'ರಾಮಾಯಣ' ಸಿನಿಮಾದಲ್ಲಿ ರಣಬೀರ್ಗೆ ಶ್ರೀರಾಮನ ಪಾತ್ರ; ಕಿಡಿಕಾರಿದ ನಟಿ ಕಂಗನಾ!
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾವನ್ನು ಮಾಡಲು ಸಜ್ಜಾಗಿದ್ದು, ಆ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಸಖತ್ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ರಣಬೀರ್ ಕಪೂರ್ ಹೆಸರನ್ನು ಹೇಳದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬಾಲಿವುಡ್ನಲ್ಲಿ ಬರುತ್ತಿರುವ ಇನ್ನೊಂದು ರಾಮಾಯಣದಲ್ಲಿ ಸ್ತ್ರೀಲೋಲುಪತನ ಮತ್ತು ಡ್ರಗ್ ವ್ಯಸನಕ್ಕೆ ಹೆಸರಾಗಿರುವ ಬಿಳಿ ತೊಗಲಿನ ಇಲಿಯೊಂದು ರಾಮನ ಪಾತ್ರದಲ್ಲಿ ನಟಿಸುತ್ತಿದೆ. ಇತ್ತೀಚೆಗೆ ತೆರೆಕಂಡ ಸಿನಿಮಾವೊಂದರಲ್ಲಿ ಅತ್ಯಂತ ಹತಾಶ ಸ್ಥಿತಿಯಲ್ಲಿ ತಮ್ಮನ್ನು ತಾವು ಶಿವನ ಪಾತ್ರದಲ್ಲಿ ಬಿಂಬಿಸಿಕೊಂಡ ಇವರೀಗ ರಾಮನ ಪಾತ್ರದಲ್ಲಿ ಮತ್ತೆ ಫ್ಯಾನ್ಸಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪೇಲವ ಮುಖದ ಮಾದಕ ವ್ಯಸನಿ ಮತ್ತು ದುರ್ವರ್ತನೆ ತೋರುವ ಹುಡುಗನೊಬ್ಬ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬಾರದು’ ಎಂದು ಅವರು ಹೇಳಿದ್ದಾರೆ.ಕಂಗನಾ ಟೀಕೆಗೆ ರಣಬೀರ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಅವರ ಅಭಿಮಾನಿಗಳು ಕಂಗನಾಗೆ ಸೋಷಿಯಲ್ ಮೀಡಿಯಾದಲ್ಲಿಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ‘ಕಂಗನಾ ತುಂಬಾ ಸಣ್ಣ ಮನಸ್ಥಿತಿಯವರು, ಅವರದ್ದು ಅನಗತ್ಯ ಹೇಳಿಕೆ, ಅವರು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ರಣಬೀರ್ ಕಪೂರ್ಗೆ ಇಂಥ ಟೀಕೆ ಸಲ್ಲದು’ ಎಂಬಿತ್ಯಾದಿ ಕಾಮೆಂಟ್ಗಳನ್ನು ಅವರು ಹಾಕುತ್ತಿದ್ದಾರೆ.- entertainment
- Kangana Ranaut Calls Ranbir Kapoor A Skinny White Rat