Demand For Pottery : ಸಂತ ಫ್ರಾನ್ಸಿಸ್ ಕ್ಸೇವಿಯರ್ ಪೇಸ್ತ್ನಲ್ಲಿ ಮಡಿಕೆ ಮತ್ತು ಉರುವಲು ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
1005 views
ಉತ್ತರ ಕನ್ನಡ ವಿಡಿಯೋಗಳಿಗೆ ಚಂದಾದಾರರಾಗಿಉತ್ತರ ಕನ್ನಡ :ಕರಾವಳಿ ಭಾಗದ ಮತ್ತೊಂದು ನೆಲೆಬೀಡು ಉತ್ತರ ಕನ್ನಡ.. ಈ ಕಡಲತೀರ ಯಾವಾಗಲೂ ಒಂದಲ್ಲ ಒಂದಕ್ಕೆ ಪ್ರಖ್ಯಾತಿ ಪಡೆಯುತ್ತಲೇ ಇರುತ್ತದೆ.. ಇದೀಗ ಗೋವಾದಲ್ಲಿ ಮತ್ತೊಮ್ಮೆ ಈ ಕಡಲ ತೀರ ಸುದ್ದಿಯಾಗಿದೆ..
ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಪೇಸ್ತ್ಗೆ ಅಂಕೋಲಾದಲ್ಲಿ ತಯಾರಿಸುವ ಮಣ್ಣಿನ ಮಡಿಕೆ ಮತ್ತು ಉರುವಲು ಒಲೆಗಳಿಗೆ ಭಾರೀ ಬೇಡಿಕೆ ಇದೆ.
ಅಂಕೋಲಾ ತಾಲೂಕಿನ ಕುಂಬಾರಕೇರಿ ಗ್ರಾಮದಲ್ಲಿ ಕುಂಬಾರಿಕೆ ಮಾಡುವವರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಜನವರಿ ಕೊನೆಯ ವಾರ ಇಲ್ಲವೇ ಫೆಬ್ರುವರಿ ಮೊದಲ ವಾರದಲ್ಲಿ ಗೋವಾದಲ್ಲಿ ನಡೆಯುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪೇಸ್ತ್ಗೆ ಮಡಿಕೆ ಮತ್ತು ಉರುವಲು ಒಲೆಗಳನ್ನು ಸಾಗಿಸುತ್ತಾರೆ. ಕುಂಬಾರಕೇರಿಯಲ್ಲಿ ಎರಡು ಕುಟುಂಬದವರು ಮಣ್ಣಿನ ಮಡಿಕೆ ಮತ್ತು ಒಲೆ ಮಾಡುವ ಕಾಯಕವನ್ನು ಅನೇಕ ಶತಮಾನಗಳ ಹಿಂದಿನಿಂದಲೇ ಮಾಡುಕೊಂಡು ಬಂದಿರುತ್ತಾರೆ.
ಇಲ್ಲಿ ಮಾಡಿರುವ ಮಣ್ಣಿನ ಮಡಿಕೆಗಳು ಉತ್ತಮವಾಗಿರುತ್ತದೆ. ಅಲ್ಲದೆ ಹೆಚ್ಚಿನ ಬಾಳಿಕೆ ಬರುವಂಥದ್ದು. ಈ ಕಾರಣದಿಂದಾಗಿ ಗೋವಾದಲ್ಲಿ ನಡೆಯುವ ಪೇಸ್ತ್ಗೆ ಇಲ್ಲಿಯ ಮಣ್ಣಿನ ವಸ್ತುಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದ್ದು, ಮಡಿಕೆ ಮತ್ತು ಒಲೆ ಖರೀದಿಗೆ ಜನರು ಮುಗಿ ಬೀಳ್ತಿದ್ದಾರೆ.. ಗೋವಾದಲ್ಲಿ ಪೇಸ್ತ್ಗೆ ಖರೀದಿಸಿದ್ದನ್ನು ಬಂದಿರುವ ಜನರಿಗೆ ಪರಸ್ಪರ ಕಾಣಿಕೆಯಾಗಿ ನೀಡುವುದು ಒಂದು ಸಂಪ್ರದಾಯವಾಗಿದೆ.
ಅಂಕೋಲಾದಿಂದ ಕಳೆದ ಹತ್ತು ವರ್ಷಗಳ ಹಿಂದೆ ಮೂರರಿಂದ ನಾಲ್ಕು ವಾಹನದಲ್ಲಿ ಮಡಿಕೆ ಮತ್ತು ಒಲೆಗಳನ್ನು ಹೇರಿಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ 500 ಮಡಿಕೆ ಮತ್ತು 300 ಒಲೆಗಳನ್ನು ಒಂದು ಕುಟುಂಬ ಹೇರಿಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದಾರೆ. ಗೋವಾದಲ್ಲಿ 7 ದಿನ ನಡೆಯುವ ಈ ಪೇಸ್ತ್ ಸಂದರ್ಭದಲ್ಲಿ ಅಂಕೋಲಾದ ಮಣ್ಣಿನ ಮಡಿಕೆ, ಒಲೆಗಳನ್ನ ಕ್ರೈಸ್ತರು ಪರಸ್ಪರ ಉಡುಗರೆಯಾಗಿ ನೀಡುವುದು ಒಂದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಇದರಿಂದ ನಾವು ಹೆಚ್ಚಿನ ಪ್ರಮಾಣದಲ್ಲಿ ಮಡಿಕೆ ತಯಾರು ಮಾಡುವುದಿಲ್ಲ. ಮಡಿಕೆ ಮಾಡಲು ಮಣ್ಣಿನ ಕೊರತೆಯು ತುಂಬಾ ಇದೆ. ಆದರು ಗೋವಾದಲ್ಲಿ ನಡೆಯುವ ಪೇಸ್ತ್ಗೆ ನಾವು ಇಲ್ಲಿಂದ ಮಡಿಕೆ ಊರುವಲು ಒಲೆಗಳನ್ನು ಕಳಿಸುತ್ತೇವೆ ಇದು ನಮ್ಮ ಪೂರ್ವಜರಿಂದಲೇ ನಡೆದುಕೊಂಡು ಬಂದಿದೆ ಎನ್ನುತ್ತಾರೆ.
ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಪೇಸ್ತ್ಗೆ ಅಂಕೋಲಾದಲ್ಲಿ ತಯಾರಿಸುವ ಮಣ್ಣಿನ ಮಡಿಕೆ ಮತ್ತು ಉರುವಲು ಒಲೆಗಳಿಗೆ ಭಾರೀ ಬೇಡಿಕೆ ಇದೆ.
ಅಂಕೋಲಾ ತಾಲೂಕಿನ ಕುಂಬಾರಕೇರಿ ಗ್ರಾಮದಲ್ಲಿ ಕುಂಬಾರಿಕೆ ಮಾಡುವವರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಜನವರಿ ಕೊನೆಯ ವಾರ ಇಲ್ಲವೇ ಫೆಬ್ರುವರಿ ಮೊದಲ ವಾರದಲ್ಲಿ ಗೋವಾದಲ್ಲಿ ನಡೆಯುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪೇಸ್ತ್ಗೆ ಮಡಿಕೆ ಮತ್ತು ಉರುವಲು ಒಲೆಗಳನ್ನು ಸಾಗಿಸುತ್ತಾರೆ. ಕುಂಬಾರಕೇರಿಯಲ್ಲಿ ಎರಡು ಕುಟುಂಬದವರು ಮಣ್ಣಿನ ಮಡಿಕೆ ಮತ್ತು ಒಲೆ ಮಾಡುವ ಕಾಯಕವನ್ನು ಅನೇಕ ಶತಮಾನಗಳ ಹಿಂದಿನಿಂದಲೇ ಮಾಡುಕೊಂಡು ಬಂದಿರುತ್ತಾರೆ.
ಇಲ್ಲಿ ಮಾಡಿರುವ ಮಣ್ಣಿನ ಮಡಿಕೆಗಳು ಉತ್ತಮವಾಗಿರುತ್ತದೆ. ಅಲ್ಲದೆ ಹೆಚ್ಚಿನ ಬಾಳಿಕೆ ಬರುವಂಥದ್ದು. ಈ ಕಾರಣದಿಂದಾಗಿ ಗೋವಾದಲ್ಲಿ ನಡೆಯುವ ಪೇಸ್ತ್ಗೆ ಇಲ್ಲಿಯ ಮಣ್ಣಿನ ವಸ್ತುಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದ್ದು, ಮಡಿಕೆ ಮತ್ತು ಒಲೆ ಖರೀದಿಗೆ ಜನರು ಮುಗಿ ಬೀಳ್ತಿದ್ದಾರೆ.. ಗೋವಾದಲ್ಲಿ ಪೇಸ್ತ್ಗೆ ಖರೀದಿಸಿದ್ದನ್ನು ಬಂದಿರುವ ಜನರಿಗೆ ಪರಸ್ಪರ ಕಾಣಿಕೆಯಾಗಿ ನೀಡುವುದು ಒಂದು ಸಂಪ್ರದಾಯವಾಗಿದೆ.
ಅಂಕೋಲಾದಿಂದ ಕಳೆದ ಹತ್ತು ವರ್ಷಗಳ ಹಿಂದೆ ಮೂರರಿಂದ ನಾಲ್ಕು ವಾಹನದಲ್ಲಿ ಮಡಿಕೆ ಮತ್ತು ಒಲೆಗಳನ್ನು ಹೇರಿಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ 500 ಮಡಿಕೆ ಮತ್ತು 300 ಒಲೆಗಳನ್ನು ಒಂದು ಕುಟುಂಬ ಹೇರಿಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದಾರೆ. ಗೋವಾದಲ್ಲಿ 7 ದಿನ ನಡೆಯುವ ಈ ಪೇಸ್ತ್ ಸಂದರ್ಭದಲ್ಲಿ ಅಂಕೋಲಾದ ಮಣ್ಣಿನ ಮಡಿಕೆ, ಒಲೆಗಳನ್ನ ಕ್ರೈಸ್ತರು ಪರಸ್ಪರ ಉಡುಗರೆಯಾಗಿ ನೀಡುವುದು ಒಂದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಇದರಿಂದ ನಾವು ಹೆಚ್ಚಿನ ಪ್ರಮಾಣದಲ್ಲಿ ಮಡಿಕೆ ತಯಾರು ಮಾಡುವುದಿಲ್ಲ. ಮಡಿಕೆ ಮಾಡಲು ಮಣ್ಣಿನ ಕೊರತೆಯು ತುಂಬಾ ಇದೆ. ಆದರು ಗೋವಾದಲ್ಲಿ ನಡೆಯುವ ಪೇಸ್ತ್ಗೆ ನಾವು ಇಲ್ಲಿಂದ ಮಡಿಕೆ ಊರುವಲು ಒಲೆಗಳನ್ನು ಕಳಿಸುತ್ತೇವೆ ಇದು ನಮ್ಮ ಪೂರ್ವಜರಿಂದಲೇ ನಡೆದುಕೊಂಡು ಬಂದಿದೆ ಎನ್ನುತ್ತಾರೆ.