ಸೋಮಣ್ಣಗೆ 4 ದಿನ ಬಿಟ್ಟು ಬನ್ನಿ ಅಂದ್ರು ಮಾಧುಸ್ವಾಮಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ!
1188 views
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವ ಬೆನ್ನಲ್ಲೇ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರು ಬಿಎಸ್ ಯಡಿಯೂರಪ್ಪ ಅವರ ಕೋಪಗೊಂಡಿದ್ದಾರೆ. ಮೂರು ಬಾರಿ ಮನೆಗೆ ಕರೆಸಿ, ಟಿಕೆಟ್ ಕೊಡಿಸುವ ಭರವಸೆ ಕೊಟ್ಟು ಈಗ ಮತ್ತೊಬ್ಬರು ತಂದು ಇಲ್ಲಿಗೆ ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
''ಯಡಿಯೂರಪ್ಪ ಅವರು ಟಿಕೆಟ್ ಕೊಡಿಸ್ತೀನಿ ಅಂತ ಹೇಳಿ ಅದನ್ನು ಕಾರ್ಯಗತಗೊಳಿಸಲಿಲ್ಲ. ನಾವು ಇಲ್ಲಿ ಇರಬೇಕಾ, ನಮಗೆ ರಕ್ಷಣೆ ಹೇಗೆ ಎಂಬ ಪ್ರಶ್ನೆ ಬಂದಿದೆ. ಸದ್ಯಕ್ಕೆ ಪಕ್ಷವನ್ನು ಬಿಡುವ ಯೋಚನೆ ಇಲ್ಲ. ಆದರೆ, ಸೋಮಣ್ಣ ಅವರ ಪರವಾಗಿ ಖಂಡಿತವಾಗಿ ಕೆಲಸ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೆ, ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ'' ಎಂದು ಜೆಸಿ ಮಾಧುಸ್ವಾಮಿ ಹೇಳಿದರು.
ವಿ ಸೋಮಣ್ಣ ಅವರು ಭೇಟಿ ಮಾಡಲು ಬರುವುದಾಗಿ ಕೇಳಿದ್ದಕ್ಕೆ, ಈಗ ಬೇಡ ನಾಲ್ಕು ದಿನಗಳ ನಂತರ ಬರುವಂತೆ ಮಾಧುಸ್ವಾಮಿ ತಿಳಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ಅವರು, ''ಯಡಿಯೂರಪ್ಪ ಅವರ ಸುತ್ತ ಗಣೇಶನ ಥರ ಸುತ್ತುತ್ತೀನಿ ಅಂದಿದ್ದೆ. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನ್ನನ್ನು ನಡುದಾರಿಯಲ್ಲಿ ಕೈ ಬಿಟ್ಟಿದ್ದಾರೆ. ನನಗೆ ಯಡಿಯೂರಪ್ಪರ ಮೇಲೆ ಬೇಸರ ಇದೆ. ಅಪ್ಪ ಮಕ್ಕಳ ಅಸ್ಥಿತ್ವಕ್ಕಾಗಿ ಏನೇನೋ ಮಾಡಬಾರದು. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ'' ಎಂದರು.
''ಯಡಿಯೂರಪ್ಪ ಅವರು ಟಿಕೆಟ್ ಕೊಡಿಸ್ತೀನಿ ಅಂತ ಹೇಳಿ ಅದನ್ನು ಕಾರ್ಯಗತಗೊಳಿಸಲಿಲ್ಲ. ನಾವು ಇಲ್ಲಿ ಇರಬೇಕಾ, ನಮಗೆ ರಕ್ಷಣೆ ಹೇಗೆ ಎಂಬ ಪ್ರಶ್ನೆ ಬಂದಿದೆ. ಸದ್ಯಕ್ಕೆ ಪಕ್ಷವನ್ನು ಬಿಡುವ ಯೋಚನೆ ಇಲ್ಲ. ಆದರೆ, ಸೋಮಣ್ಣ ಅವರ ಪರವಾಗಿ ಖಂಡಿತವಾಗಿ ಕೆಲಸ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೆ, ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ'' ಎಂದು ಜೆಸಿ ಮಾಧುಸ್ವಾಮಿ ಹೇಳಿದರು.
ವಿ ಸೋಮಣ್ಣ ಅವರು ಭೇಟಿ ಮಾಡಲು ಬರುವುದಾಗಿ ಕೇಳಿದ್ದಕ್ಕೆ, ಈಗ ಬೇಡ ನಾಲ್ಕು ದಿನಗಳ ನಂತರ ಬರುವಂತೆ ಮಾಧುಸ್ವಾಮಿ ತಿಳಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ಅವರು, ''ಯಡಿಯೂರಪ್ಪ ಅವರ ಸುತ್ತ ಗಣೇಶನ ಥರ ಸುತ್ತುತ್ತೀನಿ ಅಂದಿದ್ದೆ. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನ್ನನ್ನು ನಡುದಾರಿಯಲ್ಲಿ ಕೈ ಬಿಟ್ಟಿದ್ದಾರೆ. ನನಗೆ ಯಡಿಯೂರಪ್ಪರ ಮೇಲೆ ಬೇಸರ ಇದೆ. ಅಪ್ಪ ಮಕ್ಕಳ ಅಸ್ಥಿತ್ವಕ್ಕಾಗಿ ಏನೇನೋ ಮಾಡಬಾರದು. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ'' ಎಂದರು.