ಶಿವಮೊಗ್ಗದಲ್ಲಿ ಬಿಜೆಪಿ ಕಿತ್ತೊಗೆಯುತ್ತೇವೆ, ಮಧು ಸಹಕಾರ ಅಗತ್ಯ: ಹೆಚ್ಎಸ್ ಸುಂದರೇಶ್
1064 views
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ: ಮಧು ಬಂಗಾರಪ್ಪ ಸಚಿವರಾಗುತ್ತಿದ್ದಂತೆ ಶಿವಮೊಗ್ಗ ಕಾಂಗ್ರೆಸ್ನಲ್ಲಿ ಹುರುಪು ಬಂದಿದೆ. ಕಳೆದ ಚುನಾವಣೆಯಲ್ಲಿ ಶಿವಮೊಗ್ಗದ ಏಳು ಸ್ಥಾನಗಳಲ್ಲಿ ಒಂದೇ ಸ್ಥಾನದಲ್ಲಿ ಗೆದ್ದು ಶೋಚನೀಯ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಈ ಸಲ ಮೂರರಲ್ಲಿ ಗೆದ್ದಿದೆ. ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೆಚ್.ಎಸ್ ಸುಂದರೇಶ್, ಸಚಿವರಾಗಿ ಶಿವಮೊಗ್ಗ ಆಗಮಿಸಲಿರುವ ಮಧು ಬಂಗಾರಪ್ಪ ಅವರನ್ನ ಅದ್ದೂರಿಯಾಗಿ ಸ್ವಾಗತಿಸುವುದರ ಜೊತೆಗೆ ಮುಂಬರುವ ಚುನಾವಣೆ ಹೊಣೆಗಾರಿಕೆ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸುಂದರೇಶ್, ಸಣ್ಣಪುಟ್ಟ ಕಾರಣಗಳಿಗಾಗಿ ನಾವು ಶಿವಮೊಗ್ಗದಲ್ಲಿ ಮೂರೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಗೆದ್ದ ಕ್ಷೇತ್ರಗಳು ನಮಗೆ ಖುಷಿ ತಂದಿವೆ ಎಂದರು.