'ಬಾಳೇ ಬಂಗಾರ' ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ; ಸಂತಸ ಹಂಚಿಕೊಂಡ ನಟ
2675 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ನಾನ್ ಫೀಚರ್ (ಸ್ಪೆಷಲ್ ಮೆನ್ಷನ್) ವಿಭಾಗದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುರಿತು ತಯಾರಾಗಿರುವ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರಕ್ಕಾಗಿ ನಿರ್ದೇಶಕ ಅನಿರುದ್ಧ್ ಜತ್ಕರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈಗಾಗಲೇ ಈ ಸಾಕ್ಷ್ಯಚಿತ್ರವು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’, ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’, ‘ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲೆ ಬರೆದಿದೆ. ಲಿವಿಂಗ್ ಲೆಜೆಂಡ್ ಬಗ್ಗೆ ತಯಾರಾಗಿರುವ ಸುದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಇದು ಎಂಬುದು ಮತ್ತೊಂದು ವಿಶೇಷ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ಅನಿರುದ್ಧ್, 'ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ಇದು 3 ವರ್ಷಗಳ ಪರಿಶ್ರಮವಾಗಿದ್ದು, ಭಾರತಿ ವಿಷ್ಣುವರ್ಧನ್ ಅವರ ಬಹುತೇಕ ಸಿನಿಮಾಗಳನ್ನು ವೀಕ್ಷಿಸಿ, ಸಾಕಷ್ಟು ರಿಸರ್ಚ್ ಮಾಡಿ, ತಯಾರಿಸಿರುವ ಸಾಕ್ಷ್ಯಚಿತ್ರ ಇದಾಗಿದೆ. 'ಬಾಳೇ ಬಂಗಾರ' ಸಾಕ್ಷ್ಯಚಿತ್ರದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನವನ್ನ ನಾನೇ ಮಾಡಿದ್ದೆ. ಈಗ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದಕ್ಕೆ ನಮ್ಮ ಕುಟುಂಬ ಮತ್ತು ನನ್ನ ತಂಡದ ಬೆಂಬಲವೇ ಕಾರಣ' ಎನ್ನುತ್ತಾರೆ.