ರಾಜ್ಯದ ಸಂಸದರಿಗೆ ಕೇಂದ್ರದಲ್ಲಿ ಬಾಯಿ ತೆಗೆಯೋ ತಾಕತ್ತು ಇಲ್ಲ; ಎಂಬಿ ಪಾಟೀಲ್ ಕಿಡಿ
1038 views
ವಿಜಯಪುರ ವಿಡಿಯೋಗಳಿಗೆ ಚಂದಾದಾರರಾಗಿವಿಜಯಪುರ: ಸಿಎಂ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡಿಸಿದ್ದಾರೆ, ಇದು ಸಾಮಾಜಿಕ ಹಾಗೂ ಅಭಿವೃದ್ದಿ ಸರಿದೂಗಿಸೋ ಬಜೆಟ್, ಐದು ಗ್ಯಾರಂಟಿಗಳಿಗೆ ಹಾಗೂ ಎಲ್ಲಾ ಇಲಾಖೆಗಳಿಗೆ ಹಣ ಒದಗಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನ್ಯಾಯದ ಮಧ್ಯೆ ಉತ್ತಮ ಬಜೆಟ್ ನೀಡಲಾಗಿದೆ, ನಾವು ರಾಜ್ಯಕ್ಕೆ ಆದ ಅನ್ಯಾಯದ ವಿರುದ್ದ ದೆಹಲಿಗೆ ಹೋಗಿ ಪ್ರತಿಭಟನೆ ಮಾಡ ಬಂದಿದ್ದೇವೆ, 14ನೇ ಕಮೀಷನ್ ನಿಂದ 15 ನೇ ಕಮೀಷನ್ ನಲ್ಲಿ ಅನುದಾನ ಹೆಚ್ಚಾಗಬೇಕಿತ್ತು, 62 ಸಾವಿರ ಕೋಟಿ ರೂಪಾಯಿ ಕಡಿಮೆ ಬಂದಿದೆ,
ಈ ಬಾರಿ ಬಜೆಟ್ ಗಾತ್ರ ಹೆಚ್ಚಾದರೂ ಸಹ ಕೇಂದ್ರದಿಂದ ಹಣ ಬಂದಿಲ್ಲ, ಸಿಎಂ ಬಜೆಟ್ ಮೂಲಕ ಶ್ವೇತ ಪತ್ರ ಹೊರಡಿಸಿದ್ದಾರೆ, ಹಾಗಾಗಿ ಬಜೆಟ್ ಮಂಡನೆಯಲ್ಲಿ ಬಿಜೆಪಿಯವರು 10 ನಿಮಿಷ ಕೂಡಲಿಲ್ಲ, ಕೇಂದ್ರದ ಬಂಡವಾಳ ಹೊರ ಬರುತ್ತದೆ ಎಂದು ಪಲಾಯನ ಮಾಡಿ ಓಡಿ ಹೋದರು ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಇಲಾಖೆಗಳಿಗೂ ಅನುದಾನ ನೀಡಲಾಗಿದೆ, ಗ್ಯಾರಂಟಿಗಳಿಗೆ 56,000 ಕೋಟಿ ಜೊತೆಗೆ ಇತರೆ ಯೋಜನೆಗಳಿಗೂ ಹಣ ನೀಡಲಾಗಿದೆ, ಬೆಂಗಳೂರು ಅಭಿವೃದ್ಧಿ ಹಿಡಿದು ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗಿದೆ, ವಿಜಯಪುರ ಜಿಲ್ಲೆಗೂ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ, ಧಾರವಾಡದಲ್ಲಿ 6000 ಕೋಟಿ ವೆಚ್ಚದಲ್ಲಿ ಕೇಂದ್ರ ರಾಜ್ಯ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ, ಆರ್ಥಿಕ ಶಿಸ್ತನನ್ನು ಮೀರಿ ಹೋಗಿಲ್ಲ, ಕೇಂದ್ರದ ಹಣ ರಾಜ್ಯಕ್ಕೆ ಬರದ ಕಾರಣ ಕೊರತೆ ಬಜೆಟ್ ಆಗಿದೆ ಎಂದು ಹೇಳಿದರು.
ರಾಜ್ಯದ ಎಂಪಿಗಳಿಗೆ ಕೇಂದ್ರದಲ್ಲಿ ಬಾಯಿ ತೆಗೆಯೋ ತಾಕತ್ತು ಇಲ್ಲ, ಬಜೆಟ್ ನಡೆಯುವಾಗಲೇ ಇಲ್ಲ ಎಂದು ಬಿಜೆಪಿಯವರು ಹಾಡಬೇಕಿತ್ತು, ಹೊರಗಡೆ ಹೋಗಿ ಹಾಡುವುದರ ಬಗದಲಾಗಿ ವಿಧಾನಸೌಧದಲ್ಲೇ ಹಾಡಬೇಕಿತ್ತು ಎಂದು ಟಾಂಗ್ ಕೊಟ್ಟರು, ಯಡಿಯೂರಪ್ಪ ಸಿಎಂ ಆಗಿದ್ದಾಗ 606 ಭರವಸೆ ನೀಡಿದ್ದರು, ಅದರಲ್ಲಿ 50 ಭರವಸೆಗಳನ್ನು ಮಾತ್ರ ಈಡೇರಿಸಿ 550 ಭರವಸೆ ಈಡೇರಿಸಲಿಲ್ಲಾ, 10 ಪರ್ಸೆಂಟ್ ಸಹ ಈಡೇರಿಸಲಿಲ್ಲ, 2013ರಲ್ಲಿ ಸಿಎಂ ಸಿದ್ದರಾಮಯ್ಯ 165 ಭರವಸೆ ನೀಡಿ 158 ಭರವಸೆ ಈಡೇರಿಸಿ 30 ಯೋಜನೆ ಜಾರಿ ಮಾಡಿದ್ದೇವೆ, ಈಗ ಐದು ಗ್ಯಾರಂಟಿಗಳ ಭರವಸೆ ನೀಡಿ ಅವುಗಳನ್ನು ಈಡೇರಿಸಿದ್ದೇವೆ, ಯಡಿಯೂರಪ್ಪ ತಮ್ಮ ಮುಖ ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
ವಿಜಯಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನ್ಯಾಯದ ಮಧ್ಯೆ ಉತ್ತಮ ಬಜೆಟ್ ನೀಡಲಾಗಿದೆ, ನಾವು ರಾಜ್ಯಕ್ಕೆ ಆದ ಅನ್ಯಾಯದ ವಿರುದ್ದ ದೆಹಲಿಗೆ ಹೋಗಿ ಪ್ರತಿಭಟನೆ ಮಾಡ ಬಂದಿದ್ದೇವೆ, 14ನೇ ಕಮೀಷನ್ ನಿಂದ 15 ನೇ ಕಮೀಷನ್ ನಲ್ಲಿ ಅನುದಾನ ಹೆಚ್ಚಾಗಬೇಕಿತ್ತು, 62 ಸಾವಿರ ಕೋಟಿ ರೂಪಾಯಿ ಕಡಿಮೆ ಬಂದಿದೆ,
ಈ ಬಾರಿ ಬಜೆಟ್ ಗಾತ್ರ ಹೆಚ್ಚಾದರೂ ಸಹ ಕೇಂದ್ರದಿಂದ ಹಣ ಬಂದಿಲ್ಲ, ಸಿಎಂ ಬಜೆಟ್ ಮೂಲಕ ಶ್ವೇತ ಪತ್ರ ಹೊರಡಿಸಿದ್ದಾರೆ, ಹಾಗಾಗಿ ಬಜೆಟ್ ಮಂಡನೆಯಲ್ಲಿ ಬಿಜೆಪಿಯವರು 10 ನಿಮಿಷ ಕೂಡಲಿಲ್ಲ, ಕೇಂದ್ರದ ಬಂಡವಾಳ ಹೊರ ಬರುತ್ತದೆ ಎಂದು ಪಲಾಯನ ಮಾಡಿ ಓಡಿ ಹೋದರು ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಇಲಾಖೆಗಳಿಗೂ ಅನುದಾನ ನೀಡಲಾಗಿದೆ, ಗ್ಯಾರಂಟಿಗಳಿಗೆ 56,000 ಕೋಟಿ ಜೊತೆಗೆ ಇತರೆ ಯೋಜನೆಗಳಿಗೂ ಹಣ ನೀಡಲಾಗಿದೆ, ಬೆಂಗಳೂರು ಅಭಿವೃದ್ಧಿ ಹಿಡಿದು ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗಿದೆ, ವಿಜಯಪುರ ಜಿಲ್ಲೆಗೂ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ, ಧಾರವಾಡದಲ್ಲಿ 6000 ಕೋಟಿ ವೆಚ್ಚದಲ್ಲಿ ಕೇಂದ್ರ ರಾಜ್ಯ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ, ಆರ್ಥಿಕ ಶಿಸ್ತನನ್ನು ಮೀರಿ ಹೋಗಿಲ್ಲ, ಕೇಂದ್ರದ ಹಣ ರಾಜ್ಯಕ್ಕೆ ಬರದ ಕಾರಣ ಕೊರತೆ ಬಜೆಟ್ ಆಗಿದೆ ಎಂದು ಹೇಳಿದರು.
ರಾಜ್ಯದ ಎಂಪಿಗಳಿಗೆ ಕೇಂದ್ರದಲ್ಲಿ ಬಾಯಿ ತೆಗೆಯೋ ತಾಕತ್ತು ಇಲ್ಲ, ಬಜೆಟ್ ನಡೆಯುವಾಗಲೇ ಇಲ್ಲ ಎಂದು ಬಿಜೆಪಿಯವರು ಹಾಡಬೇಕಿತ್ತು, ಹೊರಗಡೆ ಹೋಗಿ ಹಾಡುವುದರ ಬಗದಲಾಗಿ ವಿಧಾನಸೌಧದಲ್ಲೇ ಹಾಡಬೇಕಿತ್ತು ಎಂದು ಟಾಂಗ್ ಕೊಟ್ಟರು, ಯಡಿಯೂರಪ್ಪ ಸಿಎಂ ಆಗಿದ್ದಾಗ 606 ಭರವಸೆ ನೀಡಿದ್ದರು, ಅದರಲ್ಲಿ 50 ಭರವಸೆಗಳನ್ನು ಮಾತ್ರ ಈಡೇರಿಸಿ 550 ಭರವಸೆ ಈಡೇರಿಸಲಿಲ್ಲಾ, 10 ಪರ್ಸೆಂಟ್ ಸಹ ಈಡೇರಿಸಲಿಲ್ಲ, 2013ರಲ್ಲಿ ಸಿಎಂ ಸಿದ್ದರಾಮಯ್ಯ 165 ಭರವಸೆ ನೀಡಿ 158 ಭರವಸೆ ಈಡೇರಿಸಿ 30 ಯೋಜನೆ ಜಾರಿ ಮಾಡಿದ್ದೇವೆ, ಈಗ ಐದು ಗ್ಯಾರಂಟಿಗಳ ಭರವಸೆ ನೀಡಿ ಅವುಗಳನ್ನು ಈಡೇರಿಸಿದ್ದೇವೆ, ಯಡಿಯೂರಪ್ಪ ತಮ್ಮ ಮುಖ ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು.