'ಇನ್ನೊಬ್ಬರನ್ನು ದೋಚುವ ಬುದ್ಧಿಯನ್ನು ನಮ್ ತಂದೆ-ತಾಯಿ ನನಗೆ ಹೇಳಿಕೊಟ್ಟಿಲ್ಲ..' - ನಟಿ ಪವಿತ್ರಾ ಲೋಕೇಶ್
5268 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ ಸಿನಿಮಾದ ಪತ್ರಿಕಾಗೋಷ್ಠಿ ಇಂದು ಬೆಂಗಳೂರಿನಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪವಿತ್ರಾ ಲೋಕೇಶ್, ‘ಇನ್ನೊಬ್ಬರನ್ನು ದೋಚುವ ಬುದ್ಧಿಯನ್ನು ನಮ್ಮ ತಂದೆ ತಾಯಿ ಹೇಳಿಕೊಟ್ಟಿಲ್ಲ’ ಎಂದಿದ್ದಾರೆ. ‘ನಾನು ಹುಟ್ಟಿದ್ದು, ಬೆಳೆದಿದ್ದು, ತಿಂದಿದ್ದು, ತೊಟ್ಟಿದ್ದು… ಎಲ್ಲವೂ ಕನ್ನಡ ಚಿತ್ರರಂಗದಿಂದಲೇ. ಯಾಕಂದ್ರೆ ನನ್ನ ತಂದೆ ಇಲ್ಲಿ ನಟರು. ನಾನು ಹುಟ್ಟಿದಾಗ ಅವರು ಅಸೆಸ್ಟಿಂಟ್ ಡೈರೆಕ್ಟರ್ ಆಗಿದ್ದರು. ನಾನಿವತ್ತು ಈ ಮಟ್ಟಕ್ಕೆ ಬಂದಿದ್ದೀನಿ ಅಂದ್ರೆ ಅದಕ್ಕೆ ಕಾರಣ ಕನ್ನಡ ಚಿತ್ರರಂಗ. ಕನ್ನಡ ಚಿತ್ರರಂಗದಿಂದ ನಾನು ಬಹಳಷ್ಟು ಗಳಿಸಿಕೊಂಡಿದ್ದೇನೆ. ಕೆಟ್ಟ ಉದ್ದೇಶದಿಂದ ಕೆಲವರು ನನ್ನ ಮೇಲೆ ಆರೋಪಗಳನ್ನ ಮಾಡಿದ್ರು. ಅದರಿಂದ ಹೊರಗೆ ಬರಲು ನನಗೆ ಸ್ವಲ್ಪ ಕಾಲ ಬೇಕಾಯಿತು. ನನಗೆ ಹಣದ ಆಸೆ ಇಲ್ಲ. ಇನ್ನೊಬ್ಬರನ್ನ ದೋಚುವ ಬುದ್ಧಿಯಿಲ್ಲ. ಇನ್ನೊಬ್ಬರ ದುಡ್ಡಿನಲ್ಲಿ ಬದುಕಬೇಕು ಎಂಬ ಆಲೋಚನೆ ನನಗಿಲ್ಲ. ಅಂತಹ ಬುದ್ಧಿಯನ್ನ ನನ್ನ ತಂದೆ - ತಾಯಿ ನನಗೆ ಹೇಳಿಕೊಟ್ಟಿಲ್ಲ’ ಎಂದು ಪವಿತ್ರಾ ಲೋಕೇಶ್ ಹೇಳಿದರು.