ಮೈಸೂರು ದಸರಾ ಉದ್ಘಾಟನೆಗೆ ಡಾ. ಮಂಜುನಾಥ್ರಿಗೆ ಅಧಿಕೃತ ಆಹ್ವಾನ
1010 views
ಕರ್ನಾಟಕ ವಿಡಿಯೋಗಳಿಗೆ ಚಂದಾದಾರರಾಗಿನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 17ರಂದು ಆರಂಭವಾಗಲಿರುವ ದಸರಾ ಮಹೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ನೇತೃತ್ವದಲ್ಲಿ ದಸರಾ ಸಮಿತಿ ಸದಸ್ಯರು ಉದ್ಘಾಟಕರಾದ ಡಾ. ಮಂಜುನಾಥ್ರಿಗೆ ಅಧಿಕೃತ ಆಹ್ವಾನ ನೀಡಿದರು. ಬೆಂಗಳೂರಿನ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಮೈಸೂರು ದಸರಾ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆರು ಮಂದಿ ಕೊರೋನಾ ವಾರಿಯರ್ಸ್ಗೆ ಸನ್ಮಾನವನ್ನೂ ಮಾಡಲಾಗುತ್ತದೆ. ಮೇಯರ್ ತಸ್ನಿಂ, ಸಂಸದ ಪ್ರತಾಪ್ ಸಿಂಹ, ಸಚಿವ ಎಸ್ಟಿ ಸೋಮಶೇಖರ್ ಮೊದಲಾದವರಿದ್ದ ನಿಯೋಗದ ಸದಸ್ಯರು ಜಯದೇವ ಆಸ್ಪತ್ರೆ ನಿರ್ದೇಶಕರ ಕಚೇರಿಯಲ್ಲಿ ಮಂಜುನಾಥ್ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, 'ಕುಟುಂಬ ಸಮೇತ ಆಗಮಿಸಿ ನಾಡಹಬ್ಬವನ್ನು ಉದ್ಘಾಟಿಸುವಂತೆ' ಆಹ್ವಾನ ನೀಡಿದರು.