ಸೊರಗುತ್ತಿದೆ ಭದ್ರಾ ಜಲಾಶಯ, ರೈತರ ಮಧ್ಯೆ ನೀರಿಗಾಗಿ ಜಗಳ ಸನ್ನಿಹಿತ!
1089 views
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ: ಮಧ್ಯ ಕರ್ನಾಟಕದ ಜೀವನದಿ ಭದ್ರಾ ಒಡಲು ಬರಿದಾಗುತ್ತಿದೆ. ಹದಿನೈದು ದಿನ ಮಲೆನಾಡಿನ ಮಳೆಗೆ ಅಲ್ಪ ಪ್ರಮಾಣದಲ್ಲಿ ನೀರು ಕಂಡಿದ್ದ ಭದ್ರಾ ಜಲಾಶಯ ಸೊರಗುತ್ತಿದೆ. ಶಿವಮೊಗ್ಗ-ಚಿಕ್ಕಮಗಳೂರು ಗಡಿ ಲಕ್ಕವಳ್ಳಿಯಲ್ಲಿರುವ ಭದ್ರಾ (ಬಿಎಆರ್ಪಿ) ಎಂಜಿನಿಯರ್ ಕಚೇರಿಗೆ ರೈತರು ಆಗಮಿಸುತ್ತಿದ್ದು ನೀರು ತಕ್ಷಣ ನಿಲ್ಲಿಸಲು ಮನವಿ ಮಾಡುತ್ತಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ರೈತರು ಮುಂದಾಲೋಚನೆ ಇಲ್ಲದೇ ಭತ್ತ ಬೆಳೆದಿದ್ದಾರೆ. ಅವರ ಒತ್ತಡಕ್ಕೆ ನೂರು ದಿನ ನೀರು ಹರಿಸಲಾಗುತ್ತಿದೆ. ಈ ನೀರು ಸತತವಾಗಿ ಹರಿಬಿಟ್ಟರೆ ಬಹುವಾರ್ಷಿಕ ಬೆಳೆ ಅದರಲ್ಲಿಯೂ ಅಡಕೆಗೆ ನೀರು ಸಿಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ನಿರ್ವಹಣಾ ಸಮಿತಿ ಆ ಭಾಗದ ರೈತರಿಗೆ ಬರದ ಮುನ್ಸೂಚನೆ ಕೊಡದೇ ಭತ್ತ ಬೆಳೆಯಲು ಪ್ರೇರಣೆ ನೀಡಿದ್ದು ಅವೈಜ್ಞಾನಿಕ. ಭತ್ತ ಹಾಳಾದರೆ ತೊಂದರೆ ಇಲ್ಲ. ಅಡಕೆ ಹೋದರೆ ಕಷ್ಟ. ಸರ್ಕಾರ ಭತ್ತ ನಾಟಿ ಮಾಡಿದ ರೈತರಿಗೆ ಪರಿಹಾರ ನೀಡಿ ನಮ್ಮ ಪೈರು ಉಳಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಹೋರಾಟದ ಮುಂದಾಳತ್ವ ವಹಿಸಿದೆ.
ಈಗಾಗಲೇ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ರಾಜ್ಯದ 100ಕ್ಕೂ ಅಧಿಕ ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಿಕೆತೋಟದ ಬೆಳೆ ಅಚ್ಚುಕಟ್ಟು ಪ್ರದೇಶದಲ್ಲಿದೆ. ಶಿವಮೊಗ್ಗ-ಭದ್ರಾವತಿ, ಹೊಳೆಹೊನ್ನೂರು ಹಾಗೂ ತರೀಕೆರೆ ವ್ಯಾಪ್ತಿಯಲ್ಲಿ ಸೇರಿ ಸುಮಾರು 80 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆ ರೈತರ ಬದುಕಿನ ಜೀವನಾಧಾರದ ಜೊತೆಗೆ ಜಿಲ್ಲೆಗಳ ವಾಣಿಜ್ಯ ಚಟುವಟಿಕೆಗಳಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ಈ ಬಾರಿ ಮುಂಗಾರು ಕೈಕೊಟ್ಟಿರುವ ಕಾರಣ ಆಡಕೆ ತೋಟಗಳಲ್ಲಿ ಹರಳು ಉದುರಿ, ಇಳುವರಿ ಇಲ್ಲದಂತಾಗಿ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯೇ ಇಲ್ಲದೇ ಬೇಸಿಗೆಯ ಬಿಸಿಲಿನ ಝಳದಂತೆ ವಾತಾವರಣ ಇದೆ. ಈ ಹಂಗಾಮಿನಲ್ಲೆ ಮುಂದಿನ ದಿನಗಳಲ್ಲಿ ಮಳೆ ಸುರಿಯುವ ಯಾವುದೇ ಲಕ್ಷಣಗಳಿಲ್ಲ. ಕಾರಣ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ರೈತರು ಮುಂದಾಲೋಚನೆ ಇಲ್ಲದೇ ಭತ್ತ ಬೆಳೆದಿದ್ದಾರೆ. ಅವರ ಒತ್ತಡಕ್ಕೆ ನೂರು ದಿನ ನೀರು ಹರಿಸಲಾಗುತ್ತಿದೆ. ಈ ನೀರು ಸತತವಾಗಿ ಹರಿಬಿಟ್ಟರೆ ಬಹುವಾರ್ಷಿಕ ಬೆಳೆ ಅದರಲ್ಲಿಯೂ ಅಡಕೆಗೆ ನೀರು ಸಿಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ನಿರ್ವಹಣಾ ಸಮಿತಿ ಆ ಭಾಗದ ರೈತರಿಗೆ ಬರದ ಮುನ್ಸೂಚನೆ ಕೊಡದೇ ಭತ್ತ ಬೆಳೆಯಲು ಪ್ರೇರಣೆ ನೀಡಿದ್ದು ಅವೈಜ್ಞಾನಿಕ. ಭತ್ತ ಹಾಳಾದರೆ ತೊಂದರೆ ಇಲ್ಲ. ಅಡಕೆ ಹೋದರೆ ಕಷ್ಟ. ಸರ್ಕಾರ ಭತ್ತ ನಾಟಿ ಮಾಡಿದ ರೈತರಿಗೆ ಪರಿಹಾರ ನೀಡಿ ನಮ್ಮ ಪೈರು ಉಳಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಹೋರಾಟದ ಮುಂದಾಳತ್ವ ವಹಿಸಿದೆ.
ಈಗಾಗಲೇ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ರಾಜ್ಯದ 100ಕ್ಕೂ ಅಧಿಕ ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಿಕೆತೋಟದ ಬೆಳೆ ಅಚ್ಚುಕಟ್ಟು ಪ್ರದೇಶದಲ್ಲಿದೆ. ಶಿವಮೊಗ್ಗ-ಭದ್ರಾವತಿ, ಹೊಳೆಹೊನ್ನೂರು ಹಾಗೂ ತರೀಕೆರೆ ವ್ಯಾಪ್ತಿಯಲ್ಲಿ ಸೇರಿ ಸುಮಾರು 80 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆ ರೈತರ ಬದುಕಿನ ಜೀವನಾಧಾರದ ಜೊತೆಗೆ ಜಿಲ್ಲೆಗಳ ವಾಣಿಜ್ಯ ಚಟುವಟಿಕೆಗಳಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ಈ ಬಾರಿ ಮುಂಗಾರು ಕೈಕೊಟ್ಟಿರುವ ಕಾರಣ ಆಡಕೆ ತೋಟಗಳಲ್ಲಿ ಹರಳು ಉದುರಿ, ಇಳುವರಿ ಇಲ್ಲದಂತಾಗಿ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯೇ ಇಲ್ಲದೇ ಬೇಸಿಗೆಯ ಬಿಸಿಲಿನ ಝಳದಂತೆ ವಾತಾವರಣ ಇದೆ. ಈ ಹಂಗಾಮಿನಲ್ಲೆ ಮುಂದಿನ ದಿನಗಳಲ್ಲಿ ಮಳೆ ಸುರಿಯುವ ಯಾವುದೇ ಲಕ್ಷಣಗಳಿಲ್ಲ. ಕಾರಣ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.