ರಾಜ್ಯದಲ್ಲಿ ಬರ ಇದ್ರೂ ಮತ್ತೆ ತಮಿಳುನಾಡಿಗೆ ನೀರು ಬಿಡು ಎಂದಿದ್ದು ಸರಿಯಲ್ಲ ; ಎಚ್ಕೆ ಪಾಟೀಲ್
1069 views
ವಿಜಯಪುರ ವಿಡಿಯೋಗಳಿಗೆ ಚಂದಾದಾರರಾಗಿವಿಜಯಪುರ: ಮತ್ತೆ ತಮಿಳುನಾಡಿಗೆ ನೀರು ಬಿಡುವ ಕುರಿತು ಕಾನೂನು ಸಚಿವ ಎಚ್ಕೆ ಪಾಟೀಲ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಇದು ಕೇಂದ್ರ ಸರ್ಕಾರದ ಅತ್ಯಂತ ನಿರ್ಲಕ್ಷ ನೀತಿ, ಕಾವೇರಿ ಜಲ ವಿವಾದ ಬಗೆಹರಿಸುವ ವಿಚಾರ, ಕಳಕಳಿ ಕಾಳಜಿ ಆತುರ ಕೇಂದ್ರಕ್ಕಿಲ್ಲ ರಾಜ್ಯದಲ್ಲಿ 215ಕ್ಕೂ ಅಧಿಕ ತಾಲೂಕುಗಳು ಬರಗಾಲ ಎಂದು ಕೇಂದ್ರದ ನಿಯಮಗಳ ಪ್ರಕಾರ ಘೋಷಣೆಯಾಗಿದೆ ಎಂದು ಹೇಳಿದರು.
ಕಾವೇರಿಯ ನೀರಿನ ಪ್ರಮಾಣ ಕಡಿಮೆಯಿದೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯೋ ನೀರಿನ ಸಮಸ್ಯೆಯಾದೀತು ಎಂಬ ಚಿಂತೆಯಲ್ಲಿ ನಾವಿದ್ದೇವೆ, 2600 ಕ್ಯೂಸೆಕ್ ನೀರು ಬಿಡಲು CWRC ಕಮಿಟಿ ಹೇಳುತ್ತಿದೆ, ಕೇಂದ್ರ ಸರ್ಕಾರ ಈ ಗಮನ ಹರಿಸದೇ ಇರುವುದು ದುರ್ದೈವದ ಸಂಗತಿ, ಪ್ರಧಾನಿ ಮೋದಿಯವರು ಈ ವಿಚಾರದಲ್ಲಿ ಸೂಕ್ತ ಗಮನಹರಿಸಬೇಕು, ಮುಂಬರುವ ದಿನಗಳಲ್ಲಿ ಎದುರಾಗುವ ದೊಡ್ಡ ಸಮಸ್ಯೆಗಳನ್ನ ಈಗಲೇ ಬಗೆಹರಿಸಬೇಕೆಂದು ಮನವಿ ಮಾಡಿದರು.
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ, ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಎಲ್ಲಾ ರಾಜ್ಯ ಸರ್ಕಾರ ಹಾಗೂ ಜನರು ಕೇಂದ್ರದ ಬಗ್ಗೆ ಭರವಸೆಯನ್ನ ಕಳೆದುಕೊಳ್ಳಬಾರದು ಇಲ್ಲವಾದರೆ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ತಮಿಳುನಾಡಿಗೆ 2600 ಕ್ಯೂಸೆಕ್ ನೀರು ಬಿಡಲು ನೀಡಿರೋ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು, ಈ ವಿಚಾರಕ್ಕೆ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕು ಪ್ರಧಾನಿಯವರನ್ನ ಭೇಟಿಯಾಗಲು ನಮ್ಮ ಸಿಎಂ ಹಾಗೂ ನೀರಾವರಿ ಸಚಿವರು ಪ್ರಯತ್ನ ಪಟ್ಟರು ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನಮ್ಮ ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ, ರಾಜ್ಯದ ಸಂಸದರೇ ಪಿಎಂ ಅವರಿಗೆ ಭೇಟಿಯಾಗಿ ಸಮಸ್ಯೆಯನ್ನ ವಿವರಿಸಬೇಕಿತ್ತು, ರಾಜ್ಯದಲ್ಲಿ ಬರ ಉಂಟಾಗಿದೆ ಎಂದು ಘೋಷಣೆ ಮಾಡಿದ ಬಳಿಕವೂ 2600 ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಕಾವೇರಿಯ ನೀರಿನ ಪ್ರಮಾಣ ಕಡಿಮೆಯಿದೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯೋ ನೀರಿನ ಸಮಸ್ಯೆಯಾದೀತು ಎಂಬ ಚಿಂತೆಯಲ್ಲಿ ನಾವಿದ್ದೇವೆ, 2600 ಕ್ಯೂಸೆಕ್ ನೀರು ಬಿಡಲು CWRC ಕಮಿಟಿ ಹೇಳುತ್ತಿದೆ, ಕೇಂದ್ರ ಸರ್ಕಾರ ಈ ಗಮನ ಹರಿಸದೇ ಇರುವುದು ದುರ್ದೈವದ ಸಂಗತಿ, ಪ್ರಧಾನಿ ಮೋದಿಯವರು ಈ ವಿಚಾರದಲ್ಲಿ ಸೂಕ್ತ ಗಮನಹರಿಸಬೇಕು, ಮುಂಬರುವ ದಿನಗಳಲ್ಲಿ ಎದುರಾಗುವ ದೊಡ್ಡ ಸಮಸ್ಯೆಗಳನ್ನ ಈಗಲೇ ಬಗೆಹರಿಸಬೇಕೆಂದು ಮನವಿ ಮಾಡಿದರು.
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ, ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಎಲ್ಲಾ ರಾಜ್ಯ ಸರ್ಕಾರ ಹಾಗೂ ಜನರು ಕೇಂದ್ರದ ಬಗ್ಗೆ ಭರವಸೆಯನ್ನ ಕಳೆದುಕೊಳ್ಳಬಾರದು ಇಲ್ಲವಾದರೆ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ತಮಿಳುನಾಡಿಗೆ 2600 ಕ್ಯೂಸೆಕ್ ನೀರು ಬಿಡಲು ನೀಡಿರೋ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು, ಈ ವಿಚಾರಕ್ಕೆ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕು ಪ್ರಧಾನಿಯವರನ್ನ ಭೇಟಿಯಾಗಲು ನಮ್ಮ ಸಿಎಂ ಹಾಗೂ ನೀರಾವರಿ ಸಚಿವರು ಪ್ರಯತ್ನ ಪಟ್ಟರು ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನಮ್ಮ ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ, ರಾಜ್ಯದ ಸಂಸದರೇ ಪಿಎಂ ಅವರಿಗೆ ಭೇಟಿಯಾಗಿ ಸಮಸ್ಯೆಯನ್ನ ವಿವರಿಸಬೇಕಿತ್ತು, ರಾಜ್ಯದಲ್ಲಿ ಬರ ಉಂಟಾಗಿದೆ ಎಂದು ಘೋಷಣೆ ಮಾಡಿದ ಬಳಿಕವೂ 2600 ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.