ಪುನೀತ್ ರಾಜಕುಮಾರ್ ಸರ್ ಅವರು ಮಾಡುತ್ತಿದ್ದ ಸಹಾಯ ಹೇಳಿದ್ರೆ ಬೇಜಾರು ಮಾಡಿಕೊಳ್ತಿದ್ರು: ಪರಮೇಶ್ವರ್ ಗುಂಡ್ಕಲ್
1003 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಜೊತೆಗೆ ಪರಮೇಶ್ವರ್ ಗುಂಡ್ಕಲ್ ಸಾಕಷ್ಟು ರಿಯಾಲಿಟಿ ಶೋ ಮಾಡಿದ್ದಾರೆ. "'ಪವರ್ ಫ್ಯಾಮಿಲಿ', 'ಕನ್ನಡದ ಕೋಟ್ಯಧಿಪತಿ' ಶೋಗಳನ್ನು ಪುನೀತ್ ಸರ್ ಇಲ್ಲದೆ ಊಹಿಸಿಕೊಳ್ಳೋದು ಕಷ್ಟ. ಸದ್ಯ ಈ ಎರಡು ಶೋಗಳ ಯೋಚನೆಯನ್ನು ನಾನು ಕೈಬಿಟ್ಟಿದ್ದೇನೆ. ಪುನೀತ್ ಸರ್ ಸಾಕಷ್ಟು ಜನರಿಗೆ ಸಹಾಯ ಮಾಡಿರುವ ವಿಚಾರ ನನಗೆ ಗೊತ್ತಿತ್ತು, ಅದನ್ನೆಲ್ಲ ಹೇಳಿದ್ರೆ ಅವರು ಬೇಸರ ಮಾಡಿಕೊಳ್ಳುತ್ತಿದ್ದರು. 'ಪವರ್ ಫ್ಯಾಮಿಲಿ', 'ಕನ್ನಡದ ಕೋಟ್ಯಧಿಪತಿ' ಶೋಗಳಲ್ಲಿ ಭಾಗವಹಿಸಿ, ಹಣ ಗೆಲ್ಲದ ಸಾಕಷ್ಟು ಸ್ಪರ್ಧಿಗಳಿಗೆ ಪುನೀತ್ ಸರ್ ಹಣ ನೀಡಿದ್ದು ನನಗೆ ನನ್ನ ತಂಡದಿಂದ ಒಂದಷ್ಟು ದಿನಗಳ ನಂತರದಲ್ಲಿ ಗೊತ್ತಾಯ್ತು. ನಾನು ಪುನೀತ್ ಸರ್ ನಿರೂಪಣೆಯಲ್ಲಿ ಇನ್ನೊಂದೆರಡು 'ಕನ್ನಡದ ಕೋಟ್ಯಧಿಪತಿ' ಸೀಸನ್ ಮಾಡಲು ಕಾಂಟ್ರ್ಯಾಕ್ಟ್ ಕೂಡ ಆಗಿತ್ತು. ಪುನೀತ್ ಸರ್ ಇನ್ನು ಅನೇಕ ವರ್ಷ ಇರಬೇಕಿತ್ತು, ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
‘ಸ್ವಂತ ಮನೆ ತೆಗೆದುಕೊಳ್ಳಬೇಕು ಅಂತ ದುಡ್ಡು ಇಟ್ಟಿದ್ದೆ, ಅದನ್ನ ಅಪ್ಪುಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡ್ತೀನಿ’ - ವಿಶಾಲ್
‘ಸ್ವಂತ ಮನೆ ತೆಗೆದುಕೊಳ್ಳಬೇಕು ಅಂತ ದುಡ್ಡು ಇಟ್ಟಿದ್ದೆ, ಅದನ್ನ ಅಪ್ಪುಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡ್ತೀನಿ’ - ವಿಶಾಲ್