ಸ್ಥಳೀಯ-ವಲಸಿಗ ಅಭ್ಯರ್ಥಿ ಮಧ್ಯೆ ಕಾಳಗ: ತುಮಕೂರು ವಿಜಯ ಮಾಲೆ ಯಾರಿಗೆ? ಕ್ಷೇತ್ರದ ಜನ ಹೇಳೋದೇನು?
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿ
ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯ ಲೋಕಸಭಾ ಕ್ಷೇತ್ರದ ರಣಕಣದಲ್ಲಿನ ಅಭ್ಯರ್ಥಿಗಳ ಜಟ್ಟಿ ಕಾಳಗ ಜೋರಾಗಿದೆ. ಇದೇ ಏ.26 ರಂದು ಜಂಗಿ ಕುಸ್ತಿ ನಡೆಯಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯರು ಹಾಗೂ ವಲಸಿಗರು ಎಂಬ ಅಸ್ತ್ರಗಳು ಬಳಕೆಯಾಗುತ್ತಿವೆ. ಆರೋಪ ಪ್ರತ್ಯಾರೋಪ, ಹಣ, ಜಾತಿ, ಗ್ಯಾರಂಟಿ ಯೋಜನೆ, ಮೋದಿ ಮುಖ ಎಂಬೆಲ್ಲಾ ಪ್ರಮುಖ ವಿಚಾರಗಳು ಮುನ್ನೆಲೆಗೆ ಬಂದಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ನಿತ್ಯ ಕ್ಷೇತ್ರ ಸಂಚಾರ, ಮಠ ಮಂದಿರಗಳ ಭೇಟಿಗೆ ಇಳಿದಿದ್ದು, ರೋಡ್ ಶೋಗಳ ಮೂಲಕ ಮತ ಬೇಟೆ ಶುರು ಮಾಡಿಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಗೆ ಗೋ ಬ್ಯಾಕ್ ಬಿಸಿ ತಟ್ಟುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ಒಳ ಹೊಡೆತದ ಭೀತಿ ಶುರುವಾಗಿದೆ.
ಎರಡೂ ಪಕ್ಷಗಳು ಗೆಲುವು ಪಡೆಯಲು ತಮ್ಮದೇ ಆದ ತಂತ್ರವನ್ನು ಅನುಸರಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ (ಎನ್ಡಿಎ) ಹಾಗೂ ಕಾಂಗ್ರೆಸ್(ಇಂಡಿಯಾ)ಪರಸ್ಪರ ಪ್ರಬಲ ಎದುರಾಳಿಗಳಾಗಿದ್ದರೂ ತುಮಕೂರಿನಲ್ಲಿ ಅಂತಹ ಜಿದ್ದಿನ ರಾಜಕಾರಣ ಕಂಡು ಬಂದಿಲ್ಲ. ಈ ಮಧ್ಯೆ ಜಿಲ್ಲೆಯ ಅನೇಕರು ತನ್ನ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ. ಮತದಾರರ ಮನದಲ್ಲಿ ಯಾರಿದ್ದಾರೆ.. ವಿಜಯ ಮಾಲೆ ಯಾರಿಗೆ? ಇದೆಲ್ಲದರ ಮಾಹಿತಿ ಈ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ನಿತ್ಯ ಕ್ಷೇತ್ರ ಸಂಚಾರ, ಮಠ ಮಂದಿರಗಳ ಭೇಟಿಗೆ ಇಳಿದಿದ್ದು, ರೋಡ್ ಶೋಗಳ ಮೂಲಕ ಮತ ಬೇಟೆ ಶುರು ಮಾಡಿಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಗೆ ಗೋ ಬ್ಯಾಕ್ ಬಿಸಿ ತಟ್ಟುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ಒಳ ಹೊಡೆತದ ಭೀತಿ ಶುರುವಾಗಿದೆ.
ಎರಡೂ ಪಕ್ಷಗಳು ಗೆಲುವು ಪಡೆಯಲು ತಮ್ಮದೇ ಆದ ತಂತ್ರವನ್ನು ಅನುಸರಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ (ಎನ್ಡಿಎ) ಹಾಗೂ ಕಾಂಗ್ರೆಸ್(ಇಂಡಿಯಾ)ಪರಸ್ಪರ ಪ್ರಬಲ ಎದುರಾಳಿಗಳಾಗಿದ್ದರೂ ತುಮಕೂರಿನಲ್ಲಿ ಅಂತಹ ಜಿದ್ದಿನ ರಾಜಕಾರಣ ಕಂಡು ಬಂದಿಲ್ಲ. ಈ ಮಧ್ಯೆ ಜಿಲ್ಲೆಯ ಅನೇಕರು ತನ್ನ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ. ಮತದಾರರ ಮನದಲ್ಲಿ ಯಾರಿದ್ದಾರೆ.. ವಿಜಯ ಮಾಲೆ ಯಾರಿಗೆ? ಇದೆಲ್ಲದರ ಮಾಹಿತಿ ಈ ವಿಡಿಯೋ ಇಲ್ಲಿದೆ.