'ಶ್ರೀ ಪ್ರಸನ್ನ ವೆಂಕಟ ದಾಸರು ನಮ್ಮ ಭಾಷೆಯ, ನಮ್ಮ ನೆಲದ, ನಮ್ಮ ಸಂಸ್ಕೃತಿಯ ಸಿನಿಮಾ..'- ನಿರ್ದೇಶಕ ಮಧುಸೂದನ ಹವಲ್ದಾರ್
1261 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಶ್ರೀ ಜಗನ್ನಾಥ ದಾಸರು' ಸಿನಿಮಾವನ್ನು ನಿರ್ದೇಶಿಸಿದ್ದ ಮಧುಸೂದನ ಹವಲ್ದಾರ್ ಅವರು ಈಗ 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರವನ್ನು ನಿರ್ದೇಶನ ಮಾಡಿದ್ದು, ಈಗಾಗಲೇ ಸಿನಿಮಾವು ಪ್ರೇಕ್ಷಕರ ಗಮನಸೆಳೆಯುತ್ತಿದೆ. 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರದಲ್ಲಿ ಪ್ರಭಂಜನ ದೇಶಪಾಂಡೆ ಅವರು ಪ್ರಸನ್ನ ವೆಂಕಟ ದಾಸರ ಪಾತ್ರವನ್ನು ಮಾಡಿದ್ದಾರೆ. ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಮಧುಸೂದನ ಹವಾಲ್ದರ್ ಮತ್ತು ನಟ ಪ್ರಭಂಜನ ದೇಶಪಾಂಡೆ ಅವರು 'ವಿಜಯ ಕರ್ನಾಟಕ' ವೆಬ್ಗೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಮಾತನಾಡುತ್ತ, 'ಶ್ರೀ ಪ್ರಸನ್ನ ವೆಂಕಟ ದಾಸರು ಸಿನಿಮಾವನ್ನು ವೀಕ್ಷಣೆ ಮಾಡಿದವರು, ನಂತರ 33 ಟಿಕೆಟ್ಗಳನ್ನು ಬುಕ್ ಮಾಡಿ, ಅದನ್ನು ಸಿನಿಮಾ ನೋಡಬೇಕು ಎಂದುಕೊಂಡಿರುವವರಿಗೆ ದಾನ ಮಾಡಿ' ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಅಧಿಕ ಮಾಸದ ಭಾಗವಾಗಿ 33 ಸಂಖ್ಯೆಯಲ್ಲಿ ಪದಾರ್ಥಗಳನ್ನು ದಾನವಾಗಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರದ 33 ಟಿಕೆಟ್ ದಾನ ಮಾಡುವಂತೆ ಮಧುಸೂದನ ಹವಲ್ದಾರ್ ಮತ್ತು ನಟ ಪ್ರಭಂಜನ ದೇಶಪಾಂಡೆ ಮನವಿ ಮಾಡಿದ್ದಾರೆ.