ದೇಶವನ್ನು 60 ವರ್ಷ ಲೂಟಿ ಹೊಡೆದವರೆಲ್ಲ ನಿನ್ನೆ ಒಂದು ಕಡೆ ಸೇರಿದ್ದರು ; ಶೋಭಾ ಕರಂದ್ಲಾಜೆ
1049 views
ಉಡುಪಿ ವಿಡಿಯೋಗಳಿಗೆ ಚಂದಾದಾರರಾಗಿಉಡುಪಿ: ದೇಶವನ್ನು 60 ವರ್ಷಗಳ ಕಾಲ ಲೂಟಿ ಹೊಡೆದವರು ನಿನ್ನೆ ಒಂದು ಕಡೆ ಸೇರಿದ್ದರು. ಅವರು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರು ಇಟ್ಟಿದ್ದಾರೆ. ಅವರದ್ದು ಇಂಡಿಯಾ ಅಲ್ಲ, ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ನಾಯಕರ ಸಭೆಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಕೂಡ ಅವರು ಒಕ್ಕೂಟವನ್ನು ರಚಿಸಿ ವೈಫಲ್ಯ ಕಂಡಿದ್ದರು. ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ. ಅವರು ಇಂಡಿಯಾ ಎಂಬ ಹೆಸರು ಇಟ್ಟದ್ದೇ ಕಾನೂನು ಬಾಹಿರವಾಗಿದೆ ಎಂದು ಹೇಳಿದರು.
ಅಜಿತ್ ಪವಾರ್ ಅವರು ಕುಟುಂಬ ರಾಜಕಾರಣಕ್ಕೆ ಬೇಸತ್ತು ಪಾರ್ಟಿ ತೊರೆದು ಬಂದಿದ್ದಾರೆ. ಎನ್ಡಿಎ ಸಭೆ ಕೂಡ ಮಾಡಿದ್ದೇವೆ, ಮೋದಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ನಾಯಕರ ಸಭೆಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಕೂಡ ಅವರು ಒಕ್ಕೂಟವನ್ನು ರಚಿಸಿ ವೈಫಲ್ಯ ಕಂಡಿದ್ದರು. ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ. ಅವರು ಇಂಡಿಯಾ ಎಂಬ ಹೆಸರು ಇಟ್ಟದ್ದೇ ಕಾನೂನು ಬಾಹಿರವಾಗಿದೆ ಎಂದು ಹೇಳಿದರು.
ಅಜಿತ್ ಪವಾರ್ ಅವರು ಕುಟುಂಬ ರಾಜಕಾರಣಕ್ಕೆ ಬೇಸತ್ತು ಪಾರ್ಟಿ ತೊರೆದು ಬಂದಿದ್ದಾರೆ. ಎನ್ಡಿಎ ಸಭೆ ಕೂಡ ಮಾಡಿದ್ದೇವೆ, ಮೋದಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.