'ದಾಸ ಸಾಹಿತ್ಯ ಒಂದು ಮತ, ಮಠಕ್ಕೆ ಸೇರಿದ್ದಲ್ಲ, ಅದು ಎಲ್ಲರಿಗೂ ಬೇಕು...'- ನಟ ಪ್ರಭಂಜನ ದೇಶಪಾಂಡೆ
1257 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ2021ರಲ್ಲಿ ಶ್ರೀ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನು ಆಧರಿಸಿದ 'ಶ್ರೀ ಜಗನ್ನಾಥ ದಾಸರು' ಚಿತ್ರವನ್ನು ನಿರ್ಮಾಪಕ ಮತ್ತು ನಿರ್ದೇಶಕ ಮಧುಸೂದನ ಹವಾಲ್ದಾರ್ ಅವರು ತೆರೆಗೆ ತಂದಿದ್ದರು. 'ಶ್ರೀ ಜಗನ್ನಾಥ ದಾಸರು' ಸಿನಿಮಾವು ಅಪಾರವಾದ ಸಕ್ಸಸ್ ಪಡೆದುಕೊಂಡಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಜನಮನ್ನಣೆ ಆ ಚಿತ್ರಕ್ಕೆ ಸಿಕ್ಕಿತ್ತು. ಇದೀಗ ಅದೇ ತಂಡವು ಕರ್ನಾಟಕದ ಮತ್ತೋರ್ವ ಶ್ರೇಷ್ಠ ಹರಿದಾಸರಾದ ಶ್ರೀ ಪ್ರಸನ್ನ ವೆಂಕಟದಾಸರ ಕುರಿತು 'ಶ್ರೀ ಪ್ರಸನ್ನ ವೆಂಕಟ ದಾಸರು' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜುಲೈ 7ರಂದು ಆ ಸಿನಿಮಾ ತೆರೆಗೆ ಬಂದಿದೆ. ಆ ಹಿನ್ನೆಲೆಯಲ್ಲಿ 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರದ ಕುರಿತು 'ವಿಜಯ ಕರ್ನಾಕಟ ವೆಬ್' ಜೊತೆಗೆ ನಿರ್ದೇಶಕರಾದ ಮಧುಸೂದನ್ ಹವಲ್ದಾರ್ ಮತ್ತು ನಟ ಪ್ರಭಂಜನ ದೇಶಪಾಂಡೆ ಅವರು ಮಾತನಾಡಿದ್ದಾರೆ. 'ದಾಸ ಸಾಹಿತ್ಯ ಒಂದು ಮತ, ಮಠಕ್ಕೆ ಸೇರಿದ್ದಲ್ಲ, ಅದು ಎಲ್ಲರಿಗೂ ಬೇಕು...' ಎಂದು ಹೇಳಿದ್ದಾರೆ.