'ಸೂಪರ್ ಸ್ಟಾರ್' ಕೃಷ್ಣ ಪ್ರತಿಮೆ ಅನಾವರಣ ಮಾಡಿದ ನಟ ಕಮಲ್ ಹಾಸನ್; 'ಥ್ಯಾಂಕ್ಸ್' ಎಂದ ಮಹೇಶ್ ಬಾಬು
1054 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿತೆಲುಗು 'ಸೂಪರ್ ಸ್ಟಾರ್' ಕೃಷ್ಣ ಅವರ ಪ್ರತಿಮೆಯನ್ನು ಬಹುಭಾಷಾ ನಟ ಕಮಲ್ ಹಾಸನ್ ಅವರು ಅನಾವರಣಗೊಳಿಸಿದ್ದಾರೆ. ವಿಜಯವಾಡದ ಗುರುನಾನಕ್ ಕಾಲೋನಿಯಲ್ಲಿರುವ ಕೆಡಿಜಿಒ ಪಾರ್ಕ್ನಲ್ಲಿ ಈ ಪ್ರತಿಮೆ ಅನಾವರಣಗೊಂಡಿದೆ. ವಿಜಯವಾಡ ಪೂರ್ವ ಕ್ಷೇತ್ರದ ವೈಸಿಪಿ ಉಸ್ತುವಾರಿ ವೇದಿನೇನಿ ಅವಿನಾಶ್ ನೇತೃತ್ವದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಅವಿನಾಶ್ ಅವರ ಆಹ್ವಾನದ ಮೇರೆಗೆ ಕಮಲ್ ಹಾಸನ್ ಅವರು ಕೃಷ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಕಮಲ್ ಹಾಸನ್ ಸದ್ಯ 'ಇಂಡಿಯನ್ 2' ಸಿನಿಮಾದ ಚಿತ್ರೀಕರಣಕ್ಕಾಗಿ ವಿಜಯವಾಡದಲ್ಲಿ ಬೀಡುಬಿಟ್ಟಿದ್ದಾರೆ. ತಂದೆ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣದ ಮಾಡಿದಕ್ಕಾಗಿ ನಟ ಮಹೇಶ್ ಬಾಬು ಅವರು ಧನ್ಯವಾದ ತಿಳಿಸಿದ್ದಾರೆ. 'ವಿಜಯವಾಡಲ್ಲಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ದಕ್ಕಾಗಿ ಕಮಲ್ ಹಾಸನ್ ಅವರಿಗೆ ಮತ್ತು ದೇವಿನೇನಿ ಅವಿನಾಶ್ ಅವರಿಗೆ ನನ್ನ ಧನ್ಯವಾದಗಳು. ಕಮಲ್ ಹಾಸನ್ ಅವರು ನಮ್ಮ ತಂದೆಯ ಪ್ರತಿಮೆ ಅನಾವರಣ ಮಾಡಿದ್ದು ನಮಗೆ ಹೆಮ್ಮೆ ತಂದಿದೆ' ಎಂದು ಮಹೇಶ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.