ಇದೀಗ ತಾನೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ನೂತನ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಟ್ಟದಷ್ಟು ಸವಾಲುಗಳು ಸಜ್ಜಾಗಿ ನಿಂತಿವೆ. ನೂತನ ಸರ್ಕಾರಕ್ಕೆ ‘ಹನಿಮೂನ್ ಪಿರಿಯಡ್’ ಇರೋದೇ ಇಲ್ವಾ ಎಂಬ ಅನುಮಾನ ಮೂಡುವಂತಿದೆ. ಏಕೆಂದರೆ, ಮಳೆಗಾಲದ ನಿರ್ವಹಣೆ ಸರ್ಕಾರಕ್ಕೆ ಮೊದಲ ಸವಾಲು ಆಗಲಿದೆ. ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಸುಗಮ ಆಡಳಿತದ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜನ ಮನ ಗೆಲ್ಲುವತ್ತ ಕಾಂಗ್ರೆಸ್ ಪಕ್ಷ ಈಗಿನಿಂದಲೇ ಗಮನ ಹರಿಸಬೇಕಾಗಿದೆ.