'ಶ್ರೀರಸ್ತು ಶುಭಮಸ್ತು' ದತ್ತನ ತರ ನಾನು ನನ್ನ ಮನೆಯಲ್ಲಿ ಇದ್ದಿದ್ರೆ ನಮ್ಮನೆಯವರು ಓಡಸ್ತಿದ್ರು: ಎಂಪಿ ವೆಂಕಟರಾವ್
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ದತ್ತ ಪಾತ್ರ ನೋಡಿ ಅನೇಕರಿಗೆ ನಮ್ಮ ಮನೆಯಲ್ಲಿ ಕೂಡ ಇದೇ ರೀತಿ ತಾತ, ಇದೇ ರೀತಿಯ ಮಾವ ಇರಬೇಕು ಅಂತ ಅನಿಸುವುದು.ದತ್ತನ ಪಾತ್ರಕ್ಕೆ ನಟ ಎಂಪಿ ವೆಂಕಟರಾವ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಮದುವೆಯಾಗಿ ಸಂಗಾತಿಗಳನ್ನು ಕಳೆದುಕೊಂಡಿರುವ ತುಳಸಿ, ಮಾಧವರಿಬ್ಬರಿಗೂ ಮಕ್ಕಳಿದ್ದು ಅವರಿಗೆ ಮದುವೆಯಾಗಿದೆ. ಒಬ್ಬಂಟಿಗಳಾಗಿರುವ ತುಳಸಿ, ಮಾಧವ ಈಗ ಮದುವೆಯಾಗಿದ್ದಾರೆ. ಈ ವಯಸ್ಸಿನಲ್ಲಿ ಎರಡನೇ ಮದುವೆ ಆಗಿರೋದು ಸರಿಯೇ? ತಪ್ಪೇ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಎಂ ಪಿ ವೆಂಕಟರಾವ್ ಏನಂತಾರೆ?ಎರಡನೇ ಮದುವೆ, ವಿಧವಾ ವಿವಾಹ, ಸಮಾಜದಲ್ಲಿ ಹಾಕಿಕೊಂಡಿರುವ ಅಲಿಖಿತ ನಿಯಮ ಇವುಗಳ ಕುರಿತು ಹಿರಿಯ ನಟ ಎಂ ಪಿ ವೆಂಕಟರಾವ್ ಅವರು 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿದ್ದಾರೆ.ಈ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವನ ಪಾತ್ರದಲ್ಲಿ ಅಜಿತ್ ಹಂದೆ ನಟಿಸುತ್ತಿದ್ದಾರೆ.
ಎರಡನೇ ಮದುವೆಯನ್ನು ಕೆಲವರು ಒಪ್ಪಲ್ಲ, ಅದು ಅವರೇ ಹಾಕಿಕೊಂಡಿರೋ ಬೇಲಿ: 'ಶ್ರೀರಸ್ತು ಶುಭಮಸ್ತು' ಅಜಿತ್ ಹಂದೆ
ಎರಡನೇ ಮದುವೆಯನ್ನು ಕೆಲವರು ಒಪ್ಪಲ್ಲ, ಅದು ಅವರೇ ಹಾಕಿಕೊಂಡಿರೋ ಬೇಲಿ: 'ಶ್ರೀರಸ್ತು ಶುಭಮಸ್ತು' ಅಜಿತ್ ಹಂದೆ