ಅವ್ಯವಸ್ಥೆಯ ಆಗರವಾದ ಕಾರವಾರದ ಮಾಲಾದೇವಿ ಮೈದಾನ ; ಮಕ್ಕಳ ಪರದಾಟ!
1108 views
ಉತ್ತರ ಕನ್ನಡ ವಿಡಿಯೋಗಳಿಗೆ ಚಂದಾದಾರರಾಗಿಉತ್ತರ ಕನ್ನಡ: ಕಾರವಾರದ ಮಾಲಾದೇವಿ ಮೈದಾನ ಅವ್ಯವಸ್ಥೆಯ ಆಗರವಾಗಿದೆ. ಹೆಸರಿಗಷ್ಟೇ ಕ್ರೀಡಾಂಗಣವಿದ್ದು, ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ,ಹೀಗಾಗಿ ಕ್ರೀಡಾಂಗಣಕ್ಕೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಇಲ್ಲಿನ ಸ್ಥಳೀಯರು ಸರ್ಕಾರಕ್ಕೆ, ಇಲ್ಲಿನ ಶಾಸಕರಿಗೆ ಒತ್ತಾಯಿಸಿದ್ದಾರೆ.
ಕಾರವಾರದಲ್ಲಿ ಈವರೆಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಇರುವ ಸಣ್ಣ ಮೈದಾನದಲ್ಲಿಯೇ ಪ್ರತಿಬಾರಿ ಕ್ರೀಡಾಕೂಟವನ್ನ ಆಡಿಸಲಾಗುತ್ತದೆ. ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕಷ್ಟಪಟ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ನಿರ್ಲಕ್ಷಕ್ಕೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಮೈದಾನದಲ್ಲಿ ಆಡಲು ಬರುವ ಸ್ಪರ್ಧಾಳುಗಳಿಗೆ ಶೌಚಾಲಯವಿಲ್ಲ, ಅಲ್ಲದೇ ವಿಶ್ರಾಂತಿ ಪಡೆಯುವ ಯಾವ ಸ್ಥಳವೂ ಇಲ್ಲ. ಅಕ್ಕಪಕ್ಕದ ಶಾಲೆಗಳಿಗೆ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೇಳಿದರೆ ಏನೂ ಸಮಸ್ಯೆ ಇಲ್ಲ ಎನ್ನುತ್ತಾರೆ. ಶಿಕ್ಷಣಾಧಿಕಾರಿಯಷ್ಟೇ ಅಲ್ಲ, ಖುದ್ದು ಜಿಲ್ಲಾಧಿಕಾರಿಗಳೇ ಮಕ್ಕಳು, ಪಾಲಕರನ್ನ ಗೋಳನ್ನ ಕೇಳದೆ ಅಸಡ್ಡೆ ವಹಿಸಿದ್ದು, ಮಳೆಯೆಂದ್ಮೇಲೆ ಕೆಸರಾಗದೆ ಇರುತ್ತೇನ್ರಿ ಎಂದು ಸ್ಥಳೀಯರಿಗೆ ಗದರಿಸುತ್ತಾರಂತೆ.
ಸುಸಜ್ಜಿತ ಕ್ರೀಡಾಂಗಣವೇ ಇಲ್ಲದೇ ಬೆಳೆಯುವ ಭವಿಷ್ಯದ ಮಕ್ಕಳು ಜೀವಕ್ಕಾಗುವ ಹಾನಿಯನ್ನೂ ಲೆಕ್ಕಿಸದೇ ಕಾರವಾರದ ಈ ಮೈದಾನದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇದ್ದು, ತಕ್ಷಣ ಸಂದಂಧಪಟ್ಟವರು ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ.
ಕಾರವಾರದಲ್ಲಿ ಈವರೆಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಇರುವ ಸಣ್ಣ ಮೈದಾನದಲ್ಲಿಯೇ ಪ್ರತಿಬಾರಿ ಕ್ರೀಡಾಕೂಟವನ್ನ ಆಡಿಸಲಾಗುತ್ತದೆ. ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕಷ್ಟಪಟ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ನಿರ್ಲಕ್ಷಕ್ಕೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಮೈದಾನದಲ್ಲಿ ಆಡಲು ಬರುವ ಸ್ಪರ್ಧಾಳುಗಳಿಗೆ ಶೌಚಾಲಯವಿಲ್ಲ, ಅಲ್ಲದೇ ವಿಶ್ರಾಂತಿ ಪಡೆಯುವ ಯಾವ ಸ್ಥಳವೂ ಇಲ್ಲ. ಅಕ್ಕಪಕ್ಕದ ಶಾಲೆಗಳಿಗೆ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೇಳಿದರೆ ಏನೂ ಸಮಸ್ಯೆ ಇಲ್ಲ ಎನ್ನುತ್ತಾರೆ. ಶಿಕ್ಷಣಾಧಿಕಾರಿಯಷ್ಟೇ ಅಲ್ಲ, ಖುದ್ದು ಜಿಲ್ಲಾಧಿಕಾರಿಗಳೇ ಮಕ್ಕಳು, ಪಾಲಕರನ್ನ ಗೋಳನ್ನ ಕೇಳದೆ ಅಸಡ್ಡೆ ವಹಿಸಿದ್ದು, ಮಳೆಯೆಂದ್ಮೇಲೆ ಕೆಸರಾಗದೆ ಇರುತ್ತೇನ್ರಿ ಎಂದು ಸ್ಥಳೀಯರಿಗೆ ಗದರಿಸುತ್ತಾರಂತೆ.
ಸುಸಜ್ಜಿತ ಕ್ರೀಡಾಂಗಣವೇ ಇಲ್ಲದೇ ಬೆಳೆಯುವ ಭವಿಷ್ಯದ ಮಕ್ಕಳು ಜೀವಕ್ಕಾಗುವ ಹಾನಿಯನ್ನೂ ಲೆಕ್ಕಿಸದೇ ಕಾರವಾರದ ಈ ಮೈದಾನದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇದ್ದು, ತಕ್ಷಣ ಸಂದಂಧಪಟ್ಟವರು ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ.