ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ವಸಿಷ್ಠ ಸಿಂಹ & ಹರಿಪ್ರಿಯಾ ದಂಪತಿ
1463 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟ ವಸಿಷ್ಠ ಸಿಂಹ ಅವರು ತಮ್ಮ ಪತ್ನಿ, ನಟಿ ಹರಿಪ್ರಿಯಾ ಜೊತೆಗೆ ಕರಾವಳಿ ಪ್ರವಾಸದಲ್ಲಿದ್ದಾರೆ. ಈಚೆಗಷ್ಟೇ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ನೆಲಭೋಜನ ಹರಕೆಯನ್ನು ತೀರಿಸಿದ್ದರು. ಇದೀಗ ಅವರು ಉಳ್ಳಾಲ ತಾಲೂಕಿನ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ, ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು ವಸಿಷ್ಠ ಸಿಂಹ, 'ಈ ಕ್ಷೇತ್ರದ ಬಗ್ಗೆ ತುಂಬ ಕೇಳಿದ್ದೆ. ಮದುವೆ ಬಳಿಕ ಇದು ನಮ್ಮ ಮೊದಲ ದಸರಾ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಮಂಗಳೂರಿಗೆ ಬಂದಮೇಲೆ ಈ ಕ್ಷೇತ್ರಕ್ಕೆ ಬರದೇ ಇರುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ವೈಶಿಷ್ಠ್ಯತೆಗಳನ್ನು ಕೇಳಿದಾಗ ಅಚ್ಚರಿ ಉಂಟಾಗುತ್ತದೆ. ಭಕ್ತಿ-ಭಾವ ಬರುತ್ತದೆ. ಎಲ್ಲರ ಮೇಲೂ ಕೊರಗಜ್ಜನ ಆಶೀರ್ವಾದ ಇರಲಿ. ದಾಂಪತ್ಯ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ತುಂಬ ಉತ್ತಮವಾದ ಘಟ್ಟ. ಬದುಕಿನ ಪರಿಪೂರ್ಣತೆ ಕಡೆಗೆ ಸಾಗಬೇಕೆಂದರೆ, ಗೃಹಸ್ಥಾಶ್ರಮ ಬಹಳ ಮುಖ್ಯ. ಬಯಸಿದ್ದು ಎಲ್ಲರಿಗೂ ಸಿಗೋದಿಲ್ಲ, ನಮಗೆ ಸಿಕ್ಕಿದೆ. ನನಗೆ ಕರಾವಳಿ ಜೊತೆಗೆ ಉತ್ತಮ ಒಡನಾಟ ಇದೆ. ನನ್ನ 'ಲವ್ಲೀ' ಸಿನಿಮಾವು ಕರಾವಳಿಯಲ್ಲೇ ಶೂಟಿಂಗ್ ಆಗಿದೆ' ಎಂದು ತಿಳಿಸಿದ್ದಾರೆ.