ರೌದ್ರಾವತಾರ ತಾಳಿದ ಕಡಲು ; ಅಪಾಯ ಲೆಕ್ಕಿಸದೇ ಸಮುದ್ರಕ್ಕಿಳಿಯುತ್ತಿರುವ ಪ್ರವಾಸಿಗರು!
1053 views
ಉತ್ತರ ಕನ್ನಡ ವಿಡಿಯೋಗಳಿಗೆ ಚಂದಾದಾರರಾಗಿಉತ್ತರಕನ್ನಡ:ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಕಡಲತೀರ ರೌದ್ರಾವತಾರ ತಾಳಿದೆ. ಬಿಪರ್ ಜಾಯ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ಇಷ್ಟಾದ್ರೂ ಕೂಡ ಎಚ್ಚೆತ್ತುಕೊಳ್ಳದ ಪ್ರವಾಸಿಗರು ಬೀಚ್ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅಪಾಯದ ಕಡಲಿನಲ್ಲೇ ಇಳಿದು ಎಂಜಾಯ್ ಮಾಡುತ್ತಿದ್ದಾರೆ.
ಹೌದು.. ಕರವಾಳಿ ಭಾಗದಲ್ಲಿ ಗಾಳಿ ಮಳೆ ಜೋರಾಗಿದೆ. ಇದರ ನಡುವೆ ಸಮುದ್ರ ಸಹ ತನ್ನ ಸ್ವರೂಪ ಬದಲಿಸಿದ್ದು ರೌದ್ರಾವತಾರ ತಾಳಿದೆ. ಕಳೆದ ಎರಡು ದಿನಗಳಿಂದ ಅಲೆಗಳ ಅಬ್ಬರ ಅಧಿಕವಾಗಿದ್ದು ಪ್ರವಾಸಿಗರು ಸ್ವಲ್ಪ ಯಾಮಾರಿದರು, ಅಪಾಯ ಕಟ್ಟಿಟ್ಟ ಬುತ್ತಿ. ವೀಕೆಂಡ್ ಹಿನ್ನಲೆಯಲ್ಲಿ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅಪಾಯಕಾರಿ ಕಡಲಿನಲ್ಲಿಯೇ ಇಳಿದು ಆಟ ಆಡಲು ಮುಂದಾಗುತ್ತಿದ್ದಾರೆ. ಇನ್ನು ಪ್ರವಾಸಿಗರನ್ನ ಎಚ್ಚರಿಸಲು ಟೂರಿಸ್ಟ್ ಮಿತ್ರ, ಪೊಲೀಸರನ್ನ ನಿಯೋಜನೆ ಮಾಡಿದ್ದು ಸಿಬ್ಬಂದಿ ಮಾತಿಗೂ ಲೆಕ್ಕಿಸದೇ ಪ್ರವಾಸಿಗರು ಕಡಲಿಗೆ ಇಳಿಯುತ್ತಿದ್ದಾರೆ.
ಇನ್ನು ಮೂರು ದಿನಗಳ ಕಾಲ ಕಡಲಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಕಡಲ ತೀರಗಳಲ್ಲಿ ಕೆಂಪು ಬಾವುಟಗಳನ್ನ ಹಾಕಿ ಪ್ರವಾಸಿಗರಿಗೆ ಎಚ್ಚರಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗುತ್ತಿದ್ದಾರೆ. ಆದಾಗ್ಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜಿಲ್ಲಾಡಳಿತದ ಎಚ್ಚರಿಕೆ ಕ್ಯಾರೆ ಎನ್ನುತ್ತಿಲ್ಲ. ಇನ್ನು ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕುವ ಪ್ರವಾಸಿಗರ ರಕ್ಷಣೆ ಮಾಡಲು ಕಡಲ ತೀರದಲ್ಲಿ ಲೈಫ್ ಗಾರ್ಡ್ ಗಳನ್ನ ನಿಯೋಜನೆ ಮಾಡಲಾಗಿದೆ.
ಹೌದು.. ಕರವಾಳಿ ಭಾಗದಲ್ಲಿ ಗಾಳಿ ಮಳೆ ಜೋರಾಗಿದೆ. ಇದರ ನಡುವೆ ಸಮುದ್ರ ಸಹ ತನ್ನ ಸ್ವರೂಪ ಬದಲಿಸಿದ್ದು ರೌದ್ರಾವತಾರ ತಾಳಿದೆ. ಕಳೆದ ಎರಡು ದಿನಗಳಿಂದ ಅಲೆಗಳ ಅಬ್ಬರ ಅಧಿಕವಾಗಿದ್ದು ಪ್ರವಾಸಿಗರು ಸ್ವಲ್ಪ ಯಾಮಾರಿದರು, ಅಪಾಯ ಕಟ್ಟಿಟ್ಟ ಬುತ್ತಿ. ವೀಕೆಂಡ್ ಹಿನ್ನಲೆಯಲ್ಲಿ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅಪಾಯಕಾರಿ ಕಡಲಿನಲ್ಲಿಯೇ ಇಳಿದು ಆಟ ಆಡಲು ಮುಂದಾಗುತ್ತಿದ್ದಾರೆ. ಇನ್ನು ಪ್ರವಾಸಿಗರನ್ನ ಎಚ್ಚರಿಸಲು ಟೂರಿಸ್ಟ್ ಮಿತ್ರ, ಪೊಲೀಸರನ್ನ ನಿಯೋಜನೆ ಮಾಡಿದ್ದು ಸಿಬ್ಬಂದಿ ಮಾತಿಗೂ ಲೆಕ್ಕಿಸದೇ ಪ್ರವಾಸಿಗರು ಕಡಲಿಗೆ ಇಳಿಯುತ್ತಿದ್ದಾರೆ.
ಇನ್ನು ಮೂರು ದಿನಗಳ ಕಾಲ ಕಡಲಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಕಡಲ ತೀರಗಳಲ್ಲಿ ಕೆಂಪು ಬಾವುಟಗಳನ್ನ ಹಾಕಿ ಪ್ರವಾಸಿಗರಿಗೆ ಎಚ್ಚರಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗುತ್ತಿದ್ದಾರೆ. ಆದಾಗ್ಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜಿಲ್ಲಾಡಳಿತದ ಎಚ್ಚರಿಕೆ ಕ್ಯಾರೆ ಎನ್ನುತ್ತಿಲ್ಲ. ಇನ್ನು ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕುವ ಪ್ರವಾಸಿಗರ ರಕ್ಷಣೆ ಮಾಡಲು ಕಡಲ ತೀರದಲ್ಲಿ ಲೈಫ್ ಗಾರ್ಡ್ ಗಳನ್ನ ನಿಯೋಜನೆ ಮಾಡಲಾಗಿದೆ.