'ಡೇರ್ಡೆವಿಲ್ ಮುಸ್ತಫಾ ಸಿನ್ಮಾ ತುಂಬ ಚೆನ್ನಾಗೈತೆ, ಎಲ್ರೂ ಸಪೋರ್ಟ್ ಮಾಡಿ..'- ಶಾಸಕ ದರ್ಶನ್ ಪುಟ್ಟಣ್ಣಯ್ಯ
1572 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ 'ಡೇರ್ಡೆವಿಲ್ ಮುಸ್ತಫಾ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈಚೆಗಷ್ಟೇ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೂಡ ಮೈಸೂರಿನಲ್ಲಿ 'ಡೇರ್ಡೆವಿಲ್ ಮುಸ್ತಫಾ' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. 'ಡಾಲಿ' ಧನಂಜಯ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರೇಕ್ಷಕರ ಜೊತೆಗೆ 'ಡೇರ್ಡೆವಿಲ್ ಮುಸ್ತಫಾ' ಸಿನಿಮಾವನ್ನು ಮೈಸೂರಿನಲ್ಲಿ ನೋಡಿದರು. 'ಧನಂಜಯ ಅವರು 'ಡೇರ್ಡೆವಿಲ್ ಮುಸ್ತಫಾ' ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಒಂದೊಳ್ಳೆಯ ಅದ್ಭುತ ಕನ್ನಡ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇದರಲ್ಲಿ ಸಾಮಾಜದ ಸ್ವಾಸ್ತ್ಯ ಕಾಪಾಡಲು ಈ ರೀತಿಯ ಅದ್ಭುತವಾದ ಚಿತ್ರಗಳು ಬರಬೇಕು. ಒಂದು ಅದ್ಬುತ ಸಂದೇಶ ಸಾರುವ ಚಿತ್ರ ಇದಾಗಿದೆ. ಕುಟುಂಬ ಸಮೇತ ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ, ಸಿನಿಮಾ ನೋಡಿ' ಎಂದರು. ಇದೇ ವೇಳೆ ಪಾಂಡವಪುರದ ಸುತ್ತಮುತ್ತ ಇರುವ ಕ್ಯಾತನಹಳ್ಳಿ, ಅರಳುಕುಪ್ಪೆ, ಎಣ್ಣೆಹೊಳೆಕೊಪ್ಪಲು, ಶಣಬ ಹಳ್ಳಿಗಳಿಂದ ರೈತರು ಹಾಗೂ ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ ಎಲ್ ಕೆಂಪುಗೌಡ, ಕೆ ಟಿ ಗೋವಿಂದೇಗೌಡರು, ರಘು, ಮಂಜುನಾಥ್, ಶ್ರೀನಿವಾಸ್, ಉಗ್ರ ನರಸಿಂಹಗೌಡ, ಮೂರ್ತಿ ಮುಂತಾದವರು 'ಡೇರ್ಡೆವಿಲ್ ಮುಸ್ತಫಾ' ಸಿನಿಮಾ ನೋಡಿದರು.