ತುಮಕೂರು ಲೋಕಸಭಾ ಕ್ಷೇತ್ರ: ಈ ನೆಲದವರಿಗೇ ಟಿಕೆಟ್ ಕೊಡಬೇಕಿತ್ತು, ಹೊರಗಿನವರು ನಮಗ್ಯಾಕೆ?- ಜೆಸಿ ಮಾಧುಸ್ವಾಮಿ
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿ
ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಬಿ-ಫಾರ್ಮ್ ಕೊಟ್ಟರೂ ಈಗ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾರೇ ಹೇಳಿದರೂ ನನಗೆ ಚುನಾವಣೆಗೆ ಸ್ಪರ್ಧಿಸುವ ಮನಸ್ಸಿಲ್ಲ ಎಂದು ಬಿಜೆಪಿ ಮುಖಂಡ ಜೆಸಿ ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧುಸ್ವಾಮಿ ಮಾತನಾಡಿದರು. ''ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ಮದುವೆಯಾಗುವ ಸಣ್ಣತನ ನನಗಿಲ್ಲ'' ಎಂದು ಚುನಾವಣೆಯ ಟಿಕೆಟ್ ಬಗ್ಗೆ ಮಾಧುಸ್ವಾಮಿ ಹೇಳಿದರು. ''ಕಾಂಗ್ರೆಸ್ನವರು ನನ್ನ ಜೊತೆ ಮಾತನಾಡಿಲ್ಲ, ಟಿಕೆಟ್ ಕೊಡುವ ಬಗ್ಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಆ ಬಗ್ಗೆ ಯಾಕೆ ಸುದ್ದಿಯಾಗುತ್ತಿದೆ ಗೊತ್ತಿಲ್ಲ. ಮನೆಗೆ ಬಂದವರೊಂದಿಗೆ ಸೌಜನ್ಯದಿಂದ ಮಾತನಾಡಿದ್ದೇನೆ. ಕಾಂಗ್ರೆಸ್ಗೆ ಕರೆದಿಲ್ಲ, ಬರೋದೂ ಇಲ್ಲ ಅಂತಲೂ ನಾನು ಹೇಳಿಲ್ಲ'' ಎಂದರು.
''ನನಗೆ ಪಕ್ಷದ ಮೇಲೆ ಕೋಪವಿಲ್ಲ. ನನ್ನ ಅಸಮಾಧಾನ ಯಡಿಯೂರಪ್ಪ ಅವರ ಮೇಲೆ ಮಾತ್ರ. ನನಗೆ ಆಸೆ ಇರದಿದ್ದರೂ ಲೋಕಸಭೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಆದರೆ, ಟಿಕೆಟ್ ಕೊಡಲಿಲ್ಲ ಹಾಗೂ ನೇರವಾಗಿ ಮಾತನಾಡುವ ಸೌಜನ್ಯವೂ ತೋರಲಿಲ್ಲ. ತುಮಕೂರಿಗೆ ಹೊರಗಿನವರನ್ನು ಕರೆತರುವುದು ಬೇಕಿಲ್ಲ. ಅದಕ್ಕೆ ನನ್ನ ಒಪ್ಪಿಗೆ ಇಲ್ಲ. ಈ ನೆಲದ ಮಗನನ್ನು ಬೆಳೆಸಬೇಕಿತ್ತು. ಜಿಲ್ಲೆಯಲ್ಲಿಯೇ ಯಾರಿಗಾದರೂ ಟಿಕೆಟ್ ಕೊಡಬೇಕಿತ್ತು. ಸೋಮಣ್ಣನವರ ಮೇಲೂ ನನಗೆ ದ್ವೇಷವಿಲ್ಲ. ಆದರೆ, ಯಾಕೆ ತುಮಕೂರನ್ನು ಅಡ ಇಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.
ಹೊರಗಿನಿಂದ ಬಂದವರಿಗೆ ತುಮಕೂರು ಅಭಿವೃದ್ಧಿ ಮಾಡುವುದು ಸಾಧ್ಯವಿಲ್ಲ. ತುಮಕೂರು ಸರ್ವಮುಖ ಅಭಿವೃದ್ಧಿ ಮಾಡುತ್ತೇನೆ ಎಂಬ ಆಶ್ವಾಸನೆಗಳು ಕೇವಲ ಬೊಗಳೆ ಮಾತ್ರ. ಇಲ್ಲಿ ಒಂದು ಸರಕಾರಿ ಎಂಜಿನಿಯರಿಂಗ್ ಕಾಲೇಜು ಮಾಡಲು ಸಾಧ್ಯವಾಗಿಲ್ಲ ಎಂದರು.
ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧುಸ್ವಾಮಿ ಮಾತನಾಡಿದರು. ''ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ಮದುವೆಯಾಗುವ ಸಣ್ಣತನ ನನಗಿಲ್ಲ'' ಎಂದು ಚುನಾವಣೆಯ ಟಿಕೆಟ್ ಬಗ್ಗೆ ಮಾಧುಸ್ವಾಮಿ ಹೇಳಿದರು. ''ಕಾಂಗ್ರೆಸ್ನವರು ನನ್ನ ಜೊತೆ ಮಾತನಾಡಿಲ್ಲ, ಟಿಕೆಟ್ ಕೊಡುವ ಬಗ್ಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಆ ಬಗ್ಗೆ ಯಾಕೆ ಸುದ್ದಿಯಾಗುತ್ತಿದೆ ಗೊತ್ತಿಲ್ಲ. ಮನೆಗೆ ಬಂದವರೊಂದಿಗೆ ಸೌಜನ್ಯದಿಂದ ಮಾತನಾಡಿದ್ದೇನೆ. ಕಾಂಗ್ರೆಸ್ಗೆ ಕರೆದಿಲ್ಲ, ಬರೋದೂ ಇಲ್ಲ ಅಂತಲೂ ನಾನು ಹೇಳಿಲ್ಲ'' ಎಂದರು.
''ನನಗೆ ಪಕ್ಷದ ಮೇಲೆ ಕೋಪವಿಲ್ಲ. ನನ್ನ ಅಸಮಾಧಾನ ಯಡಿಯೂರಪ್ಪ ಅವರ ಮೇಲೆ ಮಾತ್ರ. ನನಗೆ ಆಸೆ ಇರದಿದ್ದರೂ ಲೋಕಸಭೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಆದರೆ, ಟಿಕೆಟ್ ಕೊಡಲಿಲ್ಲ ಹಾಗೂ ನೇರವಾಗಿ ಮಾತನಾಡುವ ಸೌಜನ್ಯವೂ ತೋರಲಿಲ್ಲ. ತುಮಕೂರಿಗೆ ಹೊರಗಿನವರನ್ನು ಕರೆತರುವುದು ಬೇಕಿಲ್ಲ. ಅದಕ್ಕೆ ನನ್ನ ಒಪ್ಪಿಗೆ ಇಲ್ಲ. ಈ ನೆಲದ ಮಗನನ್ನು ಬೆಳೆಸಬೇಕಿತ್ತು. ಜಿಲ್ಲೆಯಲ್ಲಿಯೇ ಯಾರಿಗಾದರೂ ಟಿಕೆಟ್ ಕೊಡಬೇಕಿತ್ತು. ಸೋಮಣ್ಣನವರ ಮೇಲೂ ನನಗೆ ದ್ವೇಷವಿಲ್ಲ. ಆದರೆ, ಯಾಕೆ ತುಮಕೂರನ್ನು ಅಡ ಇಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.
ಹೊರಗಿನಿಂದ ಬಂದವರಿಗೆ ತುಮಕೂರು ಅಭಿವೃದ್ಧಿ ಮಾಡುವುದು ಸಾಧ್ಯವಿಲ್ಲ. ತುಮಕೂರು ಸರ್ವಮುಖ ಅಭಿವೃದ್ಧಿ ಮಾಡುತ್ತೇನೆ ಎಂಬ ಆಶ್ವಾಸನೆಗಳು ಕೇವಲ ಬೊಗಳೆ ಮಾತ್ರ. ಇಲ್ಲಿ ಒಂದು ಸರಕಾರಿ ಎಂಜಿನಿಯರಿಂಗ್ ಕಾಲೇಜು ಮಾಡಲು ಸಾಧ್ಯವಾಗಿಲ್ಲ ಎಂದರು.