Bigg Boss 10: 'ಜನಗಳ ಮನಸ್ಸು ಗೆದ್ದೋರು ಸಂತು-ಪಂತು ಅಂತ ಎಲ್ರಿಗೂ ಗೊತ್ತು'- ವರ್ತೂರು ಸಂತೋಷ್
1743 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಸಂತು-ಪಂತು ಅಂತ ಫೇಮಸ್ ಆದವರು ತುಕಾಲಿ ಸಂತು ಮತ್ತು ವರ್ತೂರು ಸಂತೋಷ್. ಇದೀಗ ಅವರಿಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬಂದಮೇಲೆ ಭೇಟಿಯಾಗಿದ್ದಾರೆ. ಈ ಖುಷಿಯನ್ನು ವಿಡಿಯೋ ಮೂಲಕ ಇಬ್ಬರು ಹಂಚಿಕೊಂಡಿದ್ದಾರೆ.
"ನಾನು ವರ್ತೂರು ಸಂತೋಷಣ್ಣನ್ನ ಮೀಟ್ ಆಗಿದ್ದೀನಿ. 'ಅಣ್ಣ, ವರ್ತೂರು ಸಂತೋಷ್ ಅವರನ್ನು ಯಾವಾಗ ಮೀಟ್ ಆಗ್ತೀರಿ' ಅಂತ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ರಿ. ಈಗ ಅವರನ್ನೇ ಭೇಟಿಯಾಗಿದ್ದೇನೆ ನೋಡಿ. ಸಂತು-ಪಂತು ಅಂತ ಒಂದು ಪಿಚ್ಚರ್ನೇ ಮಾಡೋಣ" ಎಂದು 'ತುಕಾಲಿ' ಸಂತು ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಅಸಲಿ ವಿನ್ನರ್ಸ್ ನಾವೇ' ಎಂದು ವರ್ತೂರು ಸಂತೋಷ್ & ತುಕಾಲಿ ಸಂತು ಖುಷಿಯಿಂದ ಹೇಳಿಕೊಂಡಿದ್ದಾರೆ.
ಇನ್ನು ಇದೇ ವಿಡಿಯೋದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, "ಟ್ರೋಫಿಯನ್ನು ಯಾರಾದ್ರೂ ಗೆದ್ದಿರಬಹುದು, ದುಡ್ಡನ್ನು ಯಾರಾದ್ರೂ ಗೆದ್ದಿರಬಹುದು. ಆದರೆ ಜನಗಳ ಮನಸ್ಸು ಗೆದ್ದೋರು ಸಂತು-ಪಂತು ಅಂತ ಎಲ್ರಿಗೂ ಗೊತ್ತು. ಅದನ್ನು ಚಿಕ್ಕ ಮಕ್ಕಳಿಗೆ ಕೇಳಿದ್ರೂ ಹೇಳ್ತಾರೆ" ಎಂದು ಹೇಳಿದ್ದಾರೆ. ಜೊತೆಗೆ ತಮ್ಮಿಬ್ಬರಿಗೂ ಇಷ್ಟೊಂದು ಪ್ರೀತಿ ಕೊಟ್ಟ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೆ, ಬಿಗ್ ಬಾಸ್ ಫಿನಾಲೆಯಲ್ಲಿ ವರ್ತೂರು ಸಂತೋಷ್ಗೆ 4ನೇ ರನ್ನರ್ ಸ್ಥಾನ ಸಿಕ್ಕರೆ, ತುಕಾಲಿ ಸಂತುಗೆ 5ನೇ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಇಬ್ಬರಿಗೂ ತಲಾ 2 ಲಕ್ಷ ರೂ. ನಗುದ ಬಹುಮಾನ ಕೂಡ ಸಿಕ್ಕಿದೆ.
"ನಾನು ವರ್ತೂರು ಸಂತೋಷಣ್ಣನ್ನ ಮೀಟ್ ಆಗಿದ್ದೀನಿ. 'ಅಣ್ಣ, ವರ್ತೂರು ಸಂತೋಷ್ ಅವರನ್ನು ಯಾವಾಗ ಮೀಟ್ ಆಗ್ತೀರಿ' ಅಂತ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ರಿ. ಈಗ ಅವರನ್ನೇ ಭೇಟಿಯಾಗಿದ್ದೇನೆ ನೋಡಿ. ಸಂತು-ಪಂತು ಅಂತ ಒಂದು ಪಿಚ್ಚರ್ನೇ ಮಾಡೋಣ" ಎಂದು 'ತುಕಾಲಿ' ಸಂತು ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಅಸಲಿ ವಿನ್ನರ್ಸ್ ನಾವೇ' ಎಂದು ವರ್ತೂರು ಸಂತೋಷ್ & ತುಕಾಲಿ ಸಂತು ಖುಷಿಯಿಂದ ಹೇಳಿಕೊಂಡಿದ್ದಾರೆ.
ಇನ್ನು ಇದೇ ವಿಡಿಯೋದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, "ಟ್ರೋಫಿಯನ್ನು ಯಾರಾದ್ರೂ ಗೆದ್ದಿರಬಹುದು, ದುಡ್ಡನ್ನು ಯಾರಾದ್ರೂ ಗೆದ್ದಿರಬಹುದು. ಆದರೆ ಜನಗಳ ಮನಸ್ಸು ಗೆದ್ದೋರು ಸಂತು-ಪಂತು ಅಂತ ಎಲ್ರಿಗೂ ಗೊತ್ತು. ಅದನ್ನು ಚಿಕ್ಕ ಮಕ್ಕಳಿಗೆ ಕೇಳಿದ್ರೂ ಹೇಳ್ತಾರೆ" ಎಂದು ಹೇಳಿದ್ದಾರೆ. ಜೊತೆಗೆ ತಮ್ಮಿಬ್ಬರಿಗೂ ಇಷ್ಟೊಂದು ಪ್ರೀತಿ ಕೊಟ್ಟ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೆ, ಬಿಗ್ ಬಾಸ್ ಫಿನಾಲೆಯಲ್ಲಿ ವರ್ತೂರು ಸಂತೋಷ್ಗೆ 4ನೇ ರನ್ನರ್ ಸ್ಥಾನ ಸಿಕ್ಕರೆ, ತುಕಾಲಿ ಸಂತುಗೆ 5ನೇ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಇಬ್ಬರಿಗೂ ತಲಾ 2 ಲಕ್ಷ ರೂ. ನಗುದ ಬಹುಮಾನ ಕೂಡ ಸಿಕ್ಕಿದೆ.