ಸಿಬಿಐ ಬಗ್ಗೆ ನಿರಾಶೆಯಾಗಿದೆ, ಹೋರಾಟ ಮುಂದುವರೆಸುತ್ತೇನೆ ಎಂದ ರಬಿಯಾ ಖಾನ್
1470 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ಕುರಿತ ಮಹತ್ವದ ತೀರ್ಪು ಇಂದು ಪ್ರಕಟವಾಗಿದೆ. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಸೂರಜ್ ಪಾಂಚೋಲಿ ನಿರಪರಾಧಿ ಎಂದಿದೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಲಾಗಿದೆ. ‘’ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿಯನ್ನ ಖುಲಾಸೆಗೊಳಿಸಲಾಗಿದೆ’’ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಎಎಸ್ ಸಯ್ಯದ್ ತಿಳಿಸಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ಜಿಯಾ ಖಾನ್ ತಾಯಿ ರಬಿಯಾ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘’ಸಾಕ್ಷಿ ಇಲ್ಲ ಅಂದ್ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪವನ್ನ ಯಾಕೆ ಮಾಡಿದ್ರು?’’ ಎಂದು ರಬಿಯಾ ಖಾನ್ ಪ್ರಶ್ನಿಸಿದ್ದಾರೆ. ಈ ವೇಳೆ, ‘’10 ವರ್ಷಗಳ ಬಳಿಕ ತೀರ್ಪು ಬಂದಿದೆ. ನಿರಾಶೆಯಾಯ್ತಾ?’’ ಎಂದು ಮಾಧ್ಯಮಗಳು ಕೇಳಿದಾಗ, ‘’ಸಿಬಿಐ ಬಗ್ಗೆ ನನಗೆ ನಿರಾಶೆಯಾಗಿದೆ. ಯಾವುದೇ ಸಾಕ್ಷಿಯನ್ನ ಅವರು ಪ್ರೊಡ್ಯೂಸ್ ಮಾಡಿಲ್ಲ. ನಾನೇ ಶ್ರಮಪಟ್ಟು ಒಂದೊಂದು ಎವಿಡೆನ್ಸ್ ಕಲೆಕ್ಟ್ ಮಾಡಿ, ಅವರ ಮುಂದೆ ಇಟ್ಟಿದ್ದೆ. ಅವರೇ ಶಾಕ್ ಆಗಿದ್ದರು. ನಾನು ಫೋರೆನ್ಸಿಕ್ ರಿಪೋರ್ಟ್ಸ್ ತಂದಿದ್ದೆ. ಮೂರ್ನಾಲ್ಕು ತಜ್ಞರ ರಿಪೋರ್ಟ್ಸ್ ನೀಡಿದ್ದೆ’’ ‘’ಜುಹು ಪೊಲೀಸರು ಸಿಬಿಐಗೆ ಸರಿಯಾಗಿ ಎವಿಡೆನ್ಸ್ ನೀಡಿಲ್ಲ. ಪ್ರಕರಣದ ಆಳಕ್ಕೆ ಇಳಿದು ಎವಿಡೆನ್ಸ್ ಕಲೆಕ್ಟ್ ಮಾಡುವುದು ಸಿಬಿಐನ ಡ್ಯೂಟಿ. ಆದರೆ ಸಿಬಿಐ ತನ್ನ ಕೆಲಸವನ್ನ ಸರಿಯಾಗಿ ಮಾಡಿಲ್ಲ. ಇದಕ್ಕೆ ಕಾರಣ ಏನು ಎನ್ನುವುದು ಅವರಿಗೇ ಚೆನ್ನಾಗಿ ಗೊತ್ತಿರಬೇಕು. ಆದರೆ, ನಾನು ಮಾತ್ರ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ಗೂ ಹೋಗುತ್ತೇನೆ’’ ಎಂದು ರಬಿಯಾ ಖಾನ್ ಹೇಳಿದರು.