69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ; ಪತ್ನಿ ಜೊತೆಗೆ ದೆಹಲಿಗೆ ತೆರಳಿದ ಅಲ್ಲು ಅರ್ಜುನ್
1283 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿತೆಲುಗು ನಟ ಅಲ್ಲು ಅರ್ಜುನ್ ಅವರಿಗೆ 'ಪುಷ್ಪ' ಸಿನಿಮಾದ ಅಭಿನಯಕ್ಕಾಗಿ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿತ್ತು. ಇದೀಗ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 17ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಅದಕ್ಕಾಗಿ ಅಲ್ಲು ಅರ್ಜುನ್ ಅವರು ಪತ್ನಿ ಸ್ನೇಹಾ ರೆಡ್ಡಿ ಜೊತೆಗೆ ದೆಹಲಿಗೆ ತೆರಳಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದ್ದರೆ, 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಅಭಿನಯಕ್ಕಾಗಿ ಅಲಿಯಾ ಭಟ್ ಮತ್ತು 'ಮಿಮಿ' ಚಿತ್ರದ ಅಭಿನಯಕ್ಕಾಗಿ ಕೃತಿ ಸನೋನ್ ಅವರಿಗೆ 'ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ' ಘೋಷಣೆ ಆಗಿದ್ದವು. ಇನ್ನು, ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆಯುವುದರಲ್ಲಿ ಅಲ್ಲು ಅರ್ಜುನ್ ಅವರು ಹೊಸ ದಾಖಲೆ ಬರೆದಿದ್ದಾರೆ. ಹೌದು, ತೆಲುಗು ಚಿತ್ರರಂಗದ ಇತಿಹಾಸದಲ್ಲೇ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕಲಾವಿದ ಎಂಬ ಕೀರ್ತಿಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ತೆಲುಗು ಚಿತ್ರರಂಗ ಉದಯವಾಗಿ 90 ವರ್ಷ ಮೇಲಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲು ಆರಂಭಿಸಿ 69 ವರ್ಷಗಳಾಗಿವೆ. ಆದರೆ ಒಮ್ಮೆಯೂ ಟಾಲಿವುಡ್ನ ಯಾವ ನಟರಿಗೂ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ದಕ್ಕಿರಲಿಲ್ಲ. ಎನ್ಟಿ ರಾಮಾ ರಾವ್, ಸೂಪರ್ ಸ್ಟಾರ್ ಕೃಷ್ಣ, ಅಕ್ಕಿನೇನಿ ನಾಗೇಶ್ವರ ರಾವ್, ಚಿರಂಜೀವಿ, ಮೋಹನ್ ಬಾಬು, ನಾಗಾರ್ಜುನ ಹೀಗೆ ಅಪಾರ ಸಾಧನೆಗೈದ ಹಲವು ನಟರ ಕೊಡುಗೆ ತೆಲುಗು ಚಿತ್ರರಂಗಕ್ಕಿದೆ. ಆದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ತೆಲುಗು ಕಲಾವಿದರಿಗೆ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ದಕ್ಕಿರಲಿಲ್ಲ. ಆದರೆ ಕೊರತೆಯನ್ನು ಅಲ್ಲು ಅರ್ಜುನ್ ನೀಗಿಸಿದ್ದಾರೆ.