ಯುಗಾದಿ ಬಳಿಕ ಮೋದಿಗೆ ಅನಾರೋಗ್ಯ, ಪ್ರಿಯಾಂಕಾ ಗಾಂಧಿ ಮುಂದಿನ ಪ್ರಧಾನಿ: ಯಶ್ವಂತ ಗುರೂಜಿ ಭವಿಷ್ಯ
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿ
ತುಮಕೂರು: ರಾಷ್ಟ್ರರಾಜಕೀಯದಲ್ಲಿ ಈ ಬಾರಿ ಸ್ತ್ರೀ ಶಕ್ತಿ ದೇಶದ ಆಡಳಿತ ನಡೆಸಲಿದ್ದಾಳೆ ಎಂದು ಯಶ್ವಂತ ಗುರೂಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿಯ ಬಳಿಕ ಮತ್ತೊಮ್ಮೆ ಯಶ್ವಂತ ಗುರೂಜಿ ಭವಿಷ್ಯ ಹೇಳಿದ್ದಾರೆ.
''ಕಾಲಜ್ಞಾನ ಭವಿಷ್ಯ ವಾಣಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಮಾರ್ಚ್ 11ರಿಂದ ರಾಜ ಗದ್ದುಗೆಯನ್ನು ಏರುವ ಅವಕಾಶ ಇದೆ. ತಾಯಿಯ ಕರುಣೆಯಿಂದಾಗಿ ಅವರು ಪುರುಷನಿಗೆ ಪ್ರಧಾನಿ ಸ್ಥಾನವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಆ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶ ಇದೆ. ಇಂದಿನ ಸ್ಥಿತಿಗತಿಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆ. ಅನ್ಯ ಧರ್ಮೀಯರ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ'' ಎಂದಿದ್ದಾರೆ.
''ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ಹಾಗೂ ಸ್ಮೃತಿ ಇರಾನಿ ಅವರ ಜನ್ಮಲಗ್ನ ಜಾತಕ, ಕಾಲಜ್ಞಾನ ಹಾಗೂ ಇಂದಿನ ಸ್ಥಿತಿಗಳ ಜೊತೆಗೆ ತಾಳೆ ಹಾಕಿ ನೋಡಲಾಗಿದೆ. ಅವರಿಗೆ ಪ್ರಧಾನಿಯಾಗುವ ಅವಕಾಶ ಕಾಣುತ್ತಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ಯುಗಾದಿಯಲ್ಲಿ ಮೋದಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದ್ದು, ಅವರು ಆರೋಗ್ಯದ ಕಡೆಗೆ ಗಮನ ಕೊಡಬೇಕಾಗುತ್ತದೆ. ಶಿವರಾತ್ರಿಯ ಬಳಿಕ ಸ್ತ್ರೀಗೆ ಅವಕಾಶ ಇದೆ. ರವಿಬುಕ್ತಿಯು ಪ್ರಿಯಾಂಕಾ ಗಾಂಧಿ ಅವರಿಗೆ ಇದೆ. ಪ್ರಿಯಾಂಕಾ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದರೆ, ದೊಡ್ಡ ಫಲಿತಾಂಶ ಹೊರಬರಲಿದೆ ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬರುತ್ತದೆ ಎಂದು ಹಿಂದೆ ಹೇಳಿದ್ದೆ. ಅದು ನಿಜವಾಗಿದೆ ಎಂದು ಯಶ್ವಂತ ಗುರೂಜಿ ಹೇಳಿದರು.
''ಕಾಲಜ್ಞಾನ ಭವಿಷ್ಯ ವಾಣಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಮಾರ್ಚ್ 11ರಿಂದ ರಾಜ ಗದ್ದುಗೆಯನ್ನು ಏರುವ ಅವಕಾಶ ಇದೆ. ತಾಯಿಯ ಕರುಣೆಯಿಂದಾಗಿ ಅವರು ಪುರುಷನಿಗೆ ಪ್ರಧಾನಿ ಸ್ಥಾನವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಆ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶ ಇದೆ. ಇಂದಿನ ಸ್ಥಿತಿಗತಿಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆ. ಅನ್ಯ ಧರ್ಮೀಯರ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ'' ಎಂದಿದ್ದಾರೆ.
''ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ಹಾಗೂ ಸ್ಮೃತಿ ಇರಾನಿ ಅವರ ಜನ್ಮಲಗ್ನ ಜಾತಕ, ಕಾಲಜ್ಞಾನ ಹಾಗೂ ಇಂದಿನ ಸ್ಥಿತಿಗಳ ಜೊತೆಗೆ ತಾಳೆ ಹಾಕಿ ನೋಡಲಾಗಿದೆ. ಅವರಿಗೆ ಪ್ರಧಾನಿಯಾಗುವ ಅವಕಾಶ ಕಾಣುತ್ತಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ಯುಗಾದಿಯಲ್ಲಿ ಮೋದಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದ್ದು, ಅವರು ಆರೋಗ್ಯದ ಕಡೆಗೆ ಗಮನ ಕೊಡಬೇಕಾಗುತ್ತದೆ. ಶಿವರಾತ್ರಿಯ ಬಳಿಕ ಸ್ತ್ರೀಗೆ ಅವಕಾಶ ಇದೆ. ರವಿಬುಕ್ತಿಯು ಪ್ರಿಯಾಂಕಾ ಗಾಂಧಿ ಅವರಿಗೆ ಇದೆ. ಪ್ರಿಯಾಂಕಾ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದರೆ, ದೊಡ್ಡ ಫಲಿತಾಂಶ ಹೊರಬರಲಿದೆ ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬರುತ್ತದೆ ಎಂದು ಹಿಂದೆ ಹೇಳಿದ್ದೆ. ಅದು ನಿಜವಾಗಿದೆ ಎಂದು ಯಶ್ವಂತ ಗುರೂಜಿ ಹೇಳಿದರು.