ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮವೋ ಸಂಭ್ರಮ ; ಪ್ರವಾಸಿಗರು ಫುಲ್ ಖುಷ್
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿ
ಶಿವಮೊಗ್ಗ: ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ, ಶಿವಮೊಗ್ಗದಿಂದ ಇಪ್ಪತ್ತು ಕಿಲೋಮೀಟರ್ ದೂರದ ತುಂಗಾ ನದಿ ತೀರದಲ್ಲಿರುವ ಸಕ್ರೆಬೈಲು ಆನೆಬಿಡಾರದಲ್ಲಿ ಇಂದು ಸಂಭ್ರಮ ಕಳೆಗಟ್ಟಿತ್ತು. ಬಿಡಾರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ತಳಿರು-ತೋರಣಗಳಿಂದ ಅಲಂಕೃತ ಬಿಡಾರದಲ್ಲಿ ಚಿತ್ತಾರ, ಚಂದನೆ ಹೊದಿಕೆಗಳು, ಹೂ-ಹಾರಗಳಿಂದ ಅಲಂಕಾರ ಮಾಡಿಕೊಂಡ ಆನೆಗಳು ಕಂಗೊಳಿಸುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಶಿಸ್ತಿನಿಂದ, ಉತ್ಸಾಹದಿಂದ ಪಾಲ್ಗೊಂಡಿದ್ದರು.
ರಾಜ್ಯದ ಶೇಷ್ಠ ಆನೆಬಿಡಾರ ಎಂದು ಖ್ಯಾತಿ ಪಡೆದಿರುವ ಸಕ್ರೆಬೈಲು ಪ್ರವಾಸಿಗರಿಗೂ ಅಚ್ಚುಮೆಚ್ಚು. ನೂರಾರು ಪ್ರವಾಸಿಗರು ವಿವಿಧೆಡೆಯಿಂದ ಆಗಮಿಸಿ ಆನೆಹಬ್ಬ ಕಾರ್ಯಕ್ರಮ ವೀಕ್ಷಿಸಿದರು. ಶಿವಮೊಗ್ಗ ವನ್ಯಜೀವಿ ವಲಯ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಕಾರ್ಗಲ್ ವಿಭಾಗದ ಎಸಿಎಫ್ ಯೋಗೇಶ್ ಸೇರಿ ಹತ್ತಾರು ಅಧಿಕಾರಿಗಳು ಪೂಜೆಯಲ್ಲಿ ಭಾಗವಹಿಸಿ, ಆನೆಗಳಿಗೆ ಹಣ್ಣು ನೀಡಿ ಕಾರ್ಯಕ್ರಮ ಆರಂಭಿಸಿದರು. ಇಡೀ ಬಿಡಾರದ ತುಂಬೆಲ್ಲಾ ಚಿಣ್ಣರ ಕಲರವ ಮನೆ ಮಾಡಿತ್ತು. ವಿವಿಧ ಶಾಲೆಯ ಮಕ್ಕಳು ಸಮವಸ್ತ್ರ ಧರಿಸಿ, ಪ್ರಾಣಿಗಳನ್ನ ಉಳಿಸಿ ಎಂಬ ಘೋಷದೊಂದಿಗೆ ಆಗಮಿಸಿದರು. ಯುವಕ-ಯುವತಿಯರಿಗೆ ಫೊಟೋ ತೆಗೆಸಿಕೊಳ್ಳುವುದೇ ಸಂಭ್ರಮವಾಗಿತ್ತು.
ತುಂಗಾ ನದಿ ತೀರದ ಈ ಬಿಡಾರ ಪ್ರಾಕೃತಿಕ ರಮಣೀಯ ಪರಿಸರ. ಪ್ರತಿ ದಿನ ನೂರಾರು ಪ್ರವಾಸಿಗರು ಮುಂಜಾನೆಯಿಂದಲೇ ಆಗಮಿಸುತ್ತಾರೆ. ಬೆಳಗ್ಗೆ ಹತ್ತು ಗಂಟೆಯೊಳಗೆ ಆನೆಗಳನ್ನ ವೀಕ್ಷಿಸಬಹುದು. ಆದರೆ ಆನೆ ದಿನಾಚರಣೆ ಅಂಗವಾಗಿ ಇಂದು ಮಧ್ಯಾಹ್ನದವರೆಗೂ ಆನೆಗಳ ದರ್ಶನವಾಯ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಪಟಗಾರ್, ಆನೆ ಹಾಗೂ ಅವುಗಳ ಆವಾಸಸ್ಥಾನ ಸಂರಕ್ಷಣಾರ್ಥವಾಗಿ ಆಗಸ್ಟ್ 12 ರಂದು ವಿಶ್ವ ಆನೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಮಹತ್ವವನ್ನ ತಿಳಿಸಲು ಈ ದಿನ ಮಹತ್ವದ್ದಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಭಾಗಿಯಾಗಿದ್ದರು. ಆನೆ ತರಬೇತಿ ಹಾಗೂ ವರ್ತನೆ ಬಗ್ಗೆ ಸೆಮಿನಾರ್ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ರಾಜ್ಯ ಸರ್ಕಾರ ವರದಿ ಬಿಡುಗಡೆ ಮಾಡಿ, ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿವೆ ಎಂದು ಅಂಕಿ ಅಂಶ ನೀಡಲಾಗಿದೆ. ಇದೂ ಸಹ ಖುಷಿ ತರಿಸಿದೆ ಎಂದರು.
ದಾವಣಗೆರೆಯಿಂದ ಬಂದಿದ್ದ ಉಪನ್ಯಾಸಕ ಅನಿಲ್ ಮಾತನಾಡಿ, ಇಂದು ಸಕ್ರೆಬೈಲು ಬಿಡಾರಕ್ಕೆ ಪ್ರವಾಸ ಬಂದೆ. ಬಹಳ ಖುಷಿ ತರಿಸಿತು. ಇಲ್ಲಿನ ಆನೆಗಳು ವಿವಿಧ ಸಮಾರಂಭಗಳಿಗೂ ಭಾಗಿಯಾಗುತ್ತವೆ ಎಂಬುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇಂಥಹ ಕಾರ್ಯಕ್ರಮ ಇಲ್ಲಿ ಹೆಚ್ಚು ನಡೆಯಲಿ ಎಂದರು.
ರಾಜ್ಯದ ಶೇಷ್ಠ ಆನೆಬಿಡಾರ ಎಂದು ಖ್ಯಾತಿ ಪಡೆದಿರುವ ಸಕ್ರೆಬೈಲು ಪ್ರವಾಸಿಗರಿಗೂ ಅಚ್ಚುಮೆಚ್ಚು. ನೂರಾರು ಪ್ರವಾಸಿಗರು ವಿವಿಧೆಡೆಯಿಂದ ಆಗಮಿಸಿ ಆನೆಹಬ್ಬ ಕಾರ್ಯಕ್ರಮ ವೀಕ್ಷಿಸಿದರು. ಶಿವಮೊಗ್ಗ ವನ್ಯಜೀವಿ ವಲಯ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಕಾರ್ಗಲ್ ವಿಭಾಗದ ಎಸಿಎಫ್ ಯೋಗೇಶ್ ಸೇರಿ ಹತ್ತಾರು ಅಧಿಕಾರಿಗಳು ಪೂಜೆಯಲ್ಲಿ ಭಾಗವಹಿಸಿ, ಆನೆಗಳಿಗೆ ಹಣ್ಣು ನೀಡಿ ಕಾರ್ಯಕ್ರಮ ಆರಂಭಿಸಿದರು. ಇಡೀ ಬಿಡಾರದ ತುಂಬೆಲ್ಲಾ ಚಿಣ್ಣರ ಕಲರವ ಮನೆ ಮಾಡಿತ್ತು. ವಿವಿಧ ಶಾಲೆಯ ಮಕ್ಕಳು ಸಮವಸ್ತ್ರ ಧರಿಸಿ, ಪ್ರಾಣಿಗಳನ್ನ ಉಳಿಸಿ ಎಂಬ ಘೋಷದೊಂದಿಗೆ ಆಗಮಿಸಿದರು. ಯುವಕ-ಯುವತಿಯರಿಗೆ ಫೊಟೋ ತೆಗೆಸಿಕೊಳ್ಳುವುದೇ ಸಂಭ್ರಮವಾಗಿತ್ತು.
ತುಂಗಾ ನದಿ ತೀರದ ಈ ಬಿಡಾರ ಪ್ರಾಕೃತಿಕ ರಮಣೀಯ ಪರಿಸರ. ಪ್ರತಿ ದಿನ ನೂರಾರು ಪ್ರವಾಸಿಗರು ಮುಂಜಾನೆಯಿಂದಲೇ ಆಗಮಿಸುತ್ತಾರೆ. ಬೆಳಗ್ಗೆ ಹತ್ತು ಗಂಟೆಯೊಳಗೆ ಆನೆಗಳನ್ನ ವೀಕ್ಷಿಸಬಹುದು. ಆದರೆ ಆನೆ ದಿನಾಚರಣೆ ಅಂಗವಾಗಿ ಇಂದು ಮಧ್ಯಾಹ್ನದವರೆಗೂ ಆನೆಗಳ ದರ್ಶನವಾಯ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಪಟಗಾರ್, ಆನೆ ಹಾಗೂ ಅವುಗಳ ಆವಾಸಸ್ಥಾನ ಸಂರಕ್ಷಣಾರ್ಥವಾಗಿ ಆಗಸ್ಟ್ 12 ರಂದು ವಿಶ್ವ ಆನೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಮಹತ್ವವನ್ನ ತಿಳಿಸಲು ಈ ದಿನ ಮಹತ್ವದ್ದಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಭಾಗಿಯಾಗಿದ್ದರು. ಆನೆ ತರಬೇತಿ ಹಾಗೂ ವರ್ತನೆ ಬಗ್ಗೆ ಸೆಮಿನಾರ್ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ರಾಜ್ಯ ಸರ್ಕಾರ ವರದಿ ಬಿಡುಗಡೆ ಮಾಡಿ, ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿವೆ ಎಂದು ಅಂಕಿ ಅಂಶ ನೀಡಲಾಗಿದೆ. ಇದೂ ಸಹ ಖುಷಿ ತರಿಸಿದೆ ಎಂದರು.
ದಾವಣಗೆರೆಯಿಂದ ಬಂದಿದ್ದ ಉಪನ್ಯಾಸಕ ಅನಿಲ್ ಮಾತನಾಡಿ, ಇಂದು ಸಕ್ರೆಬೈಲು ಬಿಡಾರಕ್ಕೆ ಪ್ರವಾಸ ಬಂದೆ. ಬಹಳ ಖುಷಿ ತರಿಸಿತು. ಇಲ್ಲಿನ ಆನೆಗಳು ವಿವಿಧ ಸಮಾರಂಭಗಳಿಗೂ ಭಾಗಿಯಾಗುತ್ತವೆ ಎಂಬುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇಂಥಹ ಕಾರ್ಯಕ್ರಮ ಇಲ್ಲಿ ಹೆಚ್ಚು ನಡೆಯಲಿ ಎಂದರು.