ಸಿದ್ದಗಂಗಾ ಮಠ: ರಾಜಕಾರಣದಲ್ಲಾಗಲಿ, ಜೀವನದಲ್ಲಾಗಲಿ ಹೆದರುವ ಅಗತ್ಯವಿಲ್ಲ, ಸೋಮಣ್ಣಗೆ ಪರಮೇಶ್ವರ್ ಧೈರ್ಯ!
1184 views
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿ''ಸೋಮಣ್ಣ ಅವರನ್ನು ಕಳೆದ ನಲವತ್ತು ವರ್ಷಗಳಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಅಧಿಕಾರ ಇರಲಿ, ಅಧಿಕಾರ ಹೋಗಲಿ, ಯಾವುದಕ್ಕೂ ಸೋಮಣ್ಣ ಜಗ್ಗದವರು. ಒಂದು ರೀತಿಯ ವಿಚಿತ್ರ ಮನುಷ್ಯ ಅವರು. ಅವರ ಮನಸ್ಸಿನ ನೋವನ್ನು ಹೊರ ಹಾಕುವ ರೀತಿಯೇ ಬೇರೆ. ಸಾರ್ವಜನಿಕ ಬದುಕಿನಲ್ಲಿ ನಿರಂತರ ಸೇವೆ ಮಾಡುತ್ತಿರುತ್ತಾರೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸಿದ್ದಗಂಗಾ ಮಠದಲ್ಲಿ ಜಿ ಪರಮೇಶ್ವರ್ ಮಾತನಾಡಿದರು.
''ನಿಮಗೆ ಯಾವುದೇ ಭಯ ಪಡುವ ಅಗತ್ಯವಿಲ್ಲ. ಅದು ರಾಜಕಾರಣದಲ್ಲಿ ಆಗಬಹುದು, ಜೀವನದಲ್ಲಿ ಆಗಬಹುದು. ಮತ್ತೆ ಮತ್ತೆ ಸೋಮಣ್ಣ ಬರಲಿದ್ದಾರೆ ಎಂದು ನನಗೆ ಅನಿಸುತ್ತದೆ. ಸೋಮಣ್ಣ ಅವರಿಗೆ ಇನ್ನೂ ಭವಿಷ್ಯ ಇದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅಧಿವೇಶನದಲ್ಲಿ ನಾನು ಮತ್ತು ಸೋಮಣ್ಣ ಅಕ್ಕಪಕ್ಕದ ಸೀಟಿನಲ್ಲಿ ಇದ್ದವರು. ಇದ್ದಕ್ಕಿದ್ದಂತೆ ಸೋಮಣ್ಣ ಹೋಗಿ ಬಿಜೆಪಿ ಸೇರಿಕೊಂಡರು'' ಎಂದು ಹಳೆಯ ನೆನಪು ಮೆಲುಕು ಹಾಕಿದರು.
''ಸೋಮಣ್ಣ ಅವರ ಕುಟುಂಬ ಸಿದ್ದಗಂಗಾ ಮಠದಲ್ಲಿ ಗುರುಭವನ ಕಟ್ಟಿದ್ದಾರೆ. ಸ್ವಾಮೀಜಿಗಳ ಪೂಜೆಗೆ ಅದರಿಂದ ಉಪಯೋಗ ಆಗುತ್ತಿದೆ. ಅದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನನ್ನನ್ನು ಮತ್ತು ರಾಜಣ್ಣ ಅವರನ್ನ ಕರೆದಿದ್ದರು. ಅಧಿವೇಶನ ಇದ್ದರೂ ಕೂಡ ಇದು ಮುಖ್ಯವಾದ ಕಾರ್ಯಕ್ರಮ ಆಗಿರುವುದರಿಂದ ನಾವು ಭಾಗಿಯಾಗಿದ್ದೇವೆ. ಸೋಮಣ್ಣ ಅವರಿಗೆ ನಾನು ಹೆದರಬೇಡಿ ಎಂದು ಸಹಜವಾಗಿ ಹೇಳಿದ್ದೇನೆ. ಯಾವ ರೀತಿ ಅಭಯ ಕೊಟ್ಟಿಲ್ಲ. ಅದಕ್ಕೆ ಬೇರೆ ರಾಜಕೀಯ ಅರ್ಥ ಕಲ್ಪಿಸುವುದು ಅಗತ್ಯ ಇಲ್ಲ. ಕಾರ್ಯಕ್ರಮದಲ್ಲಿ ರಾಜಕಾರಣದ ಯಾವುದೇ ಮಾತುಗಳನ್ನ ನಾನು ಆಡಿಲ್ಲ. ನಾನು ರಾಜಣ್ಣ ಇಬ್ಬರೂ ಸೇರಿ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಶ್ರೀಗಳ ಅಧ್ಯಯನ ಪೀಠ ಸ್ಥಾಪಿಸುತ್ತೇವೆ'' ಎಂದು ಹೇಳಿದರು.
''ನಿಮಗೆ ಯಾವುದೇ ಭಯ ಪಡುವ ಅಗತ್ಯವಿಲ್ಲ. ಅದು ರಾಜಕಾರಣದಲ್ಲಿ ಆಗಬಹುದು, ಜೀವನದಲ್ಲಿ ಆಗಬಹುದು. ಮತ್ತೆ ಮತ್ತೆ ಸೋಮಣ್ಣ ಬರಲಿದ್ದಾರೆ ಎಂದು ನನಗೆ ಅನಿಸುತ್ತದೆ. ಸೋಮಣ್ಣ ಅವರಿಗೆ ಇನ್ನೂ ಭವಿಷ್ಯ ಇದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅಧಿವೇಶನದಲ್ಲಿ ನಾನು ಮತ್ತು ಸೋಮಣ್ಣ ಅಕ್ಕಪಕ್ಕದ ಸೀಟಿನಲ್ಲಿ ಇದ್ದವರು. ಇದ್ದಕ್ಕಿದ್ದಂತೆ ಸೋಮಣ್ಣ ಹೋಗಿ ಬಿಜೆಪಿ ಸೇರಿಕೊಂಡರು'' ಎಂದು ಹಳೆಯ ನೆನಪು ಮೆಲುಕು ಹಾಕಿದರು.
''ಸೋಮಣ್ಣ ಅವರ ಕುಟುಂಬ ಸಿದ್ದಗಂಗಾ ಮಠದಲ್ಲಿ ಗುರುಭವನ ಕಟ್ಟಿದ್ದಾರೆ. ಸ್ವಾಮೀಜಿಗಳ ಪೂಜೆಗೆ ಅದರಿಂದ ಉಪಯೋಗ ಆಗುತ್ತಿದೆ. ಅದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನನ್ನನ್ನು ಮತ್ತು ರಾಜಣ್ಣ ಅವರನ್ನ ಕರೆದಿದ್ದರು. ಅಧಿವೇಶನ ಇದ್ದರೂ ಕೂಡ ಇದು ಮುಖ್ಯವಾದ ಕಾರ್ಯಕ್ರಮ ಆಗಿರುವುದರಿಂದ ನಾವು ಭಾಗಿಯಾಗಿದ್ದೇವೆ. ಸೋಮಣ್ಣ ಅವರಿಗೆ ನಾನು ಹೆದರಬೇಡಿ ಎಂದು ಸಹಜವಾಗಿ ಹೇಳಿದ್ದೇನೆ. ಯಾವ ರೀತಿ ಅಭಯ ಕೊಟ್ಟಿಲ್ಲ. ಅದಕ್ಕೆ ಬೇರೆ ರಾಜಕೀಯ ಅರ್ಥ ಕಲ್ಪಿಸುವುದು ಅಗತ್ಯ ಇಲ್ಲ. ಕಾರ್ಯಕ್ರಮದಲ್ಲಿ ರಾಜಕಾರಣದ ಯಾವುದೇ ಮಾತುಗಳನ್ನ ನಾನು ಆಡಿಲ್ಲ. ನಾನು ರಾಜಣ್ಣ ಇಬ್ಬರೂ ಸೇರಿ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಶ್ರೀಗಳ ಅಧ್ಯಯನ ಪೀಠ ಸ್ಥಾಪಿಸುತ್ತೇವೆ'' ಎಂದು ಹೇಳಿದರು.