ನಟ ರಮೇಶ್ ಅರವಿಂದ್ಗೆ 'ಮಂತ್ರಾಲಯ ಪರಿಮಳ ಪ್ರಶಸ್ತಿ' ಪ್ರದಾನಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರತೀರ್ಥರ ಸಾನಿಧ್ಯದಲ್ಲಿ, ಸಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ 'ಮರಳಿ ಸಂಸ್ಕೃತಿಗೆ' ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಅವರಿಗೆ 'ಮಂತ್ರಾಲಯ ಪರಿಮಳ ಪ್ರಶಸ್ತಿ' ನೀಡಲಾಗಿದೆ. ಈ ಹಿಂದೆ 'ನಟಸಾರ್ವಭೌಮ' ಡಾ. ರಾಜಕುಮಾರ್, 'ಸೂಪರ್ ಸ್ಟಾರ್' ರಜನಿಕಾಂತ್, ಸುಧಾಮೂರ್ತಿ, 'ಹ್ಯಾಟ್ರಿಕ್ ಹೀರೋ' ಶಿವರಾಜಕುಮಾರ್, 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್, 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರಿಗೆ 'ಮಂತ್ರಾಲಯ ಪರಿಮಳ ಪ್ರಶಸ್ತಿ' ನೀಡಲಾಗಿತ್ತು. ಇದೀಗ ಈ ಬಾರಿ ನಟ ರಮೇಶ್ ಅರವಿಂದ್ ಅವರಿಗೆ ನೀಡಿ, ಗೌರವಿಸಲಾಗಿದೆ.