'ಬಾಹುಬಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಯಶಸ್ಸಿಗೆ ಕಾರಣ ಏನು? ಉತ್ತರ ನೀಡಿದ ರಾಜಮೌಳಿ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ರಾಜಮೌಳಿ ಅವರು ಈಗಾಗಲೇ ಸಾಕಷ್ಟು ಹಿಟ್ ಸಿನಿಮಾ ನೀಡಿದ್ದಾರೆ. ಅವರ ಯಶಸ್ಸಿಗೆ ಕಾರಣ ಏನು? ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ RRR ಸಿನಿಮಾ ಪ್ರಚಾರಕ್ಕೆ ಬಂದ ವೇಳೆ ರಾಜಮೌಳಿ ಅವರು ಸಿನಿಮಾ ಮಾಡುವ ಕುರಿತು, ಯಶಸ್ಸಿನ ಕುರಿತು ಮಾತನಾಡಿದ್ದಾರೆ. ರಾಜಮೌಳಿ ಜೊತೆಗೆ ರಾಮ್ ಚರಣ್ ತೇಜ, ಆಲಿಯಾ ಭಟ್, ಜ್ಯೂನಿಯರ್ ಎನ್ ಟಿ ಆರ್ ಕೂಡ ಭಾಗಿಯಾಗಿದ್ದರು. ಕನ್ನಡದಲ್ಲಿ RRR ಟ್ರೈಲರ್ ರಿಲೀಸ್ ಆಗಿತ್ತು. ರಾಮ್ ಚರಣ್ ತೇಜ, ಜ್ಯೂನಿಯರ್ ಎನ್ಟಿಆರ್ ಅವರು ಕನ್ನಡಕ್ಕೆ ಸ್ವತಃ ಡಬ್ ಮಾಡಿದ್ದರು. ಸುದ್ದಿಗೋಷ್ಠಿಯಲ್ಲಿಯೂ ಚಿತ್ರತಂಡ ಆದಷ್ಟು ಕನ್ನಡ ಮಾತನಾಡಲು ಪ್ರಯತ್ನಪಟ್ಟಿದೆ. ಆ ವೇಳೆ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಕನ್ನಡಿಗರಿಗೋಸ್ಕರ ಒಂದೆರಡು ಪದ ಕನ್ನಡ ಮಾತನಾಡಿದ್ದಾರೆ. ಅವರಿಗೆ ಕನ್ನಡ ಮಾತನಾಡಲು ಜ್ಯೂನಿಯರ್ ಎನ್ಟಿಆರ್ ಸಹಾಯ ಮಾಡಿದ್ದಾರೆ. ಜನವರಿ 7ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ RRR ತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ಟ್ರೈಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂದು ನೋಡಬೇಕಿದೆ.
ಪುನೀತ್ ರಾಜ್ಕುಮಾರ್ ಇಲ್ಲದ ಕರ್ನಾಟಕ ಶೂನ್ಯ: ನಟ ಜ್ಯೂನಿಯರ್ ಎನ್ಟಿಆರ್
ಪುನೀತ್ ರಾಜ್ಕುಮಾರ್ ಇಲ್ಲದ ಕರ್ನಾಟಕ ಶೂನ್ಯ: ನಟ ಜ್ಯೂನಿಯರ್ ಎನ್ಟಿಆರ್