ಶಿವಣ್ಣಂಗೆ ಕಥೆಯನ್ನು ಯಾರಿಗಾದ್ರೂ ಕೊಡ್ತೀನಿ ಅಂದಾಗ ಬೈದುಬಿಟ್ರು, ಆಮೇಲೆ ಧೈರ್ಯ ಬಂತು: ಸಂಗೀತ ನಿರ್ದೇಶಕ ನಿರ್ದೇಶಕ ಅರ್ಜುನ್ ಜನ್ಯ
1171 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನದ ಜೊತೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡೂ ಕೆಲಸವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ. ಈ ಕುರಿತು ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ 45 ಎಂದು ಯಾಕೆ ಹೆಸರು ಇಟ್ಟಿದ್ದು ಎಂದು ಈಗಲೇ ರಿವೀಲ್ ಮಾಡೋದಿಲ್ಲ, ಸಿನಿಮಾ ನೋಡಿ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ."ಶಿವರಾಜ್ಕುಮಾರ್ ಅವರಿಗೆ ಸಿನಿಮಾ ಕತೆ ಇದೆ ಅಂತ ಹೇಳಿದ್ದೆ, ಬೇರೆಯವ್ರಿಗೆ ಕೊಡ್ತೀನಿ ಅಂದಾಗ ಅವ್ರು ಬೈದ್ರು. ನೀನು ಮಾಡು ಅಂತ ಹೇಳಿದ್ರು. ಆಗ ಧೈರ್ಯ ಬಂತು. ಹೀಗಾಗಿ ಸಿನಿಮಾ ನಿರ್ದೇಶನಕ್ಕಿಳಿದೆ. ಉಪ್ಪಿ ಸರ್, ರಾಜ್ ಬಿ ಶೆಟ್ಟಿ ಅವರನ್ನು ಒಪ್ಪಿಸೋದು ದೊಡ್ಡ ಚಾಲೆಂಜ್ ಆಗಿತ್ತು. 2000 ಆಡಿಷನ್ ಅಲ್ಲಿ ಕೌಸ್ತುಭ ಮಣಿ ಅವರನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ" ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.ಫಿಲಾಸಾಫಿಕಲ್ ಜಾನರ್ನಲ್ಲಿ ಈ ಸಿನಿಮಾ ಬರಲಿದೆಯಂತೆ. ರಮೇಶ್ ರೆಡ್ಡಿ ಈ ಸಿನಿಮಾ ನಿರ್ಮಾಪಕರು. ಆದಷ್ಟು ಬೇಗ ಸಿನಿಮಾ ಶೂಟಿಂಗ್ ಶುರುವಾಗಲಿದೆಯಂತೆ.
ನನಗೆ ಭಯ ಇರೋದರಿಂದಲೇ ಆ ರೀತಿ ಟೈಟಲ್ ಇಟ್ಟಿದ್ದೇವೆ: 45 ಸಿನಿಮಾ ನಿರ್ದೇಶಕ ಅರ್ಜುನ್ ಜನ್ಯ
ನನಗೆ ಭಯ ಇರೋದರಿಂದಲೇ ಆ ರೀತಿ ಟೈಟಲ್ ಇಟ್ಟಿದ್ದೇವೆ: 45 ಸಿನಿಮಾ ನಿರ್ದೇಶಕ ಅರ್ಜುನ್ ಜನ್ಯ