ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡಗೆ ಇಡಿ ಶಾಕ್! ತೀರ್ಥಹಳ್ಳಿ, ಶಿವಮೊಗ್ಗ ಸೇರಿ ಹಲವೆಡೆ ದಾಳಿ!
1124 views
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ : ತೀರ್ಥಹಳ್ಳಿ ಮೂಲದ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗುರುವಾರ ಮುಂಜಾನೆಯಿಂದಲೇ ಬೆಂಗಳೂರಿನಿಂದ ಭದ್ರತಾ ಸಿಬ್ಬಂದಿಯೊಂದಿಗೆ ಬಂದ ಅಧಿಕಾರಿಗಳ ತಂಡ ಮಂಜುನಾಥ್ ಗೌಡ ಅವರ ತೀರ್ಥಹಳ್ಳಿ, ಶಿವಮೊಗ್ಗ ನಿವಾಸ ಹಾಗೂ ಅವರ ಸಂಬಂಧಿಕರ ಮನೆಗಳಲ್ಲಿ ಪರಿಶೀಲನೆ ಆರಂಭಿಸಿದ್ದಾರೆ.
ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕರೂ ಆಗಿರುವ ಮಂಜುನಾಥ್ ಗೌಡಗೆ ತೀರ್ಥಹಳ್ಳಿಯ ಬೆಟಮಕ್ಕಿ ಹಾಗೂ ಕಲ್ಲುಕೊಪ್ಪದಲ್ಲಿ ಮನೆಗಳಿವೆ. ಶಿವಮೊಗ್ಗ ನಗರ ಶರಾವತಿ ನಗರದಲ್ಲಿ ಅವರ ನಾದಿನಿ ಉಷಾ ಅವರ ಮನೆಯಿದೆ. ಈ ಮನೆಯಲ್ಲೂ ಕೂಡ ಪರಿಶೀಲನೆ ನಡೆಯುತ್ತಿದೆ. ಮಂಜುನಾಥ್ ಗೌಡ ಕಳಂಕ ಕಳಚಿಕೊಂಡು ಎರಡನೇ ಬಾರಿಗೆ, ಕೆಲ ದಿನಗಳ ಹಿಂದೆಯಷ್ಟೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆರ್ ಎಂ ಮಂಜುನಾಥ್ ಗೌಡ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ತೀರ್ಥಹಳ್ಳಿಯಲ್ಲಿ ತನ್ನದೇ ಆದ ಅಭಿಮಾನಿಗಳ ಹೊಂದಿದ್ದಾರೆ. ಅವರಿಗೆ ಗುರುವಾರವೇ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೇವಲ ತೀರ್ಥಹಳ್ಳಿಯಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಬಿಜೆಪಿ ಕಾರ್ಯಕ್ರಮ ವಿಪಕ್ಷಗಳ ಮೇಲೆ ನಿರಂತರವಾಗಿದೆ. ಜಾರಿ ನಿರ್ದೇಶನಾಲಯದ ದಾಳಿಯೂ ಕೂಡ ಅದರ ಭಾಗವಷ್ಟೇ. ಕೇಂದ್ರದಲ್ಲಿರುವ ಬಿಜೆಪಿ ತನ್ನ ಮೈತ್ರಿಕೂಟಕ್ಕೆ ಸೇರದ ನಾಯಕರ ಮೇಲೂ ಈ ಅಸ್ತ್ರ ಪ್ರಯೋಗಿಸುತ್ತಿದೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಕೂಡ ಉದಾಹರಣೆ. ಇನ್ನೂ ಪಶ್ಚಿಮ ಬಂಗಾಳದಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ ಎಂದು ಕಿಮ್ಮನೆ ಹೇಳಿದರು.
ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕರೂ ಆಗಿರುವ ಮಂಜುನಾಥ್ ಗೌಡಗೆ ತೀರ್ಥಹಳ್ಳಿಯ ಬೆಟಮಕ್ಕಿ ಹಾಗೂ ಕಲ್ಲುಕೊಪ್ಪದಲ್ಲಿ ಮನೆಗಳಿವೆ. ಶಿವಮೊಗ್ಗ ನಗರ ಶರಾವತಿ ನಗರದಲ್ಲಿ ಅವರ ನಾದಿನಿ ಉಷಾ ಅವರ ಮನೆಯಿದೆ. ಈ ಮನೆಯಲ್ಲೂ ಕೂಡ ಪರಿಶೀಲನೆ ನಡೆಯುತ್ತಿದೆ. ಮಂಜುನಾಥ್ ಗೌಡ ಕಳಂಕ ಕಳಚಿಕೊಂಡು ಎರಡನೇ ಬಾರಿಗೆ, ಕೆಲ ದಿನಗಳ ಹಿಂದೆಯಷ್ಟೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆರ್ ಎಂ ಮಂಜುನಾಥ್ ಗೌಡ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ತೀರ್ಥಹಳ್ಳಿಯಲ್ಲಿ ತನ್ನದೇ ಆದ ಅಭಿಮಾನಿಗಳ ಹೊಂದಿದ್ದಾರೆ. ಅವರಿಗೆ ಗುರುವಾರವೇ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೇವಲ ತೀರ್ಥಹಳ್ಳಿಯಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಬಿಜೆಪಿ ಕಾರ್ಯಕ್ರಮ ವಿಪಕ್ಷಗಳ ಮೇಲೆ ನಿರಂತರವಾಗಿದೆ. ಜಾರಿ ನಿರ್ದೇಶನಾಲಯದ ದಾಳಿಯೂ ಕೂಡ ಅದರ ಭಾಗವಷ್ಟೇ. ಕೇಂದ್ರದಲ್ಲಿರುವ ಬಿಜೆಪಿ ತನ್ನ ಮೈತ್ರಿಕೂಟಕ್ಕೆ ಸೇರದ ನಾಯಕರ ಮೇಲೂ ಈ ಅಸ್ತ್ರ ಪ್ರಯೋಗಿಸುತ್ತಿದೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಕೂಡ ಉದಾಹರಣೆ. ಇನ್ನೂ ಪಶ್ಚಿಮ ಬಂಗಾಳದಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ ಎಂದು ಕಿಮ್ಮನೆ ಹೇಳಿದರು.