಿಯಿಂದ ಜಾರಿಕೊಳ್ಳುವಲ್ಲಿ ನಾಯಕರು ಮುಂದಾಗಿದ್ದಾರೆ.
ಬಸವರಾಜ್ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನ ಚಾಣಾಕ್ಷತನದಿಂದ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವಾಲಯ ರಾಜ್ಯಕ್ಕೆ ಕೆಲವು ಸಲಹೆಗಳೊಂದಿಗೆ ವಾಪಸ್ ಕಳಿಸಿದೆ. ಈ ಪತ್ರವೀಗ ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಶರಾವತಿ ಸಂತ್ರಸ್ತರಿಗೆ ಭೂಮಿ ಸಿಗದು ಎಂಬ ಊಹಾಪೋಹಗಳೆದ್ದಿವೆ.
ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಡಬಡಾಯಿಸಿದರು. ಸಭೆಯಲ್ಲಿ ಜೊತೆಗೆ ಇದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರಿಗೆ ಓದಿ ಹೇಳಲು ತಿಳಿಸಿದರು.
ಮುಂದಿನ ಸಭೆಗೆ ಅರಣ್ಯ ಅಧಿಕಾರಿಗಳೇ ಶಿವಮೊಗ್ಗಕ್ಕೆ ಬರುತ್ತಾರೆ. ಆ ನಂಬಿಕೆ ನನಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಅರಣ್ಯ ಅಧಿಕಾರಿಗಳಿಗೆ ಖುದ್ದಾಗಿ ಹೇಳಿದ್ದಾರೆ. ಕಂದಾಯ ಸಚಿವ ಕೃಷ್ಣೇ ಬೈರೇಗೌಡ ಕೂಡ ಬೇಕು. ಹೀಗೆ ಎಲ್ಲರೂ ಸೇರಿ ಒಂದು ಸಭೆ ಮಾಡಿ, ಇದಕ್ಕೆ ಇತಿಶ್ರೀ ಹಾಡುತ್ತೇವೆ. ಈಗಲೂ ಇದು ನ್ಯಾಯಾಲಯದಲ್ಲಿದೆ. ಯಾರದ್ದೆಲ್ಲಾ ರಿಜೆಕ್ಟ್ ಆಗಿದೆ ಅವರು ಈಗಲೂ ಅಫೀಲ್ ಮಾಡಲು ಅವಕಾಶವಿದೆ. ಯಾರೂ ಹೆದರುವುದು ಬೇಡ, ಧೈರ್ಯವಾಗಿ ಎದುರಿಸೋಣ. ಮಾಧ್ಯಮದವರು ಇದನ್ನ ಜನರಿಗೆ ತಲುಪಿಸಬೇಕು. ಭೂಗಳ್ಳರು ಎಂದು ಪ್ರಕರಣ ದಾಖಲಾಗುತ್ತಿತ್ತು. ಆದರೆ ಆ ಕಾನೂನನ್ನ ರಾಜ್ಯ ಸರ್ಕಾರ ಹಿಂದೆ ಪಡೆದುಕೊಂಡಿದೆ. ಇನ್ನೂ ತೀರ್ಪು ಬಂದಿಲ್ಲ, ವಿಚಲಿತ ಆಗಬಾರದು ಎಂದರು.
ಬಸವರಾಜ್ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನ ಚಾಣಾಕ್ಷತನದಿಂದ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವಾಲಯ ರಾಜ್ಯಕ್ಕೆ ಕೆಲವು ಸಲಹೆಗಳೊಂದಿಗೆ ವಾಪಸ್ ಕಳಿಸಿದೆ. ಈ ಪತ್ರವೀಗ ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಶರಾವತಿ ಸಂತ್ರಸ್ತರಿಗೆ ಭೂಮಿ ಸಿಗದು ಎಂಬ ಊಹಾಪೋಹಗಳೆದ್ದಿವೆ.
ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಡಬಡಾಯಿಸಿದರು. ಸಭೆಯಲ್ಲಿ ಜೊತೆಗೆ ಇದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರಿಗೆ ಓದಿ ಹೇಳಲು ತಿಳಿಸಿದರು.
ಮುಂದಿನ ಸಭೆಗೆ ಅರಣ್ಯ ಅಧಿಕಾರಿಗಳೇ ಶಿವಮೊಗ್ಗಕ್ಕೆ ಬರುತ್ತಾರೆ. ಆ ನಂಬಿಕೆ ನನಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಅರಣ್ಯ ಅಧಿಕಾರಿಗಳಿಗೆ ಖುದ್ದಾಗಿ ಹೇಳಿದ್ದಾರೆ. ಕಂದಾಯ ಸಚಿವ ಕೃಷ್ಣೇ ಬೈರೇಗೌಡ ಕೂಡ ಬೇಕು. ಹೀಗೆ ಎಲ್ಲರೂ ಸೇರಿ ಒಂದು ಸಭೆ ಮಾಡಿ, ಇದಕ್ಕೆ ಇತಿಶ್ರೀ ಹಾಡುತ್ತೇವೆ. ಈಗಲೂ ಇದು ನ್ಯಾಯಾಲಯದಲ್ಲಿದೆ. ಯಾರದ್ದೆಲ್ಲಾ ರಿಜೆಕ್ಟ್ ಆಗಿದೆ ಅವರು ಈಗಲೂ ಅಫೀಲ್ ಮಾಡಲು ಅವಕಾಶವಿದೆ. ಯಾರೂ ಹೆದರುವುದು ಬೇಡ, ಧೈರ್ಯವಾಗಿ ಎದುರಿಸೋಣ. ಮಾಧ್ಯಮದವರು ಇದನ್ನ ಜನರಿಗೆ ತಲುಪಿಸಬೇಕು. ಭೂಗಳ್ಳರು ಎಂದು ಪ್ರಕರಣ ದಾಖಲಾಗುತ್ತಿತ್ತು. ಆದರೆ ಆ ಕಾನೂನನ್ನ ರಾಜ್ಯ ಸರ್ಕಾರ ಹಿಂದೆ ಪಡೆದುಕೊಂಡಿದೆ. ಇನ್ನೂ ತೀರ್ಪು ಬಂದಿಲ್ಲ, ವಿಚಲಿತ ಆಗಬಾರದು ಎಂದರು.