ಮಂಚದ ಮೇಲಿತ್ತು ನಾಗರಹಾವು, ಮನೆಯವರು ಜಸ್ಟ್ ಮಿಸ್ ; ಉರಗ ತಜ್ಞರಿಂದ ಹಾವು ರಕ್ಷಣೆ
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿ
ತುಮಕೂರು: ಮನೆಯೊಳಗೆ ನಾಗರಹಾವು ಪ್ರತ್ಯಕ್ಷಗೊಂಡ ಘಟನೆ ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದಲ್ಲಿ ನಡೆದಿದೆ. ಮಂಚದ ಮೇಲಿದ್ದ ರಗ್ಗಿನೊಳಗೆ ನಾಗರಹಾವು ಅವಿತುಕೊಂಡಿದೆ. ಮನೆಯವರು ಅದನ್ನ ಗಮನಸಿ ತಕ್ಷಣ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಹಾವನ್ನು ರಕ್ಷಣೆ ಮಾಡಿದ್ದಾರೆ. ಮನೆಯೊಳಗಿದ್ದ ಐದು ಅಡಿ ನಾಗರಹಾವನ್ನು ಕಂಡು ಮನೆಯವರು ಶಾಕ್ ಆಗಿದ್ದು, ಎಲ್ಲರು ಜಸ್ಟ್ ಮಿಸ್ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಾರಂಗಲ್ ಫೌಂಡೇಷನ್ ವನ್ಯಜೀವಿ ಹಾಗೂ ಉರಗ ತಜ್ಞ ದಿಲೀಪ್ ಮತ್ತು ಕಿರಣ್ ಹಾವನ್ನು ರಕ್ಷಿಸಿ ಹತ್ತಿರದ ಕಾಡಿಗೆ ಬಿಟ್ಟಿದ್ದಾರೆ.
ತುಮಕೂರು ತಾಲೂಕಿನ ಕಂಬಳಪುರದಲ್ಲಿ. ಈ ಗ್ರಾಮದ ವಾಸಿ, ಮುನಿಯಪ್ಪ ಅವರ ಮನೆ ಪ್ರವೇಶಿಸಿ, ಮಲಗುವುದಕ್ಕೆ ಮಂಚವನ್ನೇ ಸೆಲೆಕ್ಟ್ ಮಾಡಿಕೊಂಡಿದೆ. ಕಳೆದ ಬುಧವಾರ ರಾತ್ರಿ ನಾಗರ ಹಾವು ಬಂದು ಮಂಚದ ಮೇಲಿನ ಬೆಡ್ಶೀಟ್ನಲ್ಲಿ ಸೇರಿಕೊಂಡಿದೆ. ಈ ಬಗ್ಗೆ ಮನೆಯ ಮಾಲೀಕ ಮುನಿಯಪ್ಪನಿಗೆ ಗೊತ್ತೇ ಇಲ್ಲ. ಮುನಿಯಪ್ಪ ಕೂಡ ಅದೇ ಬೆಡ್ ಮೇಲೆ ಇಡೀ ರಾತ್ರಿ ಮಲಗಿದ್ದಾನೆ. ಬೆಳಿಗ್ಗೆ ಎದ್ದು ನೋಡಿದರೆ ಮಂಚದ ಮೇಲೆ ನಾಗರ ಹಾವು ಇದೆ.
ಹಾವನ್ನ ಕಂಡ ಮುನಿಯಪ್ಪ ಕುಟುಂಬ ಕಂಗಾಲು. ಕೂಡಲೇ ಹಾವನ್ನ ಸಾಯಿಸದೆ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಬೆಡ್ ಮೇಲಿನ ಬೆಡ್ಶೀಟ್ ಒಳಗೆ ಅವಿತು ಮಲಗಿದ್ದಂತಹ ನಾಗರ ಹಾವನ್ನು ಹಿಡಿದಿದ್ದಾರೆ. ಐದಾರು ಅಡಿ ಉದ್ದದ ನಾಗರ ಹಾವನ್ನ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಅದೃಷ್ಟವಶಾತ್ ನಾಗರಹಾವು ಯಾರಿಗೂ ಕಚ್ಚಿಲ್ಲ, ತೊಂದರೆನೂ ಕೊಟ್ಟಿಲ್ಲ. ಯಾವುದೇ ಪ್ರಾಣಾಪಾಯ ಕೂಡ ಸಂಭವಿಸಿಲ್ಲ. ಒಂದು ವೇಳೆ ಹಾವು ಕಚ್ಚಿದ್ದರೆ ಸಾವು ಖಚಿತ. ಏನೇ ಆದ್ರೂ ಮಂಚದ ಮೇಲೆ ಈ ಉರಗ ಬಂದಿರುವುದು ಇಡೀ ಕುಟುಂಬ ಮಾತ್ರವಲ್ಲ. ಇಡೀ ಊರೇ ಆತಂಕಗೊಂಡಿದೆ. ಏನೇ ಆದ್ರೂ ಈ ಚಳಿಗಾಲದಲ್ಲಿ ವಿಷ ಜಂತುಗಳ ಬಗ್ಗೆ ಎಚ್ಚರಿಕೆ ಅವಶ್ಯಕ.
ತುಮಕೂರು ತಾಲೂಕಿನ ಕಂಬಳಪುರದಲ್ಲಿ. ಈ ಗ್ರಾಮದ ವಾಸಿ, ಮುನಿಯಪ್ಪ ಅವರ ಮನೆ ಪ್ರವೇಶಿಸಿ, ಮಲಗುವುದಕ್ಕೆ ಮಂಚವನ್ನೇ ಸೆಲೆಕ್ಟ್ ಮಾಡಿಕೊಂಡಿದೆ. ಕಳೆದ ಬುಧವಾರ ರಾತ್ರಿ ನಾಗರ ಹಾವು ಬಂದು ಮಂಚದ ಮೇಲಿನ ಬೆಡ್ಶೀಟ್ನಲ್ಲಿ ಸೇರಿಕೊಂಡಿದೆ. ಈ ಬಗ್ಗೆ ಮನೆಯ ಮಾಲೀಕ ಮುನಿಯಪ್ಪನಿಗೆ ಗೊತ್ತೇ ಇಲ್ಲ. ಮುನಿಯಪ್ಪ ಕೂಡ ಅದೇ ಬೆಡ್ ಮೇಲೆ ಇಡೀ ರಾತ್ರಿ ಮಲಗಿದ್ದಾನೆ. ಬೆಳಿಗ್ಗೆ ಎದ್ದು ನೋಡಿದರೆ ಮಂಚದ ಮೇಲೆ ನಾಗರ ಹಾವು ಇದೆ.
ಹಾವನ್ನ ಕಂಡ ಮುನಿಯಪ್ಪ ಕುಟುಂಬ ಕಂಗಾಲು. ಕೂಡಲೇ ಹಾವನ್ನ ಸಾಯಿಸದೆ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಬೆಡ್ ಮೇಲಿನ ಬೆಡ್ಶೀಟ್ ಒಳಗೆ ಅವಿತು ಮಲಗಿದ್ದಂತಹ ನಾಗರ ಹಾವನ್ನು ಹಿಡಿದಿದ್ದಾರೆ. ಐದಾರು ಅಡಿ ಉದ್ದದ ನಾಗರ ಹಾವನ್ನ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಅದೃಷ್ಟವಶಾತ್ ನಾಗರಹಾವು ಯಾರಿಗೂ ಕಚ್ಚಿಲ್ಲ, ತೊಂದರೆನೂ ಕೊಟ್ಟಿಲ್ಲ. ಯಾವುದೇ ಪ್ರಾಣಾಪಾಯ ಕೂಡ ಸಂಭವಿಸಿಲ್ಲ. ಒಂದು ವೇಳೆ ಹಾವು ಕಚ್ಚಿದ್ದರೆ ಸಾವು ಖಚಿತ. ಏನೇ ಆದ್ರೂ ಮಂಚದ ಮೇಲೆ ಈ ಉರಗ ಬಂದಿರುವುದು ಇಡೀ ಕುಟುಂಬ ಮಾತ್ರವಲ್ಲ. ಇಡೀ ಊರೇ ಆತಂಕಗೊಂಡಿದೆ. ಏನೇ ಆದ್ರೂ ಈ ಚಳಿಗಾಲದಲ್ಲಿ ವಿಷ ಜಂತುಗಳ ಬಗ್ಗೆ ಎಚ್ಚರಿಕೆ ಅವಶ್ಯಕ.