Bigg Boss 10: ಗೆಲುವಿನ ಸನಿಹಕ್ಕೆ ಬಂದು ನಿರಾಸೆ ಅನುಭವಿಸಿದ ವರ್ತೂರು ಸಂತೋಷ್, ವಿನಯ್, ಸಂಗೀತಾ!
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
'ಬಿಗ್ ಬಾಸ್' ಕನ್ನಡ ಸೀಸನ್ 10 ಶೋಗೆ ತೆರೆಬಿದ್ದಿದೆ. ಆದರೆ ಫಿನಾಲೆಯಲ್ಲಿ ನಡೆದ ಕೆಲವು ಎಲಿಮಿನೇಷನ್ಗಳು ಮಾತ್ರ ಅಚ್ಚರಿ ಮೂಡಿಸಿದವು! ಯಾಕೆಂದರೆ, 'ಹಳ್ಳಿಕಾರ್ ಒಡೆಯ' ವರ್ತೂರು ಸಂತೋಷ್ ಅವರಿಗೆ ದೊಡ್ಡ ಅಭಿಮಾನಿಗಳ ಇದೆ. ಜೊತೆಗೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವಾಗಲೇ 'ಈ ದೊಡ್ಮನೆಯ ಆನೆ' ಅಂತ ವಿನಯ್ ಗೌಡ ಅವರನ್ನ ಬಿಂಬಿಸಲಾಗಿತ್ತು. ಇನ್ನೂ, ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯ 'ಸಿಂಹಿಣಿ' ಅನ್ನೊದು ಎಲ್ಲರಿಗೂ ಗೊತ್ತಿತ್ತು.. ಸಂಗೀತಾ ಈ ಸೀಸನ್ನ ಮೊದಲ ಫೈನಲಿಸ್ಟ್ ಕೂಡ ಆಗಿದ್ರು.. ಒಟ್ಟಾರೆಯಾಗಿ ಈ ಮೂವರಲ್ಲಿ ಒಬ್ಬರಾದ್ರೂ, ಫಿನಾಲೆ ದಿನ ಕಿಚ್ಚ ಸುದೀಪ್ ಅವರ ಪಕ್ಕದಲ್ಲಿ ನಿಂತೇ ನಿಲ್ತಾರೆ ಅನ್ನೋ ಚರ್ಚೆ ಇತ್ತು. ಆದರೆ ಅದು ಹಾಗಾಗಲಿಲ್ಲ!
ಯಾರೂ ಫಿನಾಲೆ ಗೆಲ್ಲಬಹುದು, ಟ್ರೋಫಿ ಗೆಲ್ಲಬಹುದು ಎಂಬ ಅನ್ನೋ ನಿರೀಕ್ಷೆಗಳಿದ್ದವೋ, ಅದೆಲ್ಲವೂ ಉಲ್ಟಾ ಆಗಿದೆ. ವಿನಯ್ ಗೌಡ, ಸಂಗೀತಾ, ವರ್ತೂರು ಸಂತೋಷ್ ಮೊದಲ ರನ್ನರ್ ಅಪ್ ಆಗಲೂ ಕೂಡ ಸಾಧ್ಯವಾಗಿಲ್ಲ. ವಿನ್ನರ್ ಪಟ್ಟ ಕಾರ್ತಿಕ್ಗೆ ಸಿಕ್ಕರೆ, ಮೊದಲ ರನ್ನರ್ ಅಪ್ ಪಟ್ಟ ಪ್ರತಾಪ್ಗೆ ಸಿಕ್ಕಿದೆ. ಖಡಕ್ ಸ್ಪರ್ಧಿಗಳು ಎನಿಸಿಕೊಂಡಿದ್ದ ವಿನಯ್, ವರ್ತೂರು ಸಂತೋಷ್, ಸಂಗೀತಾ 'ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ವರ್ತೂರು ಸಂತೋಷ್ಗೆ 4ನೇ ರನ್ನರ್ ಅಪ್ ಸ್ಥಾನ ಸಿಕ್ಕರೆ, 3ನೇ ರನ್ನರ್ ಅಪ್ ಸ್ಥಾನಕ್ಕೆ ವಿನಯ್ ಗೌಡ ತೃಪ್ತಿಪಟ್ಟುಕೊಂಡಿದ್ದಾರೆ.
ಸಂಗೀತಾಗೆ ಸಿಕ್ತು 2ನೇ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ವರ್ತೂರು ಸಂತೋಷ್ಗೆ 2 ಲಕ್ಷ ರೂ. ಬಹುಮಾನ ಸಿಕ್ಕರೆ, ವಿನಯ್ಗೆ 5 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. 'ಬಿಗ್ ಬಾಸ್' ಮನೆಯ ಸ್ಟ್ರಾಂಗ್ ಲೇಡಿ ಎನಿಸಿಕೊಂಡಿದ್ದ ಸಂಗೀತಾ ಈ ಸೀಸನ್ನ 2ನೇ ರನ್ನರ್ ಅಪ್ ಎನಿಸಿಕೊಂಡಿದ್ದು, ಅವರಿಗೆ 7 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಯಾರೂ ಫಿನಾಲೆ ಗೆಲ್ಲಬಹುದು, ಟ್ರೋಫಿ ಗೆಲ್ಲಬಹುದು ಎಂಬ ಅನ್ನೋ ನಿರೀಕ್ಷೆಗಳಿದ್ದವೋ, ಅದೆಲ್ಲವೂ ಉಲ್ಟಾ ಆಗಿದೆ. ವಿನಯ್ ಗೌಡ, ಸಂಗೀತಾ, ವರ್ತೂರು ಸಂತೋಷ್ ಮೊದಲ ರನ್ನರ್ ಅಪ್ ಆಗಲೂ ಕೂಡ ಸಾಧ್ಯವಾಗಿಲ್ಲ. ವಿನ್ನರ್ ಪಟ್ಟ ಕಾರ್ತಿಕ್ಗೆ ಸಿಕ್ಕರೆ, ಮೊದಲ ರನ್ನರ್ ಅಪ್ ಪಟ್ಟ ಪ್ರತಾಪ್ಗೆ ಸಿಕ್ಕಿದೆ. ಖಡಕ್ ಸ್ಪರ್ಧಿಗಳು ಎನಿಸಿಕೊಂಡಿದ್ದ ವಿನಯ್, ವರ್ತೂರು ಸಂತೋಷ್, ಸಂಗೀತಾ 'ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ವರ್ತೂರು ಸಂತೋಷ್ಗೆ 4ನೇ ರನ್ನರ್ ಅಪ್ ಸ್ಥಾನ ಸಿಕ್ಕರೆ, 3ನೇ ರನ್ನರ್ ಅಪ್ ಸ್ಥಾನಕ್ಕೆ ವಿನಯ್ ಗೌಡ ತೃಪ್ತಿಪಟ್ಟುಕೊಂಡಿದ್ದಾರೆ.
ಸಂಗೀತಾಗೆ ಸಿಕ್ತು 2ನೇ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ವರ್ತೂರು ಸಂತೋಷ್ಗೆ 2 ಲಕ್ಷ ರೂ. ಬಹುಮಾನ ಸಿಕ್ಕರೆ, ವಿನಯ್ಗೆ 5 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. 'ಬಿಗ್ ಬಾಸ್' ಮನೆಯ ಸ್ಟ್ರಾಂಗ್ ಲೇಡಿ ಎನಿಸಿಕೊಂಡಿದ್ದ ಸಂಗೀತಾ ಈ ಸೀಸನ್ನ 2ನೇ ರನ್ನರ್ ಅಪ್ ಎನಿಸಿಕೊಂಡಿದ್ದು, ಅವರಿಗೆ 7 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.