ಶಿವಮೊಗ್ಗ: ನಾವು ಪಾಠ ಮಾಡಿದ್ದ ವಿದ್ಯಾರ್ಥಿಗಳೇ ನಮ್ಮನೆಗೆ ಕಲ್ಲು ತೂರಿದರು, ಕಣ್ಣೀರಾದ ನಿವೃತ್ತ ಶಿಕ್ಷಕರು
1416 views
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ: ''ನಮ್ಮ ಬಳಿ ಪಾಠ ಕಲಿತ ವಿದ್ಯಾರ್ಥಿಗಳೇ ಕಲ್ಲು ತೂರಾಟ ನಡೆಸಿದ್ದಾರೆ. ನಾವು ಅವರಿಗೆ ಏನು ಮಾಡಿದ್ದೆವು'' ಎಂದು ನಿವೃತ್ತ ಶಿಕ್ಷಕ ದಂಪತಿಗಳು ಪ್ರಶ್ನಿಸಿದ್ದಾರೆ. ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ತೊಂದರೆಗೆ ಒಳಗಾದ ಕುಟುಂಬದ ಪ್ರಶ್ನೆ ಇದು.
ಈದ್ ಮಿಲಾದ್ ಮೆರವಣಿಗೆಯ ವೇಳೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕರ ತಂಡವು ರಾಗಿಗುಡ್ಡಕ್ಕೆ ಭೇಟಿ ನೀಡಿತು. ಗುರುವಾರ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಆಗಮಿಸಿರುವ ಸತ್ಯ ಶೋಧನಾ ತಂಡದ ಎದುರು ಹಾನಿಗೊಳಗಾದ ನಿವಾಸಿಗಳು ಕಣ್ಣೀರು ಹಾಕಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಈ ವೇಳೆ ನಿವೃತ್ತಿ ಶಿಕ್ಷಕ ದಂಪತಿಗಳು ಅವರು ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟರು.
''ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇಲ್ಲಿ ವಾಸವಿದ್ದೇವೆ. ನನಗೆ ಧೈರ್ಯವೇ ಹೊರಟು ಹೋದಂತಾಗಿದೆ. ನಾವು ಶಿಕ್ಷಕರಾಗಿ ಕೆಲಸ ಮಾಡಿದವರು. ನನ್ನ ಹೆಂಡತಿ ಉರ್ದು ಶಾಲೆಯಲ್ಲಿ ಕನ್ನಡ ಟೀಚರ್ ಆಗಿ ಕೆಲಸ ಮಾಡಿದವಳು. ಅಲ್ಲಿನ ಮಕ್ಕಳಿಗಾಗಿ ಉರ್ದು ಕಲಿತು, ಆ ಮೂಲಕ ಕನ್ನಡ ಕಲಿಸಿದಳು. ಇಲ್ಲಿ ಬಂದು ದಾಂಧಲೆ ಮಾಡಿದವರಲ್ಲಿ ಶೇಕಡ 90ರಷ್ಟು ಜನ ಇವರ ಬಳಿ ಓದಿದದ ವಿದ್ಯಾರ್ಥಿಗಳು. ಇದನ್ನು ಕಂಡು ತುಂಬಾ ನೋವಾಗುತ್ತಿದೆ. ನಾವು ಎಲ್ಲಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ...'' ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇಂತಹ ಘಟನೆಯನ್ನು ಎಂದೂ ನೋಡಿಲ್ಲ. ಒಂದೇ ಸಲ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪೊಲೀಸರು ಸಹ ಅಸಹಾಯಕರಾಗಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಇದು ರಾಗಿಗುಡ್ಡಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರ ಸತ್ಯಶೋಧನ ತಂಡದ ಮುಂದೆ ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಬಿಜೆಪಿ ಸತ್ಯಶೋಧನ ಸಮಿತಿ ರಾಗಿಗುಡ್ಡದ ನಾಲ್ಕನೇ ತಿರುವಿನಲ್ಲಿರುವ ನಾಗರಾಜ್ ಅವರ ಮನೆಯ ಮೇಲೆ ಸ್ಥಳೀಯರ ಜೊತೆ ರಾಗಿಗುಡ್ಡ ಗಲಭೆ ವಿಚಾರವಾಗಿ ಸಭೆ ನಡೆಸಿದರು. ಈ ವೇಳೆ ಸ್ಥಳಿಯರೊಬ್ಬರು ಹಿಂದೂಗಳಿಗೆ ರಕ್ಷಣೆ ಏನು ಎಂಬುದರ ಬಗ್ಗೆ ಪ್ರಶ್ನಿಸಿದರು.
ಈದ್ ಮಿಲಾದ್ ಮೆರವಣಿಗೆಯ ವೇಳೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕರ ತಂಡವು ರಾಗಿಗುಡ್ಡಕ್ಕೆ ಭೇಟಿ ನೀಡಿತು. ಗುರುವಾರ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಆಗಮಿಸಿರುವ ಸತ್ಯ ಶೋಧನಾ ತಂಡದ ಎದುರು ಹಾನಿಗೊಳಗಾದ ನಿವಾಸಿಗಳು ಕಣ್ಣೀರು ಹಾಕಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಈ ವೇಳೆ ನಿವೃತ್ತಿ ಶಿಕ್ಷಕ ದಂಪತಿಗಳು ಅವರು ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟರು.
''ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇಲ್ಲಿ ವಾಸವಿದ್ದೇವೆ. ನನಗೆ ಧೈರ್ಯವೇ ಹೊರಟು ಹೋದಂತಾಗಿದೆ. ನಾವು ಶಿಕ್ಷಕರಾಗಿ ಕೆಲಸ ಮಾಡಿದವರು. ನನ್ನ ಹೆಂಡತಿ ಉರ್ದು ಶಾಲೆಯಲ್ಲಿ ಕನ್ನಡ ಟೀಚರ್ ಆಗಿ ಕೆಲಸ ಮಾಡಿದವಳು. ಅಲ್ಲಿನ ಮಕ್ಕಳಿಗಾಗಿ ಉರ್ದು ಕಲಿತು, ಆ ಮೂಲಕ ಕನ್ನಡ ಕಲಿಸಿದಳು. ಇಲ್ಲಿ ಬಂದು ದಾಂಧಲೆ ಮಾಡಿದವರಲ್ಲಿ ಶೇಕಡ 90ರಷ್ಟು ಜನ ಇವರ ಬಳಿ ಓದಿದದ ವಿದ್ಯಾರ್ಥಿಗಳು. ಇದನ್ನು ಕಂಡು ತುಂಬಾ ನೋವಾಗುತ್ತಿದೆ. ನಾವು ಎಲ್ಲಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ...'' ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇಂತಹ ಘಟನೆಯನ್ನು ಎಂದೂ ನೋಡಿಲ್ಲ. ಒಂದೇ ಸಲ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪೊಲೀಸರು ಸಹ ಅಸಹಾಯಕರಾಗಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಇದು ರಾಗಿಗುಡ್ಡಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರ ಸತ್ಯಶೋಧನ ತಂಡದ ಮುಂದೆ ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಬಿಜೆಪಿ ಸತ್ಯಶೋಧನ ಸಮಿತಿ ರಾಗಿಗುಡ್ಡದ ನಾಲ್ಕನೇ ತಿರುವಿನಲ್ಲಿರುವ ನಾಗರಾಜ್ ಅವರ ಮನೆಯ ಮೇಲೆ ಸ್ಥಳೀಯರ ಜೊತೆ ರಾಗಿಗುಡ್ಡ ಗಲಭೆ ವಿಚಾರವಾಗಿ ಸಭೆ ನಡೆಸಿದರು. ಈ ವೇಳೆ ಸ್ಥಳಿಯರೊಬ್ಬರು ಹಿಂದೂಗಳಿಗೆ ರಕ್ಷಣೆ ಏನು ಎಂಬುದರ ಬಗ್ಗೆ ಪ್ರಶ್ನಿಸಿದರು.