ನಂಜನಗೂಡಿಗೆ ಬಂದ 'ರಾಕಿಂಗ್ ಸ್ಟಾರ್' ಯಶ್; ಶ್ರೀಕಂಠೇಶ್ವರನ ಆಶೀರ್ವಾದ ಪಡೆದ 'ರಾಕಿ ಭಾಯ್' ಕುಟುಂಬ
1409 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ರಾಕಿಂಗ್ ಸ್ಟಾರ್' ಯಶ್ ಅವರು ಸಿನಿಮಾ ಕೆಲಸಗಳ ಜೊತೆಗೆ ಫ್ಯಾಮಿಲಿಗೂ ಕೂಡ ತುಂಬ ಟೈಮ್ ಕೊಡ್ತಾರೆ. ಸದ್ಯ ಅವರು ಫ್ಯಾಮಿಲಿ ಸದಸ್ಯರ ಜೊತೆಗೆ ಪ್ರವಾಸದಲ್ಲಿದ್ದು, ದಕ್ಷಿಣದ ಕಾಶಿ ಎಂದು ಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ಶ್ರೀಕಂಠೇಶ್ವರ ದರ್ಶನ ಪಡೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಶ್ರೀಕಂಠೇಶ್ವರನ ಸನ್ನಿಧಿಗೆ ಆಗಮಿಸಿ ನಟ ಯಶ್ ಅವರು ತಮ್ಮ ಮಗಳ ಮುಡಿ ಕೊಡಿಸುವ ಹರಕೆ ಪೂರೈಸಿದ್ದರು. ಇದೀಗ ಮತ್ತೊಮ್ಮೆ ಕುಟುಂಬ ಸದಸ್ಯರ ಜೊತೆ ಆಗಮಿಸಿ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಯಶ್, ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜತೆಗೆ ರಾಧಿಕಾ ಅವರ ಪೋಷಕರು ಕೂಡ ಆಗಮಿಸಿದ್ದರು. ಸದ್ಯ ಯಶ್ ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದಾರೆ. ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಈಗ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ನಂಜನಗೂಡಿನ ಶ್ರೀಕಂಠೇಶ್ವರ, ಯಶ್ ಅವರ ಮನೆ ದೇವರಾಗಿದೆ. ಇನ್ನು, ದೇವಾಲಯಕ್ಕೆ ಆಗಮಿಸಿದ ಯಶ್ ಕುಟುಂಬವನ್ನು ದೇವಾಲಯ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು.