ಬೌನ್ಸರ್ಗಳಿಗೆ ವಾರ್ನಿಂಗ್ ನೀಡಿದ ನಟ 'ದುನಿಯಾ' ವಿಜಯ್; ಕಾರಣವೇನು?ನಟ 'ದುನಿಯಾ' ವಿಜಯ್ ಅವರು ಬೌನ್ಸರ್ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗುರುವಾರ (ಜೂನ್ 8) ವಿನಯ್ ರಾಜ್ಕುಮಾರ್ ಅವರ 'ಗ್ರಾಮಾಯಣ' ಸಿನಿಮಾದ ಮುಹೂರ್ತ ಸಮಾರಂಭವಿತ್ತು. ಅಲ್ಲಿ ಸಾಕಷ್ಟು ಮಂದಿ ಕಲಾವಿದರು ಬಂದಿದ್ದರಿಂದ ಬೌನ್ಸರ್ಗಳನ್ನು ನೇಮಕ ಮಾಡಲಾಗಿತ್ತು. ಆದರೆ ಅವರು ಮಾಧ್ಯಮವರ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು. ಇದು ದುನಿಯಾ ವಿಜಯ್ ಅವರ ಗಮನಕ್ಕೆ ಬಂದಾಗ, 'ಬೌನ್ಸರ್ಗಳು ಬರೀ ತಳ್ಳುವುದನ್ನು ಕೆಲಸ ಮಾಡಿಕೊಂಡಿದ್ದಾರೆ, ಇದು ಸರಿ ಅಲ್ಲ' ಎಂದರು. ಇಲ್ಲಿದೆ ನೋಡಿ ಅವರು ಮಾತನಾಡಿರುವ ವಿಡಿಯೋ.