ವಿಶೇಷ ರೈಲಿನಲ್ಲಿ ಅಯೋಧ್ಯೆಯ ಬಾಲರಾಮನ ನೋಡಲು ಹೊರಟ ತುಮಕೂರು ಮಂದಿ
1092 views
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿತುಮಕೂರು : ಇತ್ತೀಚೆಗಷ್ಟೇ ಆಯೋಧ್ಯೆಯ ಶ್ರೀರಾಮಲಲ್ಲಾ ಮಂದಿರ ಉದ್ಘಾಟನೆ ಆಗಿದೆ. ಸಾಗರೋಪಾಧಿಯಲ್ಲಿ ಭಕ್ತರು ಅಯೋಧ್ಯೆಗೆ ಹೋಗ್ತಿದ್ದಾರೆ. ಈ ಮಧ್ಯೆ ತುಮಕೂರು ಜಿಲ್ಲೆಯಿಂದ 250ಕ್ಕೂ ಹೆಚ್ಚು ಭಕ್ತಾಧಿಗಳು ಬುಧವಾರ ಮುಂಜಾನೆ 5.50ಕ್ಕೆ ವಿಶೇಷ ರೈಲಿನಲ್ಲಿ ಹೊರಟರು.
ತುಮಕೂರು To ಅಯೋದ್ಯಾಧಾಮ್ ಎಂಬ ವಿಶೇಷ ರೈಲಿನಲ್ಲಿ ಕರ ಸೇವಕರು, ಮಹಿಳೆಯರು ಸೇರಿದಂತೆ 250ಕ್ಕೂ ಮಂದಿ ಶ್ರೀರಾಮನ ಭಕ್ತರು ಪ್ರಯಾಣ ಬೆಳೆಸಿದರು. ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಇತರೆ ಬಿಜೆಪಿ ನಾಯಕರು ತುಮಕೂರು ರೈಲ್ವೆ ಸ್ಟೇಷನ್ಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರಸಿ, ಹಾರೈಸಿ ಶ್ರೀರಾಮನ ಭಕ್ತರನ್ನ ಕಳುಹಿಸಿಕೊಟ್ಟರು.
ಜೈ ಶ್ರೀರಾಮ್ ಎಂಬ ಘೋಷಣೆಗಳನ್ನ ಕೂಗುವ ಮೂಲಕ ಹೊರಟ ಶ್ರೀ ರಾಮನ ಭಕ್ತಾಧಿಗಳು ಇದೇ ಫೆಬ್ರವರಿ 9ರಂದು ಅಯೋಧ್ಯೆಗೆ ತಲುಪಲಿದ್ದಾರೆ. ಹೋಗುವ ದಾರಿ ಉದ್ದಕ್ಕೂ ಶ್ರೀರಾಮನ ಭಜನೆ, ಹಾಡು ಹಾಗೂ ಶ್ರೀರಾಮಲಲ್ಲಾಗೆ ಪೂಜೆ ಮಾಡುವ ಮೂಲಕ ಅಯೋಧ್ಯೆ ತಲುಪಲಿದ್ದಾರೆ.
ಈ ಮಧ್ಯೆ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನೆ ಬಹಳ ಯಶಸ್ವಿಯಾಗಿ ನಡೆದಿದೆ. ಅದರ ಭಾಗವಾಗಿ ಇಡೀ ದೇಶದ ಜನ ಹೋಗ್ತಿದ್ದಾರೆ. ಅದೇ ರೀತಿ ಇಂದು ತುಮಕೂರಿನ ಶ್ರೀರಾಮನ ಭಕ್ತರು ಸ್ವಂತ ಹಣ ಖರ್ಚು ಮಾಡಿಕೊಂಡು ಅಯೋಧ್ಯೆಗೆ ಹೋಗ್ತಿದ್ದಾರೆ. ಅವರನ್ನ ಬೀಳ್ಕೊಡುವುದಕ್ಕೆ ನಾವೆಲ್ಲ ಬಂದಿದ್ದೇವೆ. ಯಾತ್ರಾರ್ಥಿಗಳು ಕೂಡ ತುಂಬಾನೇ ಉತ್ಸಾಹದಿಂದ ಹೋಗ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂತಾ ಹಾರೈಸಿದ್ದೇನೆ ಎಂದರು.
ತುಮಕೂರು To ಅಯೋದ್ಯಾಧಾಮ್ ಎಂಬ ವಿಶೇಷ ರೈಲಿನಲ್ಲಿ ಕರ ಸೇವಕರು, ಮಹಿಳೆಯರು ಸೇರಿದಂತೆ 250ಕ್ಕೂ ಮಂದಿ ಶ್ರೀರಾಮನ ಭಕ್ತರು ಪ್ರಯಾಣ ಬೆಳೆಸಿದರು. ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಇತರೆ ಬಿಜೆಪಿ ನಾಯಕರು ತುಮಕೂರು ರೈಲ್ವೆ ಸ್ಟೇಷನ್ಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರಸಿ, ಹಾರೈಸಿ ಶ್ರೀರಾಮನ ಭಕ್ತರನ್ನ ಕಳುಹಿಸಿಕೊಟ್ಟರು.
ಜೈ ಶ್ರೀರಾಮ್ ಎಂಬ ಘೋಷಣೆಗಳನ್ನ ಕೂಗುವ ಮೂಲಕ ಹೊರಟ ಶ್ರೀ ರಾಮನ ಭಕ್ತಾಧಿಗಳು ಇದೇ ಫೆಬ್ರವರಿ 9ರಂದು ಅಯೋಧ್ಯೆಗೆ ತಲುಪಲಿದ್ದಾರೆ. ಹೋಗುವ ದಾರಿ ಉದ್ದಕ್ಕೂ ಶ್ರೀರಾಮನ ಭಜನೆ, ಹಾಡು ಹಾಗೂ ಶ್ರೀರಾಮಲಲ್ಲಾಗೆ ಪೂಜೆ ಮಾಡುವ ಮೂಲಕ ಅಯೋಧ್ಯೆ ತಲುಪಲಿದ್ದಾರೆ.
ಈ ಮಧ್ಯೆ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನೆ ಬಹಳ ಯಶಸ್ವಿಯಾಗಿ ನಡೆದಿದೆ. ಅದರ ಭಾಗವಾಗಿ ಇಡೀ ದೇಶದ ಜನ ಹೋಗ್ತಿದ್ದಾರೆ. ಅದೇ ರೀತಿ ಇಂದು ತುಮಕೂರಿನ ಶ್ರೀರಾಮನ ಭಕ್ತರು ಸ್ವಂತ ಹಣ ಖರ್ಚು ಮಾಡಿಕೊಂಡು ಅಯೋಧ್ಯೆಗೆ ಹೋಗ್ತಿದ್ದಾರೆ. ಅವರನ್ನ ಬೀಳ್ಕೊಡುವುದಕ್ಕೆ ನಾವೆಲ್ಲ ಬಂದಿದ್ದೇವೆ. ಯಾತ್ರಾರ್ಥಿಗಳು ಕೂಡ ತುಂಬಾನೇ ಉತ್ಸಾಹದಿಂದ ಹೋಗ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂತಾ ಹಾರೈಸಿದ್ದೇನೆ ಎಂದರು.