ಆದಿಪುರುಷ್ ಪ್ರಿ ರಿಲೀಸ್ ಇವೆಂಟ್ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪ್ರಭಾಸ್
1556 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟ ಪ್ರಭಾಸ್ ಹಾಗೂ ಆದಿಪುರುಷ್ ಸಿನಿಮಾ ತಂಡ ತಿರುಪತಿಗೆ ಭೇಟಿ ನೀಡಿದೆ. ತಿರುಪತಿಯಲ್ಲಿ ಇಂದು ಸಂಜೆ ಈ ಚಿತ್ರದ ಅದ್ದೂರಿಯಾದ ಪ್ರಿ ರಿಲೀಸ್ ಇವೆಂಟ್ ನಡೆಯಲಿದ್ದು, ಪ್ರಭಾಸ್ ಅವರು ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.ಬಹಳ ಭದ್ರತೆಯೊಂದಿಗೆ ಪ್ರಭಾಸ್ ಅವರು ತಿರುಪತಿಗೆ ಹೋಗಿದ್ದು, ಅಲ್ಲಿ ಪ್ರಭಾಸ್ ನೋಡಿ ನೂಕು ನುಗ್ಗಲು ಉಂಟಾಗಿತ್ತು. ಸಾಕಷ್ಟು ಜನರು ಪ್ರಭಾಸ್ ನೋಡಿ ಜೈಕಾರ ಹಾಕಿದ್ದಾರೆ. ಇನ್ನು ಇಂದು ನಡೆಯುವ ಪ್ರಿ ರಿಲೀಸ್ ಇವೆಂಟ್ನಲ್ಲಿ ವೀಕ್ಷಕರಿಗೋಸ್ಕರ ಆದಿಪುರುಷ್ ಚಿತ್ರದ ಎರಡನೇ ಟ್ರೇಲರ್ ರಿಲೀಸ್ ಆಗಲಿದೆಯಂತೆ. ರಾಮಾಯಣ ಕುರಿತ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಭಾಸ್ ಅವರು ರಾಘವ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜಾನಕಿ ಆಗಿ ಕೃತಿ ಸನೋನ್, ಲಕ್ಷ್ಮಣ ಆಗಿ ಸನ್ನಿ ಸಿಂಗ್, ರಾವಣ ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಅಂದಹಾಗೆ ಜೂನ್ 16ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆಯಂತೆ. ಈ ಚಿತ್ರದ ಪೋಸ್ಟರ್, ಟೀಸರ್ ಸಲುವಾಗಿ ಕೆಲ ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದು, ಸಿನಿಮಾ ಹೇಗಿದೆ ಎಂದು ಕಾದು ನೋಡಬೇಕಿದೆ.
Project K: ಪ್ರಭಾಸ್ ಎದುರು ವಿಲನ್ ಆಗಲು ₹150 ಕೋಟಿ ಸಂಭಾವನೆ ಕೇಳಿದ್ರಾ ಕಮಲ್ ಹಾಸನ್?
Project K: ಪ್ರಭಾಸ್ ಎದುರು ವಿಲನ್ ಆಗಲು ₹150 ಕೋಟಿ ಸಂಭಾವನೆ ಕೇಳಿದ್ರಾ ಕಮಲ್ ಹಾಸನ್?