ಅಂಬಾನಿ ನಿವಾಸದ ಗಣಪತಿ ಹಬ್ಬದಲ್ಲಿ ರಶ್ಮಿಕಾ ಭಾಗಿ; 'ನ್ಯಾಷನಲ್ ಕ್ರಶ್' ಕಂಡ್ರೆ 'ಆ' ನಟಿಗೇಕೆ ಆಸಹನೆ?
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಈ ಬಾರಿ ಅದ್ದೂರಿಯಾಗಿ ವಿನಾಯಕ ಚತುರ್ಥಿಯನ್ನು ಆಚರಣೆ ಮಾಡಲಾಯಿತು. ವಿಶೇಷವೆಂದರೆ, ಈ ಬಾರಿ ಸಲ್ಮಾನ್ ಖಾನ್, ಶಾರುಖ್ ಖಾನ್ ಥರದ ಬಾಲಿವುಡ್ ತಾರೆಯರ ಜೊತೆಗೆ ದಕ್ಷಿಣ ಭಾರತದ ನಯನತಾರಾ, ನಿರ್ದೇಶಕ ಅಟ್ಲೀ, ನಟಿ ರಶ್ಮಿಕಾ ಮಂದಣ್ಣ ಮುಂತಾದ ಸೆಲೆಬ್ರಿಟಿಗಳು ಕೂಡ ಹಾಜರಿದ್ದರು. ಆದರೆ ಈ ಮಧ್ಯೆ ಕನ್ನಡದ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ನಟಿಯೊಬ್ಬರಿಂದ ಅವಮಾನ ಆಗಿದೆ ಎಂಬ ಮಾತು ಕೇಳಿಬಂದಿದೆ. ಹೌದು, ರಶ್ಮಿಕಾಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಮತ್ತು ರಶ್ಮಿಕಾ ಫ್ಯಾನ್ಸ್ ಆರೋಪಿಸಿದ್ದಾರೆ. ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಫೋಟೋ ಮತ್ತು ವಿಡಿಯೋಗಳನ್ನು ಕ್ಯಾಮೆರಾಮೆನ್ಗಳು ಚಿತ್ರೀಕರಿಸುತ್ತಿದ್ದರು. ಈ ವೇಳೆ ರಶ್ಮಿಕಾ ಬಂದಾಗ, 'ಶ್ರೀವಲ್ಲಿ ಶ್ರೀವಲ್ಲಿ..' ಎಂದು ಕೂಗುತ್ತ ಅವರ ಫೋಟೋಗಳನ್ನು ಕ್ಲಿಕ್ಕಿಸಿ, ಸಂಭ್ರಮಿಸಿದ್ದಾರೆ. ಅದೇ ವೇಳೆಗೆ ಅಲ್ಲಿಗೆ ಶ್ರದ್ಧಾ ಕಪೂರ್ ಕೂಡ ಬಂದರು. ಆಗ ಕೂಡಲೇ ಕ್ಯಾಮೆರಾಮೆನ್ಗಳು, 'ಶ್ರದ್ಧಾ ಶ್ರದ್ಧಾ..' ಎಂದು ಕೂಗಿದರು. ರಶ್ಮಿಕಾ ಕೂಡ ಶ್ರದ್ಧಾರನ್ನು ನೋಡಿ ಮುಗುಳ್ನಕ್ಕು, ಜೊತೆಗೆ ಪೋಸ್ ನೀಡಲು ರೆಡಿ ಆಗುತ್ತಿದ್ದರು. ರಶ್ಮಿಕಾ ಕಡೆಗೆ ಶ್ರದ್ಧಾ ತಿರುಗಿಯೂ ನೋಡಲಿಲ್ಲ, ಕ್ಯಾಮೆರಾಗಳಿಗೆ ಪೋಸ್ ಕೂಡ ನೀಡಲಿಲ್ಲ.ಆನಂತರ ರಶ್ಮಿಕಾ ಮುಂದೆ ಸಾಗಿದ ಮೇಲೆ, ಅಲ್ಲಿ ಅವರಿಗೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ ಎದುರಾದರು. ಇಬ್ಬರು ಕೂಡ ರಶ್ಮಿಕಾ ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ಅಪ್ಪುಗೆ ನೀಡಿದರು.