'ಗ್ರಾಮಾಯಣ' ಚಿತ್ರದ ಮುಹೂರ್ತಕ್ಕೆ ಬಂದ 'ದೊಡ್ಮನೆ' ಫ್ಯಾಮಿಲಿ; ಸಾಥ್ ನೀಡಿದ ಉಪೇಂದ್ರ & ರಾಜ್ ಬಿ ಶೆಟ್ಟಿ
3001 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿವಿನಯ್ ರಾಜ್ಕುಮಾರ್ ಅವರ 'ಗ್ರಾಮಾಯಣ' ಸಿನಿಮಾಕ್ಕೆ ಮರುಚಾಲನೆ ಸಿಕ್ಕಿದ್ದು, ಅದ್ದೂರಿಯಾಗಿ ಮುಹೂರ್ತ ಸಮಾರಂಭ ನೆರವೇರಿದೆ. ವಿನಯ್ಗೆ ಶುಭ ಹಾರೈಸಲು ಇಡೀ ದೊಡ್ಮನೆಯೇ ಆಗಮಿಸಿದ್ದು ವಿಶೇಷ. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಂಗಳಾ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ದೊಡ್ಮನೆಯ ಹಲವರು ಆಗಮಿಸಿದ್ದರು. ನಟ ಉಪೇಂದ್ರ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಧ್ರುವ ಸರ್ಜಾ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರದ್ದರು. ಇನ್ನು, ಕಾರ್ಯಕ್ರಮ ಮುಗಿಸಿ, ವಾಪಸ್ ಹೋಗುವಾಗ ಎದುರಾದ ಅಭಿಮಾನಿಯೊಬ್ಬರು ತಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸುವಂತೆ ಅಶ್ವಿನಿಗೆ ಮನವಿ ಮಾಡಿದರು. ರಸ್ತೆಯಲ್ಲೇ ಕೇಕ್ ಕತ್ತರಿಸಿ, ಆ ಮಗುವಿನ ಹುಟ್ಟುಹಬ್ಬವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಆಚರಿಸಿದರು.