'ಕರಾವಳಿ ಬ್ಯೂಟಿ' ಪೂಜಾ ಹೆಗ್ಡೆಗೆ ಟಾಲಿವುಡ್ನಲ್ಲಿ ಹಿನ್ನಡೆ; ಮಹೇಶ್ ಬಾಬು ಚಿತ್ರದಿಂದ ಗೇಟ್ಪಾಸ್!
1235 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟಿ ಪೂಜಾ ಹೆಗ್ಡೆ ಅವರಿಗೆ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇತ್ತು. ತೆಲುಗು ಸಿನಿಮಾಗಳ ಜನಪ್ರಿಯತೆಯಿಂದಾಗಿ ಅವರು ಬಾಲಿವುಡ್ನಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿದ್ರು. ಆದರೆ ಕಳೆದ ವರ್ಷ ಪೂಜಾ ನಟಿಸಿದ್ದ ಬಿಗ್ ಬಜೆಟ್ ಸಿನಿಮಾಗಳೆಲ್ಲ ಮಕಾಡೆ ಮಲಗಿದವು. ಅಂತಹ ಟೈಮ್ನಲ್ಲೇ ಅವರಿಗೆ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾದಲ್ಲಿ ಚಾನ್ಸ್ ಸಿಕ್ಕಿತ್ತು. ಈ ಸಿನಿಮಾದಿಂದಾರೂ ಪೂಜಾ ಹೆಗ್ಡೆಗೆ ಬ್ರೇಕ್ ಸಿಗಲಿ ಅಂತ ಫ್ಯಾನ್ಸ್ ಕೂಡ ಹಾರೈಸಿದ್ರು. ಆದ್ರೆ ಈಗ ಮತ್ತೊಂದು ಬ್ಯಾಡ್ ನ್ಯೂಸ್ ಕೇಳಿಬಂದಿದೆ. 'ಗುಂಟೂರು ಖಾರಂ' ಚಿತ್ರದಿಂದ ಪೂಜಾ ಹೆಗ್ಡೆ ಹೊರಬಿದ್ದಿದ್ದಾರೆ. ಇದಕ್ಕೆ ಕಾರಣ ಏನು ಅಂತೀರಾ? ಕಾಲ್ಶೀಟ್ ಸಮಸ್ಯೆ ಅಂತ ಚಿತ್ರತಂಡ ಹೇಳ್ತಿದೆ. ಆದರೆ ಈ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ಕೂಡ ಇರುವುರಿಂದ ಪೂಜಾಗೆ ಅನ್ಕಂಫರ್ಟಬಲ್ ಎನಿಸಿದೆ. ಆ ಕಾರಣಕ್ಕೆ ಪೂಜಾ ಹೆಗ್ಡೆ ಅವರನ್ನು ಕೈಬಿಡಲಾಗಿದೆ ಎಂಬ ಮಾತುಗಳೂ ಕೇಳಿಬಂದಿದೆ. ಪೂಜಾ ಹೆಗ್ಡೆ ಸಿನಿಮಾದಿಂದ ಹೊರಗೆ ಹೋಗಿರುವುದಕ್ಕೆ, ಒಂದಷ್ಟು ದೃಶ್ಯಗಳ ಮರುಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ. ಬರೀ ಪೂಜಾ ಹೆಗ್ಡೆ ಮಾತ್ರವಲ್ಲ, ಸಂಗೀತ ನಿರ್ದೇಶಕ ಎಸ್ ಥಮನ್ ಕೂಡ ಸಿನಿಮಾದಿಂದ ಹೊರಬಿದ್ದಿದ್ದು, ಅವರ ಜಾಗಕ್ಕೆ ತಮಿಳಿನ ಅನಿರುದ್ಧ್ ರವಿಚಂದರ್ ಆಗಮಿಸುವ ಸಾಧ್ಯತೆ ಇದೆ.