ಪರೀಕ್ಷೆಯೆಂದಾಕ್ಷಣ ವಿದ್ಯಾರ್ಥಿಗಳು ಭಯಪಡುತ್ತಾರೆ. ಪರೀಕ್ಷೆಯ ಭಯದಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರಿಂದಾಗಿಯೇ ಕೆಲವು ವಿದ್ಯಾರ್ಥಿಗಳು ಹೇಳುವಂತೆ ಪರೀಕ್ಷಾ ಕೊಠಡಿ ಪ್ರವೇಶಿಸುತ್ತಿದ್ದಂತೆಯೆ ಮನಸ್ಸು ಖಾಲಿಯಾಗಿ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿದ್ದು ಬರೆಯಲಾಗುವುದಿಲ್ಲ. ಅಥವಾ ಯಾವ ಪ್ರಶ್ನೆಗೆ ಯಾವ ಉತ್ತರ ಸರಿಯೆನ್ನುವುದು ಅರಿವಾಗದೇ ಇರಬಹುದು. ಹಾಗಾಗಿ ಮಕ್ಕಳಲ್ಲಿ ಹಿಂಜರಿಕೆ ಹೋಗಲಾಡಿಸಿ ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ ಎಂಬುವುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.